ಬಲೆ

ಕಾದಂಬರಿ ಬಲೆ ನಾನು ಬರೆದ ಮೊದಲ ಕಾದಂಬರಿ. ಎಂ.ಎ. ಅಂತಿಮ ವರ್ಷದಲ್ಲಿ ಸೃಜನ ಸಾಹಿತ್ಯದ ಪತ್ರಿಕೆಗೆ ಡೆಸರ್ಟೇಷನ್‌ಗಾಗಿ ಬರೆದ ಕಾದಂಬರಿ ಇದು. ನಮ್ಮ ಗುರುಗಳಾಗಿದ್ದ ಡಾ.ಬುದ್ದಣ್ಣಹಿಂಗಮಿರೆಯವರ ಪ್ರೋತ್ಸಾಹ ಇದಕ್ಕೆ ಕಾರಣ. ನಮ್ಮ ಗುರುಗಳೂ ಮತ್ತು ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎಂ.ಎಂ. ಕಲಬುರ್ಗಿಯವರೂ ಇದನ್ನು ಮೆಚ್ಚಿಕೊಂಡಿದ್ದರು.. ಇದು 1984ರಲ್ಲಿ. ನಂತರ ಇದನ್ನು ಹೊನ್ನಾವರ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದ ಜಿ.ಎಸ್. ಅವಧಾನಿಯವರ ಸಹಾಯದಿಂದ, ಹಿರಿಯ ಪತ್ರಕರ್ತ ಜಿ.ಯು.ಭಟ್‌ ಅವರ ಪ್ರೋತ್ಸಾಹದಿಂದ ಕರಾವಳಿ ಗ್ರಾಮವಿಕಾಸ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ನಂತರ ಇದನ್ನು...

ಸಲಿಂಗಿಗಳ ಒಳ ಬದುಕಿನ ಚಿತ್ರಣ ನೀಡುವ ಲೈಂಗಿಕ ಜಾತಕ

ಕನ್ನಡದ ಈಗಿನ ಗದ್ಯ ಬರೆಹಗಾರರಲ್ಲಿ ಕೆ.ಸತ್ಯನಾರಾಯಣ ಅವರು ಪ್ರಮುಖರು. ಗದ್ಯ ಬರೆಹಗಾರರು ಎಂದು ಉದ್ದೇಶಪೂರ್ವಕವಾಗಿ ನಾನು ಇಲ್ಲಿ ಹೇಳಿದ್ದೇನೆ. ಅವರು ಕವಿತೆ ಬರೆದಿಲ್ಲ. ಆದರೆ ಇದುವರೆಗೆ ಒಂಬತ್ತು ಕಾದಂಬರಿ, ಹದಿನಾಲ್ಕು ಕಥಾಸಂಕಲನಗಳು, ಆರು ಪ್ರಬಂಧ ಸಂಕಲನಗಳು, ವಿಮರ್ಶೆ-ಸಾಂಸ್ಕೃತಿಕ ಬರೆಹ ಎಂದು ಆರು ಸಂಕಲನಗಳು, ನಾಲ್ಕು ಅಂಕಣ ಬರೆಹಗಳ ಕೃತಿಗಳು, ಒಂದು ಪ್ರವಾಸ ಕಥನ, ಒಂದು ವ್ಯಕ್ತಿ ಚಿತ್ರ, ಮೂರು ಆತ್ಮಚರಿತ್ರೆ ಹೀಗೆ ಇಷ್ಟೊಂದು ವೈವಿಧ್ಯಮಯ ಬರೆಹಗಳನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮೂರು ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ....