ಕತೆ ಕತೆ ಕಾರಣ ಬೆಕ್ಕಿಗೆ ತೋರಣ

ಹಾಗೆ ನೋಡಿದರೆ ಪ್ರತಿಯೊಬ್ಬರೂ ಕತೆಗಾರರೇ. ಪ್ರತಿಯೊಬ್ಬರಲ್ಲೂ ಕತೆಗಾರ ಒಳಗೆ ಅವಿತಿರುತ್ತಾನೆ. ಹೊರಗೆ ಬರುವುದಕ್ಕೆ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಕತೆ ಹೇಳುವ ಹರ್ಕತ್ತು ಎಲ್ಲರಿಗೂ ಒಂದಲ್ಲ ಒಂದು ಸಲ ಬಂದೇ ಬರುವುದು. ಮನೆಯಲ್ಲಿ ಚಿಕ್ಕಮಕ್ಕಳು ಇದ್ದಾಗಲಂತೂ ಇದು ವಿಪರೀತ. ಒಮ್ಮೊಮ್ಮೆ ಕಿರುಕುಳ ಅನ್ನಿಸಿಬಿಡುವಷ್ಟು. ಕತೆ ಕತೆ ಕಾರಣ ಬೆಕ್ಕಿಗೆ ತೋರಣ ಎಂದು ಹಾಡಿಕೊಂಡು ಚಿಕ್ಕಂದಿನಲ್ಲಿ ನಾವು ಕುಣಿದದ್ದು ಇಂದು ನೆನಪಾಗುತ್ತಿದೆ. ಕತೆಗಾಗಿ ಆಗ ನಾವು ಹಿರಿಯರನ್ನು ಕಾಡಿದ್ದೇ ಕಾಡಿದ್ದು. ಚಿಕ್ಕ ಮಕ್ಕಳು ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ಅವರನ್ನು ಕತೆ...

ಕುರುಡು ನಾಗಪ್ಪನ ಲೀಲೆಗಳು

ತಮ್ಮದೆನ್ನುವ ಊರು ಬಿಟ್ಟ ನನ್ನಂಥವರಿಗೆ ಊರ ದಾರಿ ಬಹು ದೂರ ಮತ್ತು ಅಷ್ಟೇ ಹತ್ತಿರ ಕೂಡ. ದೂರ ಏಕೆಂದರೆ ನಾವು ಊರಿಗೆ ಹೋಗುವುದೇ ಅಪರೂಪವಾಗಿರುತ್ತದೆ. ಹೋಗಬೇಕು ಅಂದುಕೊಂಡಾಗಲೆಲ್ಲ ಏನೇನೋ ಅಡಚಣೆಗಳು ಎದುರಾಗಿ ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಹತ್ತಿರ ಏಕೆಂದರೆ ಅನಕ್ಷಣವೂ ನಾವು ನಮ್ಮೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಹೃದಯದ ಚಿಪ್ಪಿನಲ್ಲಿ ಅಡುಗಾಗಿ ವಾಸನೆಯಾಡುತ್ತಲೇ ಇರುತ್ತದೆ ನಮ್ಮೂರು. ನಮ್ಮ ಮಾತಿನಲ್ಲಿ, ಅಷ್ಟೇಕೆ ನಮ್ಮ ಇರುವಿಕೆಯಲ್ಲಿಯೇ ನಮ್ಮ ಎದುರಿನವರಿಗೆ ನಮ್ಮೂರು ಪ್ರತಿಫಲಿಸುತ್ತಿರುತ್ತದೆ. ಪ್ರತಿ ಬಾರಿ ಊರಿಗೆ ಹೋಗುವಾಗಲೂ ಒಂದು...