ವೈದ್ಯಲೋಕದಲ್ಲೊಂದು ಸತ್ಯನೋಟ

ಸತ್ಯಮೇವ ಜಯತೆ ಎಂಬುದು ಸನಾತನವಾದ ನುಡಿ. ನಮ್ಮ ನಂಬಿಕೆ, ಕ್ರಿಯೆಗಳು ಎಲ್ಲವೂ ಇದರ ಸುತ್ತಲೇ ಗಿರಕಿಹೊಡೆಯುತ್ತ ಇರುತ್ತವೆ. ಯಾವಾಗ ಈ ನಂಬಿಕೆಗೆ ಧಕ್ಕೆ ಉಂಟಾಗುತ್ತದೋ, ಅದಕ್ಕೆ ವ್ಯತಿರಿಕ್ತವಾಗಿ ಕ್ರಿಯೆಗಳು ಜರುಗಲಾರಂಭಿಸುತ್ತವೋ ಅದು ನಮ್ಮ ಪತನವನ್ನು ಸೂಚಿಸುತ್ತದೆ. ನಂಬಿಕೆ ಎಷ್ಟೊಂದು ಪರಿಣಾಮಕಾರಿ ಎಂದರೆ ವೈದ್ಯಕೀಯದಲ್ಲಿ ರೋಗಿಯ ಗುಣವಾಗುವಿಕೆಯಲ್ಲಿ ಶೇಕಡಾ ಮೂವತ್ತು ಭಾಗ ಈ ನಂಬಿಕೆಯನ್ನು ಅವಲಂಬಿಸಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಪ್ಲಾಸಿಬೋ ಎಫೆಕ್ಟ್ ಎಂದು ಹೇಳುತ್ತಾರೆ. ಕೆಲವರಿಗೆ ರೋಗವೇ ಇರುವುದಿಲ್ಲ. ತಮಗೆ ಯಾವುದೋ ರೋಗ ಬಂದಿದೆ ಎಂಬ ಭ್ರಮೆಯಲ್ಲಿ...

ಮಗ ಕೆತ್ತಿದ ಅಪ್ಪನ ಅಕ್ಷರ ಶಿಲ್ಪ

ದಲಿತ ಆತ್ಮಕಥನಗಳು ಮರಾಠಿಯಲ್ಲಿ ವಿಶಿಷ್ಟವಾದದ್ದು. ಒಂದು ತಳ ಸಮುದಾಯದ ನಿಗಿ ನಿಗಿ ಕೆಂಡದಂಥ ನೋವನ್ನು ಅಲ್ಲಿ ದಾಖಲಿಸುವ ರೀತಿ ಎದೆಯನ್ನು ಜಲ್ಲೆನ್ನಿಸುತ್ತದೆ. ಆರಂಭದ ರೋಷ, ರೊಚ್ಚು ಮಾಯವಾಗಿ ಸಮಾಹಿತವಾದ ಮನಃಸ್ಥಿತಿಯಲ್ಲಿ ತಮ್ಮ ಪಾಡು ತಮ್ಮದು ಎಂಬಂತೆ, ದಟ್ಟ ಕಾಡಿನ ನಡುವೆ ಮೈತುಂಬಿ ಹರಿವ ನದಿಯಂಥ ಪಕ್ವಗೊಂಡ ಶೈಲಿಯನ್ನು ಇತ್ತೀಚಿನ ಅಲ್ಲಿಯ ಇಂಥ ಬರೆಹಗಳಲ್ಲಿ ಕಾಣಬಹುದು. ಇತ್ತೀಚೆಗೆ ನಾನು ಭಾಲಚಂದ್ರ ಮುಣಗೇಕರ ಅವರ ‘ಮೀ ಅಸಾ ಘಡಲೋ’ ಎಂಬುದರ ಕನ್ನಡ ಅನುವಾದ ‘ನಾನು ಹೀಗೆ ರೂಪುಗೊಂಡೆ’ ಎಂಬುದನ್ನು ಓದಿದ್ದೆ....