ವೈಚಾರಿಕ ಲೇಖನ

ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ

ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ನಿಧನರಾಗಿ ಬಹು ದಿನಗಳಾಗಿಹೋದವು. ಅವರ ನಿಧನದೊಂದಿಗೆ ರಾಷ್ಟ್ರಕವಿ ಎಂಬ ಗೌರವ ಹಾಗೆಯೇ ಉಳಿದುಬಿಟ್ಟಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದ್ದಾರೆ. ಎಂ.ಗೋವಿಂದಪೈಯವರು ಮದ್ರಾಸ್ ಸರ್ಕಾರದಿಂದ ರಾಷ್ಟ್ರಕವಿ ಗೌರವವಕ್ಕೆ ಪಾತ್ರರಾಗಿದ್ದರು. ಅವರ ಬಳಿಕ ಕುವೆಂಪು ಅವರು ಕರ್ನಾಟಕ ಸರ್ಕಾರದಿಂದಲೇ ರಾಷ್ಟ್ರಕವಿಯಾದರು. ಅವರ ನಿಧನದ ಬಳಿಕ ಜಿ.ಎಸ್.ಶಿವರುದ್ರಪ್ಪನವರಿಗೆ ಆ ಗೌರವ ಬಂತು. ಈಗ ಅವರೂ ನಿಧನರಾಗಿದ್ದಾರೆ. ಈಗ ಆ ಗೌರವವನ್ನು ಯಾರಿಗೆ ನೀಡಬೇಕು? ಇದು ಇನ್ನೂ ಸಾರ್ವಜನಿಕರ ಚರ್ಚೆಯ ವಿಷಯವಾಗಿಲ್ಲ. ನಮ್ಮಲ್ಲಿ...

ಗುಡಿಗಾರ ನೀಲಿ

ಗುಡಿಗಾರರು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿರುವ ಕುಶಲಕರ್ಮಿಗಳು. ಕಟ್ಟಿಗೆಯಲ್ಲಿ ಕುಸುರಿಕಲೆಯನ್ನು ಅರಳಿಸುವುದರಲ್ಲಿ ಅವರು ಎತ್ತಿದ ಕೈ. ಗುಡಿಗಾರರ ಶ್ರೀಗಂಧದ ಕೆತ್ತನೆ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧವಾದದ್ದು. ಗಣೇಶನ ಹಬ್ಬದ ಸಮಯದಲ್ಲಿ ಅವರು ಗಣೇಶನ ಮಣ್ಣಿನ ಮೂರ್ತಿಗಳನ್ನೂ ಮಾಡುತ್ತಾರೆ. ಎಲ್ಲೆಡೆ ಈಗ ಗಣೇಶನ ಅಚ್ಚುಗಳು ಸಿದ್ಧವಾಗಿ ಗಣೇಶನ ಮೂರ್ತಿ ತಯಾರಿಸುವುದು ಸುಲಭ ಎನ್ನುವಂತಾಗಿದೆ. ಆದರೆ ಈ ಗುಡಿಗಾರರು ಯಾವುದೇ ಅಚ್ಚನ್ನು ಬಳಸದೆಯೇ ವೈವಿಧ್ಯಮಯ ಮೂರ್ತಿಗಳನ್ನು ಮಾಡುವುದರಲ್ಲಿ ಪ್ರಖ್ಯಾತರು. ಇಂಥ ಗುಡಿಗಾರರು ಗಣೇಶನ ಮೂರ್ತಿಗೆ ಬಣ್ಣ ಬಳಿಯುವಾಗ ಆ ಬಣ್ಣ ಸರಿಯಾಗಿ...

ಫ್ಯೂಡಲಿಸ್ಟ್ ಇಂಡಿಯಾ ಮತ್ತು ಬದಲಾವಣೆಯ ಕನಸು

ನನಗಾದ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿದೆ. ದ್ವಿತೀಯ ಪಿಯುಸಿ ಮಕ್ಕಳಿಗೆ ವೃತ್ತಿಶಿಕ್ಷಣದ ಕೌನ್ಸಿಲಿಂಗನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವುದು ಸರಿಯಷ್ಟೆ. ಇಲ್ಲಿ ಮಕ್ಕಳು ಕೌನ್ಸೆಲಿಂಗ್ ಸಮಯದಲ್ಲಿ ಸಲ್ಲಿಸುವ ಪ್ರಮಾಣಪತ್ರಗಳ ಝರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಸಹಿಮಾಡಿಸಬೇಕು ಎಂಬ ನಿಯಮ ಮಾಡಿದ್ದಾರೆ. ಈ ರೀತಿ ಸಹಿಮಾಡಿಸಿಕೊಳ್ಳಲು ಪತ್ರಾಂಕಿತ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಮಕ್ಕಳೋ ಅವರ ಹೆತ್ತವರೋ ಹೋಗಬೇಕಾಗುತ್ತದೆ. ಅಲ್ಲಿ ಅವರು ಕಚೇರಿಯಲ್ಲಿ ಇದ್ದರೆ ಆಯಿತು, ಇಲ್ಲದಿದ್ದರೆ ಅವರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕಾಯ್ದುಕುಳಿತುಕೊಳ್ಳಬೇಕು, ಇಲ್ಲ ಅವರು...

ಅನಗೋಡು ಕಳ್ಳರು, ಯಡಿಯೂರಪ್ಪ, ಒಬಾಮಾ, ಪಾಕಿಸ್ತಾನ ಇತ್ಯಾದಿ

ಶರಾವತಿ ದಡದಲ್ಲಿ ಅನಗೋಡು ಎಂಬ ಊರಿದೆ. ಈ ಅನಗೋಡಿನ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಎಂದರೆ ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದ ಕೆಲವು ಭಾಗವನ್ನು ಚಿತ್ರೀಕರಿಸಿದ್ದು ಇಲ್ಲಿಯೇ. ಅನಗೋಡಿನ ಜಾನಪದ ಪರಂಪರೆಯಲ್ಲಿ ನಡೆಯುವ ಊರ ಹಬ್ಬ ಪ್ರತಿ ವರ್ಷ ಮೇ ತಿಂಗಳ 21ರಂದು ನಡೆಯುತ್ತದೆ. ಈ ಬಾರಿ ನನಗೆ ಅನಗೋಡು ಹಬ್ಬವನ್ನು ನೋಡುವ ಅವಕಾಶ ದೊರೆಯಿತು. ಅನಗೋಡು ಹಬ್ಬದಲ್ಲಿ ಕುಮಾರರಾಮನನ್ನು ಮತ್ತು ಸತಿಹೋದ ಆತನ ಪತ್ನಿಯರನ್ನು ಪೂಜೆ ಮಾಡುತ್ತಾರೆ. ಮೂಲತಃ ಕುಮಾರರಾಮನು ಕಳ್ಳನೇ ಎಂದು...