ನೆನಹು ತಂತಿ ಮೀಟುವಾಗ….

ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ ಕಾಲನೇಮಿಯೂ ಆಗಬಹುದು! ಪಂಚಾಂಗದಲ್ಲಿ ಇನ್ನೊಂದು ವರ್ಷ ಸಂದುಹೋಗಿದೆ. ಗೋಡೆಯ ಮೊಳೆಗೆ ಹೊಸ ಕ್ಯಾಲೆಂಡರ್ ಬಂದು ಕುಂತಿದೆ. ಹೋಗಿಯೇ ಬಿಟ್ಟಿತೇ ಒಂದು ವರ್ಷ ಎಂಬ ಉದ್ಗಾರದಲ್ಲಿಯೇ ಬೇಸರವೋ ಆತಂಕವೋ ಅವರವರ ಭಾವಕ್ಕೆ ತಕ್ಕಂತೆ ಅಭಿವ್ಯಕ್ತಿಗೊಂಡಿರುತ್ತದೆ. ಕಾಲವನ್ನು ಖಂಡಖಂಡವಾಗಿ ನೋಡಿ ಇಲ್ಲವೆ ಅಖಂಡವಾಗಿಯೇ ನೋಡಿ ಅದೇನೋ ನಿಗೂಢತೆ ಅದರಲ್ಲಿ ತುಂಬಿರುತ್ತದೆ.ಕಾಲಮಾನವು ಈಗ ಇದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಕಾಲ ಮತ್ತು ಮನಸ್ಸು ಇವುಗಳಲ್ಲಿ ಯಾವಾಗಲೂ ಒಂದು ರೀತಿಯ ಹೊಯ್ದಾಟ ಇದ್ದೇ ಇರುತ್ತದೆ. ಭವಿಷ್ಯದ...

ಮಧ್ಯಬಿಂದುವಿನಲ್ಲಿ ಹೊರಳಿ ನೋಡಿದಾಗ….

ಸಾವಿರ ನಿರೀಕ್ಷೆಗಳೊಂದಿಗೆ ನೂರು ನೋವುಗಳನ್ನು ಮರೆಯುವಾ…. ಇದು ಸಂದ ವರ್ಷಕ್ಕೊಂದು ಬೆನ್ನುಡಿ ಹೊಸ ವರ್ಷಕ್ಕೊಂದು ಮುನ್ನುಡಿ. ನಿನ್ನೆ ನಾಳೆಗಳ ಈ ಮಧ್ಯಬಿಂದುವಿನಲ್ಲಿ ಬದುಕೊಂದು ಬಯಲು. ಈ ಬಯಲನ್ನು ಬೆಳಗುವುದು ಹೇಗೆ? ಮಧ್ಯಬಿಂದುವಿನಿಂದ ಬೆಳಕು ಮುಂದೆ ಹರಿಯುವುದು ಹೇಗೆ? ಇದೆಂಥ ಕ್ರಿಯೆ? ಆರುತ್ತಿರುವ ಮೇಣದ ಬತ್ತಿಯಿಂದ ಇನ್ನೊಂದು ಮೇಣದ ಬತ್ತಿಯನ್ನು ಹಚ್ಚಿದಂತೆ ಇದು. ಈ ಬೆಳಕಿನ ಬತ್ತಿಯನ್ನು ಯಾರೂ ಒಯ್ಯದೆ ಹೋದರೆ ಬಯಲು ತುಂಬಾ ಕತ್ತಲೆಯೋ ಕತ್ತಲೆ. ಕಾರಣ ಬೆಳಕಿನ ಬತ್ತಿಯನ್ನು ಒಯ್ಯುವ ಅನಿವಾರ್ಯತೆ ನಮಗೆಲ್ಲರಿಗೂ ಇದೆ.ನಿರೀಕ್ಷೆಗಳು ಸಾಗರದಷ್ಟು...

ಹೊಸ ವರ್ಷದ ಹೊಸ್ತಿಲಲ್ಲಿ ಹೊಸ ಸಂಕಲ್ಪಗಳು

ಅಖಂಡವಾದ ಕಾಲ ಪ್ರವಾಹದಲ್ಲಿ ಅದೆಷ್ಟೋ ಅಸಂಖ್ಯ ಅಲೆಗಳು. ಈ ಅಲೆಗಳನ್ನು ಲೆಕ್ಕವಿಟ್ಟವರಾರು? ಅಖಂಡ ಕಾಲವನ್ನು ಖಂಡಗಳಲ್ಲಿ ವಿಂಗಡಿಸಿ ನೋಡುವುದು ಅವರವರ ಅನುಕೂಲಕ್ಕೆ. ಒಂದೊಂದು ದೇಶಕ್ಕೆ, ಒಂದೊಂದು ಪ್ರದೇಶಕ್ಕೆ, ಒಂದೊಂದು ಧರ್ಮಕ್ಕೆ, ಒಂದೊಂದು ಮನಸ್ಸಿಗೆ ಈ ಕಾಲಖಂಡ ವಿಭಿನ್ನವಾದುದು. ಕ್ಯಾಲೆಂಡರಿಗೊಂದು, ಪಂಚಾಂಗಕ್ಕೆ ಇನ್ನೊಂದು. ಒಂದೇ ಕಾಲ, ಎಷ್ಟೊಂದು ರೂಪ!ಇರುಳಿರುಳಳಿದು ಬರುತ್ತಿರೆ ಬೆಳಗು ದಿನದಿನವೂ ಹೊಸತು! ಈ ಕ್ಷಣದಲ್ಲಿ ಇನ್ನೊಂದು ಕ್ಷಣದಲ್ಲಿ ಇನ್ನೇನೋ ಸಂಭವಿಸಿ ಬಿಡಬಹುದು ಎಂಬ ನಿರೀಕ್ಷೆ. ಆ ಹೊಸದರ ಒಡಲಲ್ಲಿ ನಮ್ಮೆಲ್ಲ ನೋವಿನಂಧಕಾರವನ್ನು ದೂರಮಾಡುವ ಸೂರ್ಯ ಉದಯಿಸಬಹುದೆಂಬ...

ಕೇಳೇ ಸಖಿ ಪತ್ರಮುಖಿ

ನಮ್ಮೂರಿನ ರಾಮಯ್ಯನವರು ಅವತ್ತು ಮೂರು ಬಾರಿ ಮನೆಯಲ್ಲಿದ್ದ ಜನರನ್ನು ಪೋಸ್ಟ್್ಮನ್ ಬಂದುಹೋದನೆ ಎಂದು ವಿಚಾರಿಸಿದ್ದರು. ಕೊನೆಗೂ ತಡೆದುಕೊಳ್ಳುವುದು ಆಗದೆ ಅಂಚೆಕಚೇರಿಗೇ ಹೋದರು. ತಮ್ಮ ವಿಳಾಸದ ಪತ್ರ ಏನಾದರೂ ಬಂದಿದೆಯೆ ಎಂದು ವಿಚಾರಿಸಿದರು. `ಇಲ್ಲ’ ಎಂಬ ಪೋಸ್ಟ್್ಮಾಸ್ತರನ ಉತ್ತರದಿಂದ ನಿರಾಶೆಗೊಂಡವರಂತೆ ಕಂಡುಬಂದರು. ಮಾರನೆ ದಿನವೂ ಮತ್ತೆ ಅದೇ ಕಾತರ. ಮೂರು ದಿನದ ನಂತರ ಅಂಚೆಯವನು ಅವರು ನಿರೀಕ್ಷಿಸುತ್ತಿದ್ದ ಪತ್ರ ತಂದು ಕೊಟ್ಟನು. ಓದುವುದಕ್ಕೆಂದು ಧಾರವಾಡಕ್ಕೆ ಹೋಗಿದ್ದ ಅವರ ಮಗ ಬರೆದ ಪತ್ರ ಅದು. ಅವನ ಯೋಗಕ್ಷೇಮದ ಬಗ್ಗೆ, ಅಲ್ಲಿಯ...

ಹಬ್ಬಗಳ ಒಡಲಲ್ಲಿ ಕಜ್ಜಾಯ

ಆಷಾಢ ಕಳೆದೇ ಬಿಟ್ಟಿತು, ಬಂತು ಶ್ರಾವಣ. ಇನ್ನೇನು ಹಬ್ಬಗಳದೇ ಸುಗ್ಗಿ. ಜಿನುಗುವ ಮಳೆ, ಇಳೆಯೊಡಲಿಗೆ ಹಸಿರ ಉಡುಗೆ, ತಂಪು ಗಾಳಿ. ಪ್ರಕೃತಿಯ ಸಂದಿ ಸಂದಿಗಳಲ್ಲೂ ಜೀವ ಚೈತನ್ಯದ ಚಿಲುಮೆ. ಹೊರಗೆಲ್ಲ ಆಹ್ಲಾದ ತುಂಬಿರಲು ಮನೆಯೊಳಗೂ ಖುಷಿ ಅನ್ನುವುದು ಬೇಡವೆ? ಅದಕ್ಕಾಗಿಯೇ ಸಾಲುಸಾಲು ಹಬ್ಬಗಳು.ಹಾಗೆ ನೋಡಿದರೆ ಆಷಾಢವೇ ಹಬ್ಬಗಳಿಗೆ ಖೋ ಕೊಟ್ಟಿರುತ್ತದೆ. ಆಷಾಢದ ಅಮಾವಾಸ್ಯೆಯೇ ಅಳಿಯನ ಅಮಾವಾಸ್ಯೆ. ಹೊಸದಾಗಿ ಮದುವೆಯಾದವರಿಗೆ ಇದು ದೊಡ್ಡ ಹಬ್ಬ. ಈ ಹಬ್ಬವನ್ನು ತಪ್ಪಿಸುವ ಅಳಿಯಂದಿರು ಕಡಿಮೆ. ಮಾವನ ಮನೆಗೆ ಹೋಗಿ ಹಬ್ಬದ ಊಟ...

ಇದು ಹೊಳೆಸಾಲಿನ ಮಳೆಗಾಲ

ಬುದುವಂತ ಕಂಬಳಿಕೊಪ್ಪೆ ಝಾಡಿಸಿ ಮಾಡಿಗೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟ. `ನಿನ್ನೆ ರಾತ್ರಿ ಹಿಡ್ಕಂಡ ಮಳೆ ಇವತ್ತು ಇಷ್ಟೊತ್ತಾದ್ರೂ ಹನಿ ಕಡಿಲಿಲ್ಲ. ಆಕಾಶಕ್ಕೆ ತೂತು ಬಿದ್ದಂಗೆ ಹೊಯ್ದೇ ಹೊಯ್ಯುಕೆ ಹತ್ತಿದೆ’. ಇಂಥದ್ರಲ್ಲಿ ಸಣ್ಣಯ್ಯ ಯಾವ ಕೆಲಸ ಇಟ್ಕೊಂಡು ತನಗೆ ಬರೂಕೆ ಹೇಳಿದ್ದಾರೋ ಅಂದುಕೊಳ್ಳುತ್ತ ಸಣ್ಣಯ್ಯನವರ ಮನೆ ಹೊಸ್ತಿಲು ತುಳಿದ. ಸಣ್ಣಯ್ಯ ಕವಳಕ್ಕೆ ನೀರಡಿಕೆ ಸುಲಿದು ಕೆರಿಸುತ್ತ ಕುಳಿತಿದ್ದರು. ಬುದುವಂತನನ್ನು ನೋಡಿ, ಬಂದ್ಯಾ, ಬಾ ಬಾ, ಈ ಮಳೆ ನೋಡಿ ಮನೆಯಿಂದ ಹೊರಗೆ ಬೀಳುತ್ತಿಯೋ ಇಲ್ಲವೋ ಅಂದ್ಕಂಡಿದ್ದೆ ಅಂದರು.ಅಲ್ಲ,...

ಮುಗಿಲ ಮಾಳಿಗೆ ಸೋರುವ ಮುನ್ನ

ಉಳಿದ ಊರುಗಳಲ್ಲಿ ಎಂತೋ ಏನೋ, ನಮ್ಮೂರಲ್ಲಂತೂ ಗಡುಗಾಲ ಬಂತೆಂದರೆ ಒಂದು ನಮೂನೆ ಗಡಿಬಿಡಿ ಜೋರಾಗಿಬಿಡುವುದು. ತೆಂಕು ದಿಕ್ಕಿನಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿಸುವ ಗುಡುಗಿನ ಸದ್ದು, ರಾತ್ರಿ ಮನೆಯ ಅಂಗಳದಲ್ಲಿ ಮಲಗಿದವರಿಗೆ ಕಾಣಿಸುವ ಮಿಂಚು ಬರಲಿರುವ ಮಳೆಗಾಲಕ್ಕೆ ಮುನ್ನುಡಿ ಬರೆಯುತ್ತವೆ.ನಮಗೆ ಗೊತ್ತಿರುವ ಹಾಗೆ ಕಾಲಪುರುಷನಿಗೆ ಮೂರೇ ಮುಖ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ. ಆದರೆ ಬೇಸಿಗೆ ಹಾಗೂ ಮಳೆಗಾಲಗಳ ನಡುವೆ ಗಡುಗಾಲವೆಂಬ ಅತಂತ್ರ ಅವಧಿಯೊಂದಿದೆ. ಅದು ಎಂಥ ಸಮಯ ಗೊತ್ತೆ?ಬೆಸಿಗೆ ಮುಗಿಯುವ, ಮಳೆಗಾಲ ಆರಂಭವಾಗುವ ನಡುವಿನ ಸಂಧಿಕಾಲವೇ ಈ...

ಹಂಗರಕನ ಮರ ಮತ್ತು ಚೆನ್ನೆಮಣೆ

ಅದು ಪುಷ್ಯವೋ ಪುನರ್ವಸುವೋ ಇರಬೇಕು. ಬಿಟ್ಟೂ ಬಿಡದೆ ಎಂಟೆಂಟು ದಿನ ಮಳೆಯ ಸುರಿಸುವ ತಾಕತ್ತು ಇರುವುದು ಈ ನಕ್ಷತ್ರಗಳಿಗಲ್ಲದೆ ಬೇರೆ ಯಾವುದಕ್ಕಿದೆ? ಇವು ಮಾಡುವ ಅನಾಹುತಗಳು ಒಂದೇ ಎರಡೇ? ಅಪ್ಪುಗೈಗೆ ನಿಲುಕದ ಗಾತ್ರದ ಮಾವಿನ ಮರ, ಮುಗಿಲ ಚುಂಬಿಸ ಹೊರಟ ತೆಂಗಿನ ಮರ, ಎಕರೆಯಷ್ಟು ಜಾಗದಲ್ಲಿ ಬೇರ ಜಾಲವ ಬೀಸಿ ಚಪ್ಪರ ಹಾಕಿದ್ದ ಆಲದ ಮರ ಹೀಗೆ ಯಾವುದೆಂದರೆ ಅದನ್ನು ಕಿತ್ತು ಧರೆಗುರುಳಿಸುವ ಅಗಾಧ ಶಕ್ತಿ ಈ ಮಳೆ ಗಾಳಿಗಳಿಗೆ ಇರುತ್ತದೆ. ಸತತ ಮಳೆಯಿಂದ ನೀರು ಕುಡಿದು...

ತೇರಿಗೆ ಹೋಗುವ ಬಾರೆ ತಂಗೀ

ಪುಷ್ಯ ಕಳೆಯುವುದೇ ತಡ ಕರಾವಳಿಯಲ್ಲಿ ಒಂದಲ್ಲ ಒಂದು ತೇರು. ಒಂದೂರಿನಲ್ಲಿ ತೇರು ಎಂದರೆ ಏಜುಬಾಜಿನ ಹತ್ತೂರಲ್ಲಿ ಮನೆಮನೆಯಲ್ಲೂ ಹಬ್ಬವೇ ಹಬ್ಬ. ಆಗಲೆ ಕಾತ್ಗಿ ಬೆಳೆಯ ಕುಯ್ಲು ಮುಗಿದು ಎಲ್ಲರ ಮನೆಯಲ್ಲೂ ಕಾಳುಕಡಿ ಸಮೃದ್ಧವಾಗಿರುತ್ತದೆ. ಸುಗ್ಗಿ ಬೆಳೆಯ ಸಾಧ್ಯತೆ ಇದ್ದಲ್ಲಿ ಬಿತ್ತನೆ, ನಾಟಿ ಮುಗಿದಿರುತ್ತದೆ. ಕೆಲಸವೆಲ್ಲ ಮುಗಿಯಿತಪ್ಪ ಎಂದು ರೈತರಲ್ಲ ನಿರುಂಬಳವಾಗಿ ಉಸಿರಾಡಿಸಿಕೊಳ್ಳುತ್ತಿರುವಾಗಲೆ ಈ ತೇರುಗಳು ಬಂದುಬಿಡುತ್ತವೆ.ಒಂದೇ, ಎರಡೇ….ಇಡಗುಂಜಿಯ ತೇರು, ಬಳಕೂರು ತೇರು, ದಿಬ್ಬಣಗಲ್ಲ ತೇರು, ಕೊಳಗದ್ದೆ ತೇರು, ಕಾಸರಕೋಡು ತೇರು, ಹಳದಿಪುರ ತೇರು, ಅಗ್ರಹಾರ ತೇರು, ಧಾರೇಶ್ವರ...

ಶುಭ ನುಡಿಯೇ ಶಕುನದ ಹಕ್ಕಿ

ನಾನಿನ್ನೂ ಆಗ ಚಿಕ್ಕವನು. ಏಳೆಂಟು ವರ್ಷಗಳು ಇರಬಹುದು. ನಮ್ಮ ಮನೆಗೆ ಒಂದು ಎಮ್ಮೆಯನ್ನು ತರಬೇಕು ಎಂಬ ವಿಷಯದಲ್ಲಿ ನನ್ನ ಅಪ್ಪ ಅಮ್ಮ ಚರ್ಚೆ ನಡೆಸಿದ್ದರು. ಗಂಟಿಗಳಿಗೂ ಕಾಲುಗುಣ ಎನ್ನುವುದು ಇರುತ್ತದೆ. ಎಂಥೆಂಥದ್ದೋ ತಳಿಗಳನ್ನು ತಂದು ಹೊಕ್ಕಿಸಿದರೆ ಇರುವ ದನಕರುಗಳೂ ನಾಶವಾಗುವವು ಎನ್ನುವ ಜನರಾಗಿದ್ದರು ಅವರು. ನೀವು ಮಾಡಿದ್ದು ಸರಿ ಎಂದು ಶಕುನದ ನುಡಿ ಅವರಿಗೆ ಹೇಳುವವರು ಯಾರು?ಅದಕ್ಕೆ ಅವರೇನು ಮಾಡಿದರು ಗೊತ್ತೆ? ಒಂದು ಮೊರದಲ್ಲಿ ಎರಡು ಮೂಲೆಗಳಿಗೂ ಎರಡೆರಡು ಬೊಗಸೆ ಅಕ್ಕಿಯನ್ನು ಹಾಕಿದರು. ಒಂದರಲ್ಲಿ ಅವರು ಇದ್ದಲಿಯನ್ನೂ...