ಕಾದಂಬರಿ

ಕ್ಷಯ

ಕಾದಂಬರಿ ಬರೆಹಗಾರನ ಬಿನ್ನವತ್ತಳೆ ಸೃಜನಶೀಲ ವ್ಯಕ್ತಿಯೊಬ್ಬನ ಸವಾಲುಗಳು ಉಳಿದವರ ಸವಾಲುಗಳಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ಸೃಜನಶೀಲ ವ್ಯಕ್ತಿ ಪರಿಭಾವಿಸುತ್ತಾನೆ. ಚಿಂತಿಸುತ್ತಾನೆ. ನೊಂದುಕೊಳ್ಳುತ್ತಾನೆ. ಉಸಿರುಕಟ್ಟಿದವನಂತೆ ಚಡಪಡಿಸುತ್ತಾನೆ. ಏಕಕಾಲದಲ್ಲಿ ಖಾಸಗಿಯಾಗಿಯೂ ಸಾರ್ವಜನಿಕವಾಗಿಯೂ ವರ್ತಿಸಬೇಕಾದ ಜವಾಬ್ದಾರಿ ಅವನ ಮೇಲಿರುತ್ತದೆ. ಈ ಕಾರಣಕ್ಕಾಗಿಯೇ ಅವನು ಇತರರಿಂದ ಭಿನ್ನವಾಗಿರುತ್ತಾನೆ.ಇದನ್ನೇ ಒಂದು ಚಿಕ್ಕ ಉದಾಹರಣೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ರಸ್ತೆ ಬದಿಯಲ್ಲಿ ಒಂದು ಮಾವಿನ ಮರ ಇದೆ. ಅದಕ್ಕೊಬ್ಬ ಮಾಲೀಕನೂ ಇದ್ದಾನೆ. ಅವನೊಬ್ಬ ಸಾಮಾನ್ಯ ವ್ಯಕ್ತಿ. ಆ ಮಾವಿನ ಮರದ ಬಗ್ಗೆ ಆತನ ಆಲೋಚನೆಗಳು, ಅದು ಬಿಡುವ ಹಣ್ಣು...

ಬಲೆ

ಕಾದಂಬರಿ ಬಲೆ ನಾನು ಬರೆದ ಮೊದಲ ಕಾದಂಬರಿ. ಎಂ.ಎ. ಅಂತಿಮ ವರ್ಷದಲ್ಲಿ ಸೃಜನ ಸಾಹಿತ್ಯದ ಪತ್ರಿಕೆಗೆ ಡೆಸರ್ಟೇಷನ್‌ಗಾಗಿ ಬರೆದ ಕಾದಂಬರಿ ಇದು. ನಮ್ಮ ಗುರುಗಳಾಗಿದ್ದ ಡಾ.ಬುದ್ದಣ್ಣಹಿಂಗಮಿರೆಯವರ ಪ್ರೋತ್ಸಾಹ ಇದಕ್ಕೆ ಕಾರಣ. ನಮ್ಮ ಗುರುಗಳೂ ಮತ್ತು ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎಂ.ಎಂ. ಕಲಬುರ್ಗಿಯವರೂ ಇದನ್ನು ಮೆಚ್ಚಿಕೊಂಡಿದ್ದರು.. ಇದು 1984ರಲ್ಲಿ. ನಂತರ ಇದನ್ನು ಹೊನ್ನಾವರ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದ ಜಿ.ಎಸ್. ಅವಧಾನಿಯವರ ಸಹಾಯದಿಂದ, ಹಿರಿಯ ಪತ್ರಕರ್ತ ಜಿ.ಯು.ಭಟ್‌ ಅವರ ಪ್ರೋತ್ಸಾಹದಿಂದ ಕರಾವಳಿ ಗ್ರಾಮವಿಕಾಸ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ನಂತರ ಇದನ್ನು...