ಚಿತ್ರಗುಪ್ತನ ಕತೆಗಳು

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರ ಹೊಸ ಕತೆಗಳ ಸಂಕಲನ ‘ಚಿತ್ರಗುಪ್ತನ ಕತೆಗಳು’ ಈಗ ಬಂದಿದೆ. ಇದರಲ್ಲಿ ಒಟ್ಟೂ ೩೦ ಕತೆಗಳು ಇವೆ. ಸಂಕಲನದಿಂದ ಸಂಕಲನಕ್ಕೆ ಹೊಸತನ್ನು – ರೂಪ, ಗಾತ್ರ, ಸತ್ವ, ಸ್ವರೂಪದಲ್ಲಿ- ನೀಡಲು ಸದಾ ತುಡಿಯುವ ಸತ್ಯನಾರಾಯಣ ಅವರ ಈ ಸಂಕಲನ ಕೂಡ ನಿರಾಶೆ ಮೂಡಿಸುವುದಿಲ್ಲ. ಇದರಲ್ಲಿ ಅವರು ಕತೆಯ ಗಾತ್ರವನ್ನು ಕಿರಿದುಗೊಳಿಸಿದ್ದಾರೆ. ಕವಿತೆಯ ಬಿಗಿಯಲ್ಲಿ ಕತೆಯನ್ನು ಕಟ್ಟುವ ಅವರ ಕುಶಲತೆಗೆ ಈ ಸಂಕಲನ ಒಂದು ಪುರಾವೆ. ಸಾಮಾನ್ಯವಾಗಿ ಸತ್ಯನಾರಾಯಣ ಅವರು ದೀರ್ಘ...

ಭಾರತೀಯರ ಬೌದ್ಧಿಕ ದಾಸ್ಯ

ಪ್ರೊ.ಎಸ್.ಎನ್.ಬಾಲಗಂಗಾಧರ ಅವರ ಸಂಶೋಧನ ಗ್ರಂಥ ‘ದಿ ಹೀದನ್ ಇನ್ ಹೀಸ್ ಬ್ಲೈಂಡ್‌ನೆಸ್’ನ ವಿಚಾರಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆಯವರು ಬರೆದಿರುವ ಕೃತಿ ‘ಬೌದ್ಧಿಕ ದಾಸ್ಯದಲ್ಲಿ ಭಾರತ’. ವಸಾಹತುಶಾಹಿ ಪ್ರಜ್ಞೆಯು ಭಾರತೀಯ ಚಿಂತನಾಕ್ರಮವನ್ನು ಹೇಗೆ ಪ್ರಭಾವಿಸಿವೆ, ಪಾಶ್ಚಾತ್ಯ ಪ್ರಜ್ಞೆಯಿಂದ ಭಾರತೀಯ ಜೀವನವನ್ನು ಹೇಗೆ ಅರ್ಥೈಸಲು ಯತ್ನಿಸಲಾಗಿದೆ ಮತ್ತು ಅವೆಲ್ಲ ಹೇಗೆ ನಿರರ್ಥಕವಾದವು ಎಂಬುದನ್ನು ಈ ಕೃತಿಯಲ್ಲಿ ಮನಗಾಣಿಸಲು ಪ್ರಯತ್ನಿಸಲಾಗಿದೆ. ಭಾರತೀಯ ಚಿಂತಕರು ಶತಮಾನದ ಹಿಂದಿನಿಂದಲೂ ಎದುರಿಸುತ್ತಿರುವ ಬೌದ್ಧಿಕ ಸಮಸ್ಯೆಯನ್ನು ಬಾಲಗಂಗಾಧರರು ತಮ್ಮ ಸಂಶೋಧನೆಯ ಮೂಲಕ ಪರಿಹರಿಸಲು ಯತ್ನಿಸಿದ ಫಲ ಈ...