ಸಾಡೇಸಾತಿ

*ಇದು ಏಳೂವರೆ ವರ್ಷ ಕಾಡುವ ಶನಿ ತುಂಬಾ ಕಾಡುವವರನ್ನು ಕಂಡಾಗ, ಇದೆಲ್ಲಿ ಸಾಡೇಸಾತಿ ಗಂಟುಬಿತ್ತಪ್ಪ ಎಂದು ಉದ್ಗಾರ ತೆಗೆಯುತ್ತೇವೆ. ಈ ಸಾಡೇಸಾತಿಯಿಂದ ತಪ್ಪಿಸಿಕೊಂಡರೆ ಸಾಕು ಎಂದೋ, ಈ ಸಾಡೇಸಾತಿ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ ಎಂದೋ ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಏನಿದು ಸಾಡೇಸಾತಿ? ಏಳೂವರೆ ಎಂದರೆ ಸಾಡೇಸಾತಿ. ಗ್ರಹಗಳಲ್ಲಿ ಶನಿ ವಕ್ರಗ್ರಹ ಎಂಬ ಖ್ಯಾತಿ ಇದೆ. ಯಾರದಾದರೂ ರಾಶಿಯಲ್ಲಿ ಶನಿಯ ಪ್ರವೇಶವಾದರೆ ಅವರಿಗೆ ಕಷ್ಟಗಳು ಪ್ರಾರಂಭವಾಗುತ್ತವೆ ಎಂಬ ನಂಬಿಕೆ ಇದೆ. ಈ ಶನಿಯು ಏಳೂವರೆ ವರ್ಷ ಕಾಡುವನಂತೆ....

ಸವ್ಯಸಾಚಿ

*ಎರಡೂ ಕೈಯಿಂದ ಬಾಣ ಬಿಡುವವನು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲವನನ್ನು, ಎರಡೆರಡು ವಿಷಯಗಳಲ್ಲಿ ಸಮಾನ ಪರಿಣತಿಯನ್ನು ಹೊಂದಿದವನನ್ನು ಕಂಡಾಗ ಸವ್ಯಸಾಚಿ ಎಂದು ಅವನನ್ನು ಕರೆಯುವುದಿದೆ. ಮಹಾಭಾರತದಲ್ಲಿ ಅರ್ಜುನನ್ನು ಸವ್ಯಸಾಚಿ ಎಂದು ಕರೆಯಲಾಗಿದೆ. ಅರ್ಜುನ ಎರಡೂ ಕೈಯಿಂದ ಗಾಂಡೀವ ಧನುಸ್ಸಿನಲ್ಲಿ ಬಾಣವನ್ನು ಹೂಡಿ ಪ್ರಯೋಗಿಸಬಲ್ಲವನಾಗಿದ್ದ. ಅದೊಂದು ಅಪರೂಪದ ಕೌಶಲ್ಯ. ಸವ್ಯ ಎಂದರೆ ಎಡ, ಬಲ, ತಿರುಗು ಮುರುಗು ಎಂಬ ಅರ್ಥಗಳಿವೆ. ಸವ್ಯ ಅಪಸವ್ಯ ಪದಗಳನ್ನು ಅಪರಕರ್ಮದಲ್ಲಿ ಪ್ರಯೋಗಿಸುತ್ತಾರೆ. ಸವ್ಯಕ್ಕೇ ಎಡ ಬಲ ಎಂಬ ಅರ್ಥಗಳಿದ್ದರೂ ಅಲ್ಲಿ ಸವ್ಯವನ್ನು ಕೇವಲ...

ಸರ್ಪಗಾವಲು

*ಕಟ್ಟುನಿಟ್ಟಾದ ಎಚ್ಚರಿಕೆಯ ಕಾವಲು ಏನೋ ಗಲಾಟೆಯಾಗುತ್ತದೆ. ಯಾವುದೋ ಕಾರಣಕ್ಕೆ ಬಂದೋಬಸ್ತಿಯನ್ನು ಏರ್ಪಡಿಸಬೇಕಾಗುತ್ತದೆ. ಆಗ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ದುಷ್ಕರ್ಮಿಗಳು ನುಸುಳದಂತೆ ಪಹರೆ ಕಾಯುತ್ತಾರೆ. ಆ ಕಾವಲನ್ನು ಕುರಿತು, ಪೊಲೀಸರು ಸರ್ಪಗಾವಲು ಏರ್ಪಡಿಸಿದ್ದರು ಎಂದು ಹೇಳುವುದನ್ನು ಕೇಳಿದ್ದೇವೆ. ಸರ್ಪಗಾವಲು ಎಂದರೆ ಕಟ್ಟುನಿಟ್ಟಿನ, ಅತ್ಯಂತ ಎಚ್ಚರಿಕೆಯ ಕಾವಲು ಎಂದರ್ಥ. ಸರ್ಪದ ಕಾವಲು ಅತ್ಯಂತ ಎಚ್ಚರಿಕೆಯದೆ? ಸರ್ಪವೆಂದರೆ ವಿಷದ ಪ್ರಾಣಿ. ಅದರ ಹತ್ತಿರ ಹೋಗುವುದಕ್ಕೇ ಜನ ಭಯ ಬೀಳುತ್ತಾರೆ. ಸರ್ಪದ ಇರುವೇ ಭದ್ರತೆಯನ್ನು ಒದಗಿಸುತ್ತದೆ. ಸರ್ಪ ನಿಧಿಯನ್ನು...

ಸ್ಮಶಾನ ವೈರಾಗ್ಯ

*ಶಾಶ್ವತವಲ್ಲ ಈ ವೈರಾಗ್ಯ ಏಕೆ ಇವೆಲ್ಲ ಬೇಕಾಗಿತ್ತ? ನನಗೆ ಇವುಗಳಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನೀಗ ಎಲ್ಲವನ್ನೂ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳುವ ಮಾತನ್ನು ನಾವು ಕೇಳಿಸಿಕೊಂಡಿದ್ದೇವೆ. ಇದೇ ವ್ಯಕ್ತಿಗಳು ತಮ್ಮ ಈ ಹೇಳಿಕೆಗೆ ವಿರುದ್ಧವಾಗಿ ಸಂಪೂರ್ಣ ಆಸಕ್ತರಾಗಿ ವರ್ತಿಸಿದ್ದನ್ನೂ ನೋಡಿದ್ದೇವೆ. ಇಂಥ ಉಲ್ಟಾ ಪಲ್ಟಾ ಜನರನ್ನು ನೋಡಿದಾಗ ಇವರದು ಸ್ಮಶಾನ ವೈರಾಗ್ಯ ಎಂದು ಹಾಸ್ಯ ಮಾಡಿದ್ದರೂ ಮಾಡಿರಬಹುದು ನೀವು. ಏನಿದು ಸ್ಮಶಾನ ವೈರಾಗ್ಯ? ಹೆಣವನ್ನು ಸುಡುವುದಕ್ಕೆ ಸ್ಮಶಾನಕ್ಕೆ ಒಯ್ಯುತ್ತಾರೆ. ಸುಡಲು ಹೋದವರಲ್ಲಿ ಒಂದು ರೀತಿಯ ವೈರಾಗ್ಯ ಮೂಡುತ್ತದೆ....

ಶಂಖದಿಂದ ಬಂದದ್ದು ತೀರ್ಥ

*ದಂಡನಾಧಿಕಾರದಿಂದ ಬರುವ ಮಾತು ತೀರ್ಥ ಪವಿತ್ರ ಜಲ. ಜಲಕ್ಕೆ ಪಾವಿತ್ರ್ಯ ಹೇಗೆ ಬರುತ್ತದೆ? ಗಂಗಾನದಿಯನ್ನು ದೇವನದಿ ಎಂದು ಕರೆಯುತ್ತಾರೆ. ಹೀಗಾಗಿ ಗಂಗಾಜಲ ಪವಿತ್ರ ಜಲವಾಗುತ್ತದೆ. ಅದು ತೀರ್ಥವೂ ಆಗುತ್ತದೆ. ನಮ್ಮಲ್ಲಿ ಎಲ್ಲ ನದಿಗಳನ್ನೂ ಪವಿತ್ರ ಎಂದೇ ಭಾವಿಸಲಾಗುತ್ತದೆ. ಝರಿಗಳನ್ನು ತೀರ್ಥ ಎನ್ನುತ್ತೇವೆ. ರಾಮತೀರ್ಥ, ಲಕ್ಷ್ಮಣ ತೀರ್ಥ, ಅಗಸ್ತ್ಯ ತೀರ್ಥ ಇತ್ಯಾದಿ. ಇನ್ನು ಸಾಮಾನ್ಯ ಬಾವಿಯ ನೀರು ತೀರ್ಥದ ಮಟ್ಟಕ್ಕೆ ಏರುವುದು ಯಾವಾಗ? ಇದಕ್ಕೆ ನಮ್ಮ ಶಾಸ್ತ್ರದಲ್ಲಿ ಉಪಾಯಗಳಿವೆ. ಬಾವಿಯ ನೀರನ್ನು ಶಂಖದ ಮೂಲಕ ಹಾಯಿಸಿದಾಗ ಅದು ತೀರ್ಥವಾಗುತ್ತದೆ....

ಶೇಕಮಾಮನ ಕನಸು

*ತಳವೇ ಇಲ್ಲದೆ ಗಾಳಿಯಲ್ಲಿ ಗೋಪುರ ಕಟ್ಟುವವರು ನಿರ್ದಿಷ್ಟ ಗುರಿಯಿಲ್ಲದೆ ಹಗಲುಗನಸು ಕಾಣುವವರನ್ನು ಶೇಕಮಾಮನ ಹಾಗೆ ಕನಸು ಕಾಣಬೇಡ ಎಂದು ಎಚ್ಚರಿಸುವ ಹಿರಿಯರು ಕರಾವಳಿ ಭಾಗದಲ್ಲಿದ್ದಾರೆ. ಎಲ್ಲವೂ ದೈವ ಲೀಲೆ, ನಮ್ಮದೇನಿದೆ ಎಂದು ಸ್ವಪ್ರಯತ್ನವನ್ನು ಬಿಟ್ಟುಬಿಡುವವರು, ಎಲ್ಲವನ್ನೂ ಮಾಡಿ ಎಲ್ಲ ಕಡೆಯೂ ಸೋಲನ್ನೇ ಕಂಡವರು ಅದ್ಯಾವುದೋ ಕಾಣದ ಶಕ್ತಿ ಬಂದು ನಮ್ಮನ್ನು ಉದ್ಧಾರ ಮಾಡುತ್ತದೆ ಎಂದುಕೊಳ್ಳುತ್ತಾರೆ. ಇವರೆಲ್ಲ ಈ ಶೇಕಮಾಮನ ಸಂಬಂಧಿಗಳೋ ದಾಯಾದಿಗಳೋ ಆಗಿರುತ್ತಾರೆ. ಒಂದೂರಿನಲ್ಲಿ ಈ ಶೇಕಮಾಮ ಎನ್ನುವವನಿದ್ದನಂತೆ. ಸಂತೆಗೆ ಎಣ್ಣೆಯನ್ನು ಗಡಿಗೆಯಲ್ಲಿ ತುಂಬಿಕೊಂಡು ತಲೆಯ ಮೇಲೆ...

ಶುಕ್ರದೆಸೆ

*ಈ ದೆಸೆ ಬಂದವರಿಗೆ ಬರೀ ಸುಖ ಯಾರಿಗಾದರೂ ಸುಖ ಸಮೃದ್ಧಿ ಅತಿಯಾಗಿ ಬಂದರೆ ಅವರನ್ನು ಕಂಡು ಅವನಿಗೆ ಶುಕ್ರದೆಸೆ ತಿರುಗಿದೆ ಎಂದು ಹೇಳುತ್ತಾರೆ. ಶುಕ್ರ ಭೃಗು ಮುನಿಯ ಪುತ್ರ. ರಾಕ್ಷಸರ ಗುರು. ಗ್ರಹಗಳ ರಾಶಿಯಲ್ಲಿ ಶುಕ್ರನಿಗೂ ಸ್ಥಾನವಿದೆ. ಶುಕ್ರ ಸಂಪತ್ತು, ಸಮೃದ್ಧಿ, ಸಂತಾನದ ಪ್ರತೀಕ. ಯಾರ ರಾಶಿಯಲ್ಲಿ ಶುಕ್ರನ ಬಲ ಇರುತ್ತದೋ ಅವರಿಗೆ ಸಂಪತ್ತು ಸಿದ್ಧಿಸಿರುತ್ತದೆ. ಪ್ರತಿಯೊಬ್ಬರ ಕುಂಡಲಿಯಲ್ಲಿ ಬೇರೆಬೇರೆ ಗ್ರಹಗಳ ದೆಸೆ ನಡೆಯುತ್ತದೆ. ಶುಕ್ರದೆಸೆಯು ಇಪ್ಪತ್ತು ವರ್ಷಗಳ ಕಾಲ ನಡೆಯುವುದು. ಶುಕ್ರ ಇದ್ದ ಅವಧಿಯಲ್ಲಿ ಅವರಿಗೆ...

ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಹಾಗೆ

*ಶಿವಪೂಜೆಯಲ್ಲಿ ಕರಡಿ ಬಂದ ಹಾಗೆ ಅನ್ನುವುದು ತಪ್ಪು ಶಿವಪೂಜೆಯನ್ನು ಎರಡು ರೀತಿಯಲ್ಲಿ ಮಾಡುತ್ತಾರೆ. ಒಂದು ಸ್ಥಾವರ ಲಿಂಗ ಪೂಜೆ, ಇನ್ನೊಂದು ಇಷ್ಟಲಿಂಗ ಪೂಜೆ. ಇಷ್ಟಲಿಂಗ ಪೂಜೆಯನ್ನು ವೀರಶೈವರು ರೂಢಿಗೆ ತಂದರು. ಅವರಲ್ಲಿ ಲಿಂಗದೀಕ್ಷೆ ಕೊಡುತ್ತಾರೆ. ಲಿಂಗಧಾರಣೆ ಮಾಡಿದ ವ್ಯಕ್ತಿಯ ಕೊರಳಲ್ಲಿ ಒಂದು ಕರಡಿಗೆಯಲ್ಲಿ ಇಷ್ಟಲಿಂಗವು ಇರುತ್ತದೆ. ಪೂಜೆಯ ವೇಳೆಯಲ್ಲಿ ಅದನ್ನು ತೆಗೆದು ಅಂಗೈ ಮೇಲೆ ಪ್ರತಿಷ್ಠಾಪಿಸಿಕೊಂಡು ಪೂಜೆಯನ್ನು ಮಾಡುತ್ತಾರೆ. ಇಂಥ ಲಿಂಗಪೂಜೆಯ ವೇಳೆಯಲ್ಲಿ ಕರಡಿಗೆಯನ್ನೇ ಮರೆತರೆ ಪೂಜೆಯನ್ನು ಮಾಡುವುದು ಹೇಗೆ? ಯುದ್ಧಭೂಮಿಗೆ ತೆರಳಬೇಕಾದ ಸೈನಿಕ ಶಸ್ತ್ರಾಸ್ತ್ರಗಳನ್ನು ಒಯ್ಯದೆ...

ವನವಾಸ

*ಬಹಳ ಕಷ್ಟಪಡುವುದು ಹಗಲೂ ರಾತ್ರಿ ದುಡಿದ, ಎಷ್ಟೋ ಕಷ್ಟಪಟ್ಟ, ಆದ್ರೂ ಅವನ ವನವಾಸ ತಪ್ಪಲಿಲ್ಲ, ಅವನಿಗೆ ವನವಾಸ ತಪ್ಪಲಿಲ್ಲ, ಇಷ್ಟು ದಿನ ವನವಾಸದಲ್ಲಿದ್ದ, ಈಗ ಅವನಿಗೆ ಸೂಕ್ತ ಸ್ಥಾನ ದೊರೆತಿದೆ ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ. ಇದನ್ನೆಲ್ಲ ನೋಡಿದಾಗ, ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕೆ ಯೋಗ್ಯನಿರುತ್ತಾನೆ. ಆದರೆ ಕಾರಣಾಂತರಗಳಿಂದ ಅದರಿಂದ ವಂಚಿತನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎರಡು ಪ್ರಸಿದ್ಧ ವನವಾಸಗಳಿವೆ. ಅವೆರಡೂ ನಮ್ಮ ಎರಡು ಮಹಾಕಾವ್ಯಗಳಲ್ಲಿ ಮಹತ್ವದ ಭಾಗವಾಗಿ ಬಂದಿವೆ. ಒಂದು ರಾಮಾಯಣದ ಶ್ರೀರಾಮನ ವನವಾಸ,...

ಲೈಲಾ ಮಜ್ನು

*ಅಖಂಡ ಪ್ರೇಮಿಗಳ ಪ್ರತೀಕ ಇವರು ಪ್ರೇಮ ಒಂದು ವಿಚಿತ್ರ ರೋಗ. ಈ ರೋಗ ಹತ್ತಿತು ಎಂದರೆ ವಾಸಿಯಾಗುವುದಕ್ಕೆ ಹಲವು ವರ್ಷಗಳೇ ಬೇಕು. ಈ ರೋಗ ತೀವ್ರವಾಗಿ ಸತ್ತವರೂ ಇದ್ದಾರೆ. ಪ್ರೇಮಜ್ವರ ತೀವ್ರವಾಗಿ ಜೀವ ಕೊಟ್ಟ ಪಾತ್ರಗಳಲ್ಲಿ ಲೈಲಾ ಮತ್ತು ಮಜ್ನು ಜಗದ್ವಿಖ್ಯಾತರು. ಇವರು ಇತಿಹಾಸ ಪುರುಷರೇನಲ್ಲ. ಹಾಶ್ಮೀತ್‌ ಶಾ ಎನ್ನುವವರು ಬರೆದ ಕತೆಯ ಪಾತ್ರಗಳು ಈ ಲೈಲಾ ಮಜ್ನು. ಮಜ್ನು ನಾಜಿದ್‌ನ ದೊರೆ ಓಮರ್‌ನ ಮಗ. ಆತನನ್ನು ಆರನೆ ವರ್ಷಕ್ಕೆ ಒಂದು ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆತ...