ಪ್ರಬಂಧ

ಮತ್ತೆ ಅವನು ಬಂದೇ ಬರ್ತಾನೆ…

ಹುಲ್ಲು ಬೆಳೆಯುಲ್ಲಿ ಮರ ನೆಟ್ಟರೆ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಅವನು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ———- ಅವನೊಬ್ಬ ಹುಡುಕಾಟದಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದ. ತಾನು ಏನನ್ನು ಹುಡುಕುತ್ತಿದ್ದೇನೆ ಎಂಬುದು ಸ್ವತಃ ಅವನಿಗೂ ಸ್ಪಷ್ಟವಿರಲಿಲ್ಲ. ಎದುರಿಗೆ ಬಂದವರನ್ನೆಲ್ಲ ಗುಮಾನಿಯಿಂದ ಎಂಬಂತೆ ನೋಡುತ್ತಿದ್ದ. ಅವನ ದೃಷ್ಟಿ ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಅದೆಲ್ಲಿ ತಾಗಿದವರ ಮೈಯಲ್ಲಿ ಹುಣ್ಣನ್ನು ಮಾಡುವುದೋ ಎಂಬ ಆತಂಕ ಕಾಡುತ್ತಿತ್ತು. ಅವರ ಚಿತ್ತದಲ್ಲಿ ಮೂಡಿದ ಎಲ್ಲ ಆಲೋಚನೆಗಳನ್ನು ತಾನು ಓದಬಲ್ಲೆ...

ನಿತ್ಯ ಶುದ್ಧಿಯ ಪ್ರಮಾಣದಿಂದ ತಪ್ಪಿಸಿಕೊಂಡ ಸುಬ್ಬಿಯ ಕತೆ

ಹೊಳೆಸಾಲು ಎಂದರೆ ನೆಗಸು, ಯಕ್ಷಗಾನ, ಕೋಳಿಅಂಕ, ತೇರು, ಊರಹಬ್ಬ ಎಲ್ಲ ಇದ್ದಿದ್ದೇ. ಈ ಪ್ರದೇಶದ ಜನರ ನಂಬಿಕೆಗಳು ತರಹೇವಾರಿ ಚಿತ್ರವಿಚಿತ್ರವಾದದ್ದು. ನಂಬಿಕೆ ಎನ್ನುವುದು ತೀರ ಖಾಸಗಿಯಾದದ್ದು ಮತ್ತು ಅವರವರಿಗೆ ಸಂಬಂಧಪಟ್ಟ ವಿಷಯ. ಇದು ದೇವರ ಅಸ್ತಿತ್ವದ ಕುರಿತು ಇರಬಹುದು, ತಾನು ಇವತ್ತು ಈ ಅಂಗಿಯನ್ನು ತೊಟ್ಟು ಹೊರಗೆ ಹೊರಟರೆ ಕಾರ್ಯಸಿದ್ಧಿಯಾಗುತ್ತದೆ ಎಂದುಕೊಳ್ಳುವವರೆಗೂ ಇರಬಹುದು. ಮನೆಯಿಂದ ಹೊರಗೆ ಹೊರಡುವಾಗ ಬೋಳು ತಲೆಯವರು ಎದುರಾದರೆ ಕೆಲಸವಾಗುವುದಿಲ್ಲ ಎಂದುಕೊಳ್ಳುವಂಥ ತರ್ಕಕ್ಕೆ ನಿಲುಕದ ನಂಬಿಕೆಗಳೂ ಇವೆ. ಕೆಲವು ನಂಬಿಕೆಗಳ ಬೆನ್ನು ಬಿದ್ದರೆ ಅದೇನೇನೋ...

ವಕೀಲರು ಹೇಳಿದ ಆತ್ಮಹತ್ಯೆಯ ಕತೆ

ಹೊಳೆಸಾಲಿನವರ ಜಗಳಗಳು ಕೋರ್ಟು, ಪೊಲೀಸ್ ಠಾಣೆ ಮಟ್ಟಿಲೇರಿದರೆ ಅದನ್ನು ಸುಧಾರಿಸಲು ವಕೀಲರು ಬೇಕಿತ್ತಲ್ಲವೆ, ಹೊನ್ನಾವರದಲ್ಲಿ ಖ್ಯಾತ ನಾಮರಾದ ಮೂರ್ನಾಲ್ಕು ವಕೀಲರಿದ್ದರು. ಅವರಲ್ಲಿ ಒಬ್ಬರು ಎಂ.ಎಂ.ಜಾಲಿಸತ್ಗಿ ವಕೀಲರು. ಇವರ ಕಾನೂನು ಪಾಂಡಿತ್ಯದ ಕುರಿತು ಹೊಳೆಸಾಲಿನಲ್ಲಿ ಹಲವಾರು ಕತೆಗಳು ಹರಿದಾಡುತ್ತಿದ್ದವು. ಜಾಲಿಸತ್ಗಿಯವರು ಕಾಂಗ್ರೆಸ್ ಮುಖಂಡರೂ ಹೌದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೇ ಅವರು ವಿದ್ಯಾರ್ಥಿಗಳಾಗಿ ಹೋರಾಟ ನಡೆಸಿದವರಂತೆ. ಒಮ್ಮೆ ಅವರು ರಾಜ್ಯ ವಿಧಾನ ಸಭೆಗೆ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯೂ ಆಗಿದ್ದರು.ಆ ಬಳಿಕವೇ ಅವರು ಕಾಂಗ್ರೆಸ್ ಪಕ್ಷ ಸೇರಿ ಜಿಲ್ಲಾ...

ಮನೆ ಕಟ್ಟಿದ ಅವನು ಇರವಾಣಕ್ಕೆ ಇರಲಿಲ್ಲ

ಹೊಳೆಸಾಲಿನ ಎಲ್ಲ ಊರು ಕೇರಿಯವರಿಗೆ ಪುರವೆಂದರೆ ಹೊನ್ನಾವರವೇ. ಹೊಳೆ ಬಂದು ಸಮುದ್ರ ಕೂಡುವ ಅಳವೆಯಲ್ಲಿ ಈ ಪುರವಿದೆ. ಮೊದಲೆಂದರೆ ಪುರ ಸೇರಬೇಕೆಂದರೆ ಹೊಳೆಯ ಮೂಲಕವೇ ದೋಣಿಯಲ್ಲೋ ಲಾಂಚಿನಲ್ಲೋ ಬರಬೇಕಿತ್ತು. ಇಲ್ಲವೆಂದರೆ ಹತ್ತಿರದವರು ಕಾಲುನಡಿಗೆಯಲ್ಲೇ ಬಂದು ಹೋಗುತ್ತಿದ್ದರು. ತಾವು ಬೆಳೆದುದು ಸ್ವಂತಕ್ಕೆ ಬಳಸಿ ಹೆಚ್ಚಾಗಿದ್ದನ್ನು ತಂದು ಮಾರುವುದರಿಂದ ಹಿಡಿದು ತಾವು ಬೆಳೆಯದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದರ ವರೆಗೆ ಹೊಳೆಸಾಲು ಮತ್ತು ಪುರಕ್ಕೆ ಹೊಕ್ಕು ಬಳಕೆ ಇತ್ತು. ಜೊತೆಗೆ ಪುರದವರ ಮನೆಗೆಲಸ, ಬಂದರದ ವಖಾರಗಳಿಗೆ ಟ್ರಕ್ಕುಗಳಿಂದ ಸಾಮಾನುಗಳನ್ನು ಇಳಿಸುವ ಕೂಲಿಯ...

ಕಾಲ ಬದ್ಲಾಯಿತು ಎಂದು ಊರು ಬಿಟ್ಟ ಕಲಾಯಿ ಸಾಬಿ

ಕತೆಯನ್ನು ಹುಡುಕುತ್ತಿದ್ದವರಿಗೆ ಅದು ನಮ್ಮ ಪಕ್ಕದಲ್ಲಿಯೇ ಹರಿದಾಡುತ್ತಿದ್ದರೂ ಒಮ್ಮೊಮ್ಮೆ ಗೊತ್ತೇ ಆಗುವುದಿಲ್ಲ. ಕತೆ ಕಣ್ಣಿಗೆ ಬೀಳುವುದಿಲ್ಲ. ನನಗೂ ಒಮ್ಮೆ ಹೀಗೇ ಆಗಿತ್ತು. ನಾನು ಸಣ್ಣವನಿದ್ದಾಗ ನಮ್ಮೂರಿಗೆ ಪಾತ್ರೆಗಳನ್ನು ದುರಸ್ತಿ ಮಾಡುವ ಸಾಬಿ ಒಬ್ಬ ಬರುತ್ತಿದ್ದ. ಕಲಾಯಿ ಸಾಬಿ ಎಂದು ಅವನನ್ನು ಕರೆಯುತ್ತಿದ್ದರು. ಅವರಿಗೆ ಕಾಯಂ ವಿಳಾಸ ಎಂಬುದು ಇರುತ್ತಿರಲಿಲ್ಲ. ಸಾಬಿ ಹೋದಲ್ಲೇ ಊರು ಎಂಬಂತೆ ಒಂದಲ್ಲ ಒಂದು ಊರಿಗೆ ತಮ್ಮ ಟಂಬು ಬದಲಾಯಿಸುತ್ತಲೇ ಇರುತ್ತಿದ್ದ. ನಿಮ್ಮ ಮನೆಯಲ್ಲಿ ಮೂರ್ನಾಲ್ಕು ದಿನಗಳ ಕೆಲಸ ಇದೆ ಎಂದಾದರೆ ನಿಮ್ಮ ಮನೆಯಲ್ಲಿಯೇ...

ಹರಿವ ಹೊಳೆಯಲ್ಲಿನ ಪಿಸುಮಾತು ಆತ್ಮವನ್ನು ಸೀಳಿಕೊಂಡು ಬರುವ ದನಿ

ಸೃಜನಶೀಲ ಮನಸ್ಸು ಸದಾ ವಸ್ತುವಿನ ಹುಡುಕಾಟದಲ್ಲಿರುತ್ತದೆ. ಬರೆಹಗಾರನೊಬ್ಬ ತನ್ನ ತುಡಿತದೊಂದಿಗೆ ಸದಾ ಧ್ಯಾನದಲ್ಲಿರುತ್ತಾನೆ. ಸಖ ಸಖಿಗಾಗಿ ಕಾಯುವಂತೆ, ಕೊಟ್ಟಿಗೆಯಲ್ಲಿರುವ ಕರು ಮೇಯಲು ಹೋದ ತನ್ನ ತಾಯಿ ಯಾವಾಗ ಮರಳುವುದೋ ಎಂಬ ಕಾತರದಿಂದ ಕೂಡಿರುವಂತೆ. ಸಖಿ ಎದುರಾದಾಗ ಸಖ ಅವಳನ್ನು ಮತ್ತೆಂದೂ ತಪ್ಪಿಸಿಕೊಂಡು ಹೋಗದಂತೆ ಬಿಗಿದಪ್ಪಿಕೊಳ್ಳುತ್ತಾನೆ. ಮೇಯಲು ಹೋದ ಹಸು ಮರಳಿದಾಗ ಕರು ಕೆಚ್ಚಲಿಗೆ ಬಾಯಿಕ್ಕಿ ಒಂದೂ ಹನಿ ಉಳಿಯದಂತೆ ಹಾಲನ್ನು ಹೀರಿಬಿಡುತ್ತದೆ. ನಾನೂ ಹೀಗೇ ನನ್ನ ಕತೆಯ ಹುಡುಕಾಟದಲ್ಲಿ ಎಲ್ಲೆಲ್ಲೋ ಅಲೆದಿದ್ದೇನೆ. ಯಾವುದು ಬದುಕು, ಯಾವುದು ಕತೆ,...

ಕಣ್ಣು ಕಿವಿ ತೆರೆದಿಟ್ಟುಕೊಂಡಾಗ…

ಬದುಕು ಕಲಿಸುವಷ್ಟು ಚೆನ್ನಾಗಿ ಪಾಠವನ್ನು ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಬದುಕಿನಿಂದ ಕಲಿಯುವುದಕ್ಕೆ ನಾವು ಕಣ್ಣನ್ನು, ಕಿವಿಯನ್ನು ಸದಾ ತೆರೆದಿಟ್ಟುಕೊಳ್ಳಬೇಕು ಅಷ್ಟೇ. ಜಗತ್ತಿನ ಬಹುದೊಡ್ಡ ದಾರ್ಶನಿಕ ಗೌತಮ ಬುದ್ಧ ಕಲಿತದ್ದು ಬದುಕಿನಿಂದಲೇ. ಅವನನ್ನು ತಲ್ಲಣಗೊಳಿಸಿದ ಮೂರ್ನಾಲ್ಕು ಘಟನೆಗಳು ಅವನನ್ನು ಅದರ ಬಗೆಗೆ ಚಿಂತಿಸುವುದಕ್ಕೆ ಹಚ್ಚುತ್ತದೆ. ಅವನು ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದೂ ಬದುಕಿನಿಂದಲೇ. ತಮ್ಮ ಎಲ್ಲ ಸಮಸ್ಯೆಗಳ ಮೂಲ ಹಾಗೂ ಅವುಗಳಿಗೆ ಪರಿಹಾರ ಈ ಜಗತ್ತಿನಲ್ಲಿಯೇ ಇದೆ ಎಂಬ ಸತ್ಯವನ್ನು ಕಂಡುಕೊಂಡಾಗ ಯಾರೊಬ್ಬರೂ ನಿರಾಶರಾಗುವ ಪ್ರಸಂಗ...

ನಾನು… ನಾನೇ…. ನಾನು…

ಮನುಷ್ಯನು ಜಗತ್ತಿನಲ್ಲಿ ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ ಎಂಬ ಪ್ರಶ್ನೆಯನ್ನು ಎಸೆದರೆ ತನ್ನ ಹೆಂಡತಿಯನ್ನು, ತನ್ನ ಗಂಡನನ್ನು, ತನ್ನ ಮಗನನ್ನು, ತನ್ನ ಮಗಳನ್ನು, ತನ್ನ ತಂದೆ, ತಾಯಿಯನ್ನು…. ಹೀಗೆ ಏನೇನೋ ಉತ್ತರಗಳು ದೊರೆಯಬಹುದು. ಕೆಲವರು ಎಲ್ಲ ಸಂಬಂಧಿಗಳನ್ನು ಬಿಟ್ಟು ಸಾಕಿದ ನಾಯಿಯನ್ನೋ, ಬೆಕ್ಕನ್ನೋ ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಬಹುದು. ಇವೆಲ್ಲ ಪ್ರೀತಿಯ ಹಾದಿಯಲ್ಲಿಯ ಕೆಲವು ಹೆಜ್ಜೆಗಳ ಕ್ರಮಣ ಅಷ್ಟೇ. ಹಾಗಾದರೆ ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ಯಾರನ್ನು? ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ತನ್ನನ್ನೇ. ತನ್ನನ್ನೇ ತಾನು...

ಬ್ರದರ್ ಸ್ಕೂಲಿನ ದೊಡ್ಡ ಗಂಟೆ

ಹೊನ್ನಾವರದ ಪೇಟೆಯಲ್ಲಿ ಕೋಳಿ ಕೂಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಸುಕಿನ ಐದು ಗಂಟೆ ಎಂದರೆ ಬ್ರದರ್ ಸ್ಕೂಲಿನ ದೊಡ್ಡ ಗಂಟೆ ಬಡಿದುಕೊಳ್ಳುತ್ತಿತ್ತು. ಬೆಳಗಾಯಿತು ಎಂದು ಅದು ಸಾರುತ್ತಿತ್ತು. ಬರೀ ಪೇಟೆಯೇ ಏಕೆ, ಕೆಳಗಿನ ಪಾಳ್ಯ, ಯೇಸು ಬಂದರ, ಬಿಕಾಸನ ತಾರಿ, ಮಂಜಗುಣಿಕೇರಿ, ರಾಮತೀರ್ಥ ರಸ್ತೆಯಲ್ಲೆಲ್ಲ ಈ ಗಂಟೆಯ ನಾದ ಅನುರಣಿಸುತ್ತಿತ್ತು. ಬ್ರದರ್ ಸ್ಕೂಲಿನಲ್ಲಿ ಕೇರಳ ಕಡೆಯ ಹುಡುಗರು ಓದಲೆಂದು ಬಂದು ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಸ್ಕೂಲಿನ ಗೋಪುರದಲ್ಲಿ ಒಂದು ದೊಡ್ಡ ಗಂಟೆಯನ್ನು ಕಟ್ಟಲಾಗಿತ್ತು. ಬೆಳಗಿನ ಐದು ಗಂಟೆ...

ರೇಡಿಯೋ ಅಂದ್ರೆ ಕಾಮೆಂಟರಿ, ಕೃಷಿರಂಗ ಮತ್ತು.. ಮತ್ತು… ಮತ್ತು…

ಆ ಚೀಟಿ ಎತ್ತುವ ಹೊಣೆ ನನ್ನ ಮೇಲೆಯೇ ಬಂತು. ನಮ್ಮ ಮನೆ ಪಾಲಾಗುತ್ತಿತ್ತು. ನಮ್ಮ ತಂದೆ ಮತ್ತು ನಮ್ಮ ಚಿಕ್ಕಪ್ಪ ಬೇರೆಬೇರೆ ಉಳಿಯಲು ನಿರ್ಧರಿಸಿದ್ದರು. ಮನೆಯಲ್ಲಿಯ ಎಲ್ಲ ವಸ್ತುಗಳೂ ಪಾಲಾಗಿದ್ದವು. ಊರಿನ ಪಂಚರೆಲ್ಲ ಬಂದು ಕುಳಿತಿದ್ದರು. ಒಂದೊಂದೇ ಇರುವ ವಸ್ತುಗಳನ್ನು ಒಬ್ಬರಿಗೊಂದು ಒಬ್ಬರಿಗೊಂದು ಎಂದು ಪಂಚರು ಹಂಚಿದರು. ಕೊನೆಯಲ್ಲಿ ಉಳಿದದ್ದು ಆ ಫಿಲಿಪ್ಸ್ ರೇಡಿಯೋ ಮಾತ್ರ. ಅದಕ್ಕೆ ಸರಿಹೊಂದುವಂಥ ಬೇರೊಂದು ವಸ್ತು ಇರಲಿಲ್ಲ. ಹೀಗಾಗಿ ಅದು ಯಾರ ಸೊತ್ತಾಗಬೇಕು ಎಂಬುದನ್ನು ನಿರ್ಧರಿಸಲು ಚೀಟಿ ಎತ್ತುವುದೆಂದು ಪಂಚರಲ್ಲಿ ಒಬ್ಬರು...