ಕ್ಷಯ

ಕಾದಂಬರಿ ಬರೆಹಗಾರನ ಬಿನ್ನವತ್ತಳೆ ಸೃಜನಶೀಲ ವ್ಯಕ್ತಿಯೊಬ್ಬನ ಸವಾಲುಗಳು ಉಳಿದವರ ಸವಾಲುಗಳಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ಸೃಜನಶೀಲ ವ್ಯಕ್ತಿ ಪರಿಭಾವಿಸುತ್ತಾನೆ. ಚಿಂತಿಸುತ್ತಾನೆ. ನೊಂದುಕೊಳ್ಳುತ್ತಾನೆ. ಉಸಿರುಕಟ್ಟಿದವನಂತೆ ಚಡಪಡಿಸುತ್ತಾನೆ. ಏಕಕಾಲದಲ್ಲಿ ಖಾಸಗಿಯಾಗಿಯೂ ಸಾರ್ವಜನಿಕವಾಗಿಯೂ ವರ್ತಿಸಬೇಕಾದ ಜವಾಬ್ದಾರಿ ಅವನ ಮೇಲಿರುತ್ತದೆ. ಈ ಕಾರಣಕ್ಕಾಗಿಯೇ ಅವನು ಇತರರಿಂದ ಭಿನ್ನವಾಗಿರುತ್ತಾನೆ.ಇದನ್ನೇ ಒಂದು ಚಿಕ್ಕ ಉದಾಹರಣೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ರಸ್ತೆ ಬದಿಯಲ್ಲಿ ಒಂದು ಮಾವಿನ ಮರ ಇದೆ. ಅದಕ್ಕೊಬ್ಬ ಮಾಲೀಕನೂ ಇದ್ದಾನೆ. ಅವನೊಬ್ಬ ಸಾಮಾನ್ಯ ವ್ಯಕ್ತಿ. ಆ ಮಾವಿನ ಮರದ ಬಗ್ಗೆ ಆತನ ಆಲೋಚನೆಗಳು, ಅದು ಬಿಡುವ ಹಣ್ಣು...

ಇರುವುದೆಲ್ಲವ ಬಿಟ್ಟು ಇರದುದರತ್ತ…..

ಡಾ.ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯ ಕುರಿತು ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿ ಕೃತಿ ರಚನೆಯಲ್ಲಿ ತೊಡಗಿರುವವರಲ್ಲಿ ಡಾ.ನಾ ಮೊಗಸಾಲೆಯವರು ಮೊದಲ ಶ್ರೇಣಿಯಲ್ಲಿ ನಿಲ್ಲುತ್ತಾರೆ. ನಾನು ಕಳೆದ ಒಂದೂವರೆ ದಶಕದಿಂದ ಡಾ.ನಾ.ಮೊಗಸಾಲೆಯವರು ರಚಿಸಿದ ಎಲ್ಲ ಕೃತಿಗಳನ್ನೂ ಬಹುತೇಕ ಓದಿದ್ದೇನೆ. ಕಾಂತಾವರದಲ್ಲಿ ಕುಳಿತು ಕನ್ನಡ ಕಟ್ಟುವ ಕೆಲಸವನ್ನು ಅವರು ಬಹಳ ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ಅವರ ಪರಿಸರದಲ್ಲಿ ಬಹಳಷ್ಟು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳು ನಡೆದಿವೆ. ಇವುಗಳಲ್ಲಿ ಮೊಗಸಾಲೆಯವರು ಬಹಿರಂಗದಲ್ಲಿ ಯಾವುದೇ ಚಳವಳಿಯಲ್ಲಿ ಕಾಣಿಸಿಕೊಂಡು...

ತೀರ್ಪು

ಭಾಗ 1.ಬೆಡಗು ಅವಳು ಸತ್ತಳಂತೆ' ಅವ್ವ ಹೇಳಿದಳು. ನನಗೇ ಹೇಳಿದಳು ಅಂದುಕೊಂಡೆ ನಾನು. ಮತ್ತೆ ಮತ್ತೆ ಅದನ್ನೇ ಅವ್ವ ಪುನರಾವರ್ತಿಸಿದಾಗ ನನಗೆ ಅನುಮಾನ. ಅವಳು ಹೇಳಿದ್ದು ನನಗಲ್ಲ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಳೆ ಎನ್ನುವುದು ನನಗೆ ಖಾತ್ರಿಯಾಯಿತು. ಧ್ವನಿಯಲ್ಲಿ ದುಃಖವಿತ್ತೆ, ಎಲ್ಲವೂ ಸರಿಹೋಯಿತು ಎಂಬ ಸಮಾಧಾನವಿತ್ತೆ ಒಂದೂ ಗೊತ್ತಾಗದೆ ತಬ್ಬಿಬ್ಬಾದೆ. ಅವ್ವ, ಸತ್ತದ್ದು ಯಾರು?’ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅವ್ವನ ಕಿವಿಯ ಮೇಲೆ ಬಿದ್ದಂತೆ ನನಗೆ ತೋರಲಿಲ್ಲ. ಅವಳು ತನ್ನದೇ ಲೋಕದಲ್ಲಿ ಗರ್ಕಾಗಿದ್ದಳು. ಮೆರೆಯವುದಕ್ಕೂ ಒಂದು ಲೆಕ್ಕ...