ಧರಣೀದೇವಿ ಕೃತ ಇಳಾಭಾರತಂ

ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂದು ವಿ.ಕೃ.ಗೋಕಾಕರು ಪರ್ಮಾನು ಹೊರಡಿಸಿ ಅರ್ಧ ಶತಮಾನವೇ ಕಳೆದುಹೋಯಿತು. ಮುಕ್ತ ಛಂದದ ರಚನೆಯ ಸುಖವನ್ನು ನವ್ಯ, ನವ್ಯೋತ್ತರ ಕವಿಗಳು ತುಂಬ ಚೆನ್ನಾಗಿಯೇ ಅನುಭವಿಸಿದ್ದಾರೆ. ಇಂಥ ಕಾಲಘಟ್ಟದಲ್ಲಿ ತಮ್ಮ ಭಾವನೆಗಳಿಗೆ ಛಂದಸ್ಸಿನ ಚೌಕಟ್ಟನ್ನು ನಿರ್ಮಿಸಿಕೊಂಡು ಕಾವ್ಯ ರಚನೆಯಲ್ಲಿ ತೊಡಗುವುದೆಂದರೆ ಅದೊಂದು ಸಾಹಸದ ಕೆಲಸವೆಂದೇ ಹೇಳಬೇಕು. ಅಂಥ ಒಂದು ಸಾಹಸವನ್ನು ಡಾ.ಧರಣೀದೇವಿ ಮಾಲಗತ್ತಿಯವರು ತಮ್ಮ ‘ಇಳಾಭಾರತಂ’ ಕೃತಿಯಲ್ಲಿ ಮಾಡಿದ್ದಾರೆ. ಬಿರುದು ಬಾವಲಿಗಳ ಪಡೆಯಲಿದ ಬರೆದುದಲ್ಲವು ಬರೆಹ ಲೋಕದಿ ಮರೆತ ದನಿಗಳ ಹುಡುಕಿ ಕೇಳಿಸೆ ಸಹೃದಯಗಳಿಗೆ...

ಮಾಯಾಕನ್ನಡಿಯಲ್ಲಿ ಬೋದಿಲೇರ್

ಒಂದು ಹೂವು ಹಾದಿಯಲ್ಲಿ ಬಿದ್ದಿದ್ದರೆ ಅದನ್ನು ಮೆಟ್ಟಿ ಮುಂದೆ ಹೋಗದಂಥ ಮಾರ್ದವತೆ, ತನ್ನತ್ತ ಕೆಕ್ಕರಿಸಿ ನೋಡಿದವನ ಕತ್ತು ಚೆಂಡಾಡುವಂಥ ಕೋಪ, ಹೆಣ್ಣಿನ ಮುಗುಳ್ನಗೆಯಲ್ಲಿ ಕರಗಿ ಹೋಗುವಂಥ ಆಪ್ತತೆ ಇಂಥ ಭಾವಗಳ ಮಿಶ್ರಣವಾಗಿದ್ದ ಹಾಗೂ ತನ್ನ ಕೃತಿಗಳಲ್ಲಿ ಅವನ್ನೇ ಚಿತ್ರಿಸಿದ ದೊಡ್ಡ ಲೇಖಕ ಚಾರ್ಲ್ಸ್ ಬೋದಿಲೇರ್ ತೀವ್ರವಾಗಿ ಅನುಭವಿಸಿ ಬರೆಯಬಲ್ಲವನಾಗಿದ್ದ. ಆತನ ಗದ್ಯರೂಪದ ಐವತ್ತು ಪದ್ಯಗಳನ್ನು, ಬೇಕಾದರೆ ಗಪದ್ಯವೆನ್ನಿ, ಎಸ್.ಎಫ್.ಯೋಗಪ್ಪನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೋದಿಲೇರನ ಕವಿತೆಗಳನ್ನು ‘ಪಾಪದ ಹೂಗಳು’ ಹೆಸರಿನಲ್ಲಿ ಲಂಕೇಶ್ ಕನ್ನಡಕ್ಕೆ ತಂದಿದ್ದರು. ಅವರ ಗರಡಿಯಲ್ಲಿಯೇ ತಯಾರಾದ...

ಬೆಳದಿಂಗಳಲ್ಲಿ ಬದುಕಿನ ಅರ್ಥದ ಹುಡುಕಾಟ

ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ...