*ಉಲ್ಲಂಘಿಸಬಾರದ ಗಡಿ ಗೆರೆ ನಾವು ಲಕ್ಷ್ಮಣ ರೇಖೆಯನ್ನು ದಾಟುವುದಿಲ್ಲ ಎಂದು ಎರಡು ರಾಜಕೀಯ ಪಕ್ಷಗಳು ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಲಕ್ಷ್ಮಣ ರೇಖೆ ದಾಟಿದ್ದೇ ಅವನ ಅಧೋಗತಿಗೆ ಕಾರಣವಾಯಿತು ಎಂದು ಯಾರ ಬಗ್ಗೆಯೋ ಯಾರೋ ಹೇಳಿದ್ದು ಕಿವಿಯ ಮೇಲೆ ಬಿದ್ದಿರುತ್ತದೆ. ಈ ಲಕ್ಷ್ಮಣ ರೇಖೆ ಎನ್ನುವುದು ಮೀರಲೇ ಬಾರದ ಮಿತಿಯಾಗಿರುತ್ತದೆ. ಅದನ್ನು ಮೀರಿದರೆಂದರೆ ಗಂಡಾಂತರ. ಏನಿದು ಲಕ್ಷ್ಮಣ ರೇಖೆ? ರಾಮಾಯಣದಲ್ಲಿ ಸೀತಾಪಹರಣದ ಘಟನೆ ಗೊತ್ತಲ್ಲವೆ? ಚಿನ್ನದ ಜಿಂಕೆಯ ಬೇಟೆಗೆ ಶ್ರೀರಾಮ ಹೋಗುತ್ತಾನೆ. ಮಾರೀಚನನ್ನು ಬಾಣದಿಂದ ಕೊಲ್ಲುತ್ತಾನೆ. ಮಾರೀಚ ಸಾಯುವಾಗ ಓ...
*ಚತುರತೆಯನ್ನು ಇದಕ್ಕೂ ಪರಿಣಾಮಕಾರಿಯಾಗಿ ಹೇಳುವುದು ಸಾಧ್ಯವಿಲ್ಲ ಅವನು ಚಾಪೆ ಕೆಳಗೆ ತೂರಿದರೆ ಇವನು ರಂಗೋಲಿ ಕೆಳಗೇ ತೂರಿದನು ಎಂದು ಹೇಳುವುದನ್ನು ಕೇಳಿದ್ದೇವೆ. ಒಬ್ಬ ಬಹಳ ಚಾಣಾಕ್ಷ ಎಂದು ಹೇಳುವುದಕ್ಕೆ ಈ ಉಪಮೆಯನ್ನು ಬಳಸುತ್ತಾರೆ. ಬಹಳ ಒಳ್ಳೆಯದಕ್ಕೆ ಹೇಳುವಾಗಲೂ ಇದನ್ನು ಹೇಳುತ್ತಾರೆ. ಬಹಳ ಕೆಟ್ಟವನ ಚಾಣಾಕ್ಷತೆಯನ್ನು ಹೇಳುವಾಗಲೂ ಇದನ್ನೇ ಹೇಳುತ್ತಾರೆ. ಒಬ್ಬನ ಚತುರತೆಗಿಂತ ಇನ್ನೊಬ್ಬನ ಚತುರತೆ ಮಿಗಿಲು ಎಂದು ಹೇಳುವಾಗ ಒಳ್ಳೆಯದು ಕೆಟ್ಟದ್ದು ಎಂಬ ತಾರತಮ್ಯ ತಲೆ ಎತ್ತುವುದಿಲ್ಲ. ಚಾಪೆಯ ಕೆಳಗೆ ತೂರಿ ಹೋಗುವುದಕ್ಕೆ ಭೂಮಿ ಮತ್ತು ಚಾಪೆಯ...
*ಇದು ನಾಯಕರ ದಾರಿಯಲ್ಲ, ಅನುಯಾಯಿಗಳದ್ದು ರಾಮ ಮತ್ತು ರಾವಣ ಬದ್ಧ ವೈರಿಗಳು. ಇಬ್ಬರಿಗೂ ಸ್ವಸ್ತಿ ಹೇಳಿಕೊಂಡು ಬದುಕುವುದು ಹೇಗೆ? ಎರಡೂ ಕಡೆಯೂ ಒಳ್ಳೆಯನಾಗುವುದು ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲ. ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಎರಡೂ ಕಡೆಯವರು ಬಲಶಾಲಿಗಳಾಗಿದ್ದಾಗ ಯಾರು ಗೆಲ್ಲುತ್ತಾರೆ, ಯಾರ ಕೈ ಮೇಲಾಗುತ್ತದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಆಗ ಅವರ ಹತ್ತಿರದಲ್ಲಿರುವವರು ಒಂದು ಸಮಾನಾಂತರವನ್ನು ಕಾಯ್ದುಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಾರೆ. ತಕ್ಕಡಿಯ ಯಾವ ಬದಿ ಯಾವಾಗ ಮೇಲೇಳುತ್ತದೆ ಗೊತ್ತಾಗುವುದಿಲ್ಲ. ಒಬ್ಬರು ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೆ ಇಂಥ ಲೆಕ್ಕಾಚಾರದ ನಡೆ...
*ಈ ರಾಜ್ಯದಲ್ಲಿ ಸುಭಿಕ್ಷವೇ ಸುಭಿಕ್ಷ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ವ್ಯಕ್ತಿ ಪ್ರಸ್ತುತ ಕಾಲದಲ್ಲಿ ಯಾರು ಇದ್ದಾರೆ ಎಂದು ವಾಲ್ಮೀಕಿ ಮಹರ್ಷಿಯು ನಾರದ ಮುನಿಗಳನ್ನು ಪ್ರಶ್ನಿಸುತ್ತಾರಂತೆ. ಆಗ ನಾರದರು ವಾಲ್ಮೀಕಿಗೆ ಶ್ರೀರಾಮನ ಚರಿತ್ರೆಯನ್ನು ಹೇಳುತ್ತಾರಂತೆ. ಶ್ರೀರಾಮನ ರಾಜ್ಯದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ಇರಲಿಲ್ಲವಂತೆ. ಎಲ್ಲರೂ ಸುಖಿಗಳಾಗಿದ್ದರಂತೆ. ಶ್ರೀರಾಮ ಸ್ವತಃ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ. ಜನರ ಅಪವಾದಕ್ಕೆ ಅಂಜಿ ತನ್ನ ಪತ್ನಿ ಸೀತೆಯನ್ನು ತ್ಯಾಗ ಮಾಡಿದ್ದ. ನ್ಯಾಯದಾನದಲ್ಲಿ ಶ್ರೀರಾಮನು ಅತ್ಯಂತ ಹೆಸರುವಾಸಿಯಾಗಿದ್ದ....
*ದುಷ್ಟ ಸಂತತಿಗೆ ಸಾವಿಲ್ಲವಂತೆ ಸಮಾಜಕ್ಕೆ ಸದಾ ಕೆಡುಕನ್ನು ಮಾಡುತ್ತಿರುವ ಜನರು ಇರುತ್ತಾರೆ. ಅವರಿಂದ ಎಂದಿಗೂ ಯಾರಿಗೂ ಒಳಿತು ಆಗುವುದಿಲ್ಲ. ಅವನು ಸಾಯಲಿ ಎಂದು ಜನ ದಿನವೂ ಬಯಸುತ್ತಿರುತ್ತಾರೆ. ಒಬ್ಬ ದುಷ್ಟ ಹೋದರೆ ಅವನ ಹೆಜ್ಜೆಯಲ್ಲೇ ಕಾಲಿಟ್ಟು ಇನ್ನೊಬ್ಬ ದುಷ್ಟ ಬರುತ್ತಾನೆ. ಇಂಥ ದುಷ್ಟ ಪರಂಪರೆ ಮುಂದುವರಿಯುವುದನ್ನು ಕಂಡಾಗ ನೊಂದವರು ರಕ್ತಬೀಜಾಸುರ ಸಂತತಿ ಎಂದು ಕರೆಯುತ್ತಾರೆ. ಯಾರೀತ ರಕ್ತಬೀಜಾಸುರ? ದೇವೀಪುರಾಣದಲ್ಲಿ ಈ ರಕ್ತಬೀಜಾಸುರನ ಪ್ರಸ್ತಾಪ ಬರುತ್ತದೆ. ಮಹಿಷಾಸುರನ ಸೇನಾಪತಿಗಳಲ್ಲಿ ಒಬ್ಬ ಈ ರಕ್ತಬೀಜಾಸುರ. ಇವನ ಮೈಯಿಂದ ಬಿದ್ದ ಹನಿ...
*ಕುಟುಂಬದೊಳಗಿನ ಜಗಳ ಇದು ತಮ್ಮ ತಮ್ಮೊಳಗೇ ಬಡಿದಾಡುವವರನ್ನು ನೋಡಿ ಯಾದವಿ ಕಲಹ ಅವರದು ಎಂದು ಹೇಳುತ್ತಾರೆ. ಒಗ್ಗಟ್ಟೇ ಬಲ ನಿಜ. ಒಗ್ಗಟ್ಟಿಲ್ಲದಿದ್ದರೆ ಯಾದವರ ಹಾಗೆ ತಮ್ಮತಮ್ಮೊಳಗೇ ಬಡಿದಾಡಿ ನಾಶವಾಗುತ್ತಾರೆ. ಶ್ರೀಕೃಷ್ಣ ಜನಿಸಿದ ಯಾದವ ಕುಲ ಅತ್ಯಂತ ಪ್ರಸಿದ್ಧ ಮತ್ತು ಅಜೇಯವಾಗಿತ್ತು. ಅವರನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಇದರಿಂದಾಗಿ ಸಹಜವಾಗಿಯೇ ಅವರಲ್ಲಿ ಅಹಂಕಾರವೂ ಮೂಡಿತ್ತು. ಯಾರನ್ನು ಬೇಕಾದರೂ ತಾವು ನಿಗ್ರಹಿಸಬಲ್ಲೆವು ಎಂಬ ಭಾವದಲ್ಲಿ ಅವರಿದ್ದಾಗ ದ್ವಾರಕೆಗೆ ಒಮ್ಮೆ ದೂರ್ವಾಸ ಮುನಿ ಆಗಮಿಸುತ್ತಾರೆ. ಮದೋನ್ಮತ್ತರಾದ ಯಾದವರು ಕೃಷ್ಣನ ಮಗ ಸಾಂಬನಿಗೆ...
*ಇದು ಮಿಲಿಯನ್ ಡಾಲರ್ ಕ್ವೆಶ್ಚನ್ಗೆ ಸಂವಾದಿಯೇ? ಮುಂದೇನಾಗುತ್ತದೆ ಎಂದು ಊಹಿಸಲಾಗದ ಸಂದರ್ಭದಲ್ಲಿ, ಉತ್ತರವೇ ಹೇಳಲಾಗದಂಥ ಕಗ್ಗಂಟು ಎದುರಾದಾಗಲೆಲ್ಲ ಇದೊಂದು ಯಕ್ಷ ಪ್ರಶ್ನೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಏನಿದು ಯಕ್ಷ ಪ್ರಶ್ನೆ? ಯಾರು ಯಕ್ಷ? ಪ್ರಶ್ನೆ ಕೇಳಿದ್ದು ಯಾರಿಗೆ? ಅದೇನು ಪ್ರಶ್ನೆಗಳು? ಪಗಡೆಯಾಟದಲ್ಲಿ ಸೋತುಹೋದ ಪಾಂಡವರು ವನವಾಸಕ್ಕೆ ತೆರಳುತ್ತಾರೆ. ಅವರ ವನವಾಸ ಮುಗಿದು ಇನ್ನೇನು ಅಜ್ಞಾತವಾಸಕ್ಕೆ ತೆರಳಬೇಕು ಎನ್ನುವ ಸಂಧಿಸಮಯದಲ್ಲಿ ಈ ಪ್ರಸಂಗ ನಡೆಯುತ್ತದೆ. ಕಾಡಿನಲ್ಲಿದ್ದ ಪಾಂಡವರಿಗೆ ವಿಪರೀತ ಬಾಯಾರಿಕೆ. ಧರ್ಮರಾಯನು ನೀರನ್ನು ತೆಗೆದುಕೊಂಡು ಬರುವಂತೆ ನಕುಲನನ್ನು...
*ಬಲಿ ಕೊಡುತ್ತೇವೆ ಎಂಬ ಎಚ್ಚರಿಕೆ ಇದು ಉತ್ತರ ಕರ್ನಾಟಕದ ಜನರಿಗೆ ಮುಂದೈತೆ ಮಾರಿ ಹಬ್ಬ ಎಬ ಮಾತು ತಕ್ಷಣ ಅರ್ಥವಾಗಿಬಿಡುತ್ತದೆ. ಈಗೇನೋ ತಪ್ಪಿಸಿಕೊಂಡುಬಿಟ್ಟೆ. ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇವೆ. ನಿನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ. ನೀನು ಸಾಯುವಂತೆ ಹೊಡೆಯುತ್ತೇವೆ ಎಂಬೆಲ್ಲ ಅರ್ಥಗಳು ಇದರಲ್ಲಿವೆ. ಮಾರಿ ಹಬ್ಬದಲ್ಲಿ ಸಾಮಾನ್ಯವಾಗಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಬಲಿ ಇಲ್ಲದ ಮಾರಿ ಹಬ್ಬ ಇಲ್ಲವೇ ಇಲ್ಲ. ಮಾರಿ ಹಬ್ಬದಲ್ಲಿ ಬಲಿ ಕೊಡುವ ಪ್ರಾಣಿಯನ್ನು ಹೇಗೆ ಮಾಲೆಗೀಲೆ ಹಾಕಿ ಶೃಂಗಾರಗೊಳಿಸುತ್ತಾರೆ ಎಂಬುದಕ್ಕೆ ದೇವನೂರ ಮಹಾದೇವ ಅವರು...
*ಅಸಾಂದರ್ಭಿಕವಾಗಿ ಪ್ರವರ ಹೇಳಿಕೊಳ್ಳುವವರು ಊಟ ಆಯಿತೆ ಕೇಳಿದರೆ ಮುಂಡಾಸು ಮೂವತ್ತು ಮೊಳ ಅಂದ ಎಂಬ ಮಾತೊಂದಿದೆ. ಅಳಿಯನೊಬ್ಬ ಹೊಸದಾಗಿ ಮುಂಡಾಸವನ್ನು ಖರೀದಿಸಿದ್ದ. ಆ ಮುಂಡಾಸವನ್ನು ತೋರಿಸುವುದಕ್ಕಾಗಿಯೇ ಮಾವನ ಮನೆಗೆ ಹೋಗುತ್ತಾನೆ. ಚೆನ್ನಾಗಿ ನೆರಿಗೆಗಳನ್ನು ಮಾಡಿಕೊಂಡು ತಲೆಗೆ ಸುತ್ತಿಕೊಂಡಿದ್ದ. ಮಾವನ ಮನೆಯಲ್ಲಿ ಯಾರೂ ಅವನ ಮುಂಡಾಸದ ಬಗ್ಗೆ ಮಾತೇ ಆಡಲಿಲ್ಲ. ಮಾವನು, ಮನೆಯಲ್ಲಿ ಎಲ್ಲರೂ ಕ್ಷೇಮವೆ ಎಂದಷ್ಟೇ ಕೇಳಿ ಸುಮ್ಮನಾದ. ಅತ್ತೆ ಬಂದವಳು ತನ್ನ ಮಗಳು, ಮೊಮ್ಮಕ್ಕಳು ಮೊದಲಾದವರ ಕುರಿತು ಕೇಳಿ ಸುಮ್ಮನಾದಳು. ಅಳಿಯನ ತಾಳ್ಮೆ ತಪ್ಪತೊಡಗಿತು. ತನ್ನ...
*ಯೋಗ್ಯತೆಯನ್ನು ಗುರುತಿಸುವುದೂ ಒಂದು ವಿಶೇಷ ಕಲೆ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಅದು ಏನು ಮಾಡುತ್ತದೆ? ಒಮ್ಮೆ ಅದನ್ನು ಮೂಸಿ ನೋಡಿ ಎಸೆದುಬಿಡುತ್ತದೆ. ಮಾಣಿಕ್ಯದ ಮೌಲ್ಯ ಅದಕ್ಕೇನು ಗೊತ್ತಿದೆ? ಅಥವಾ ಮಾಣಿಕ್ಯದಿಂದ ಅದಕ್ಕೆ ಆಗಬೇಕಾದದ್ದು ಏನೂ ಇರುವುದಿಲ್ಲ. ಮಂಗನಿಗೆ ಉಪಯುಕ್ತವಾದದ್ದು ಮಾವಿನ ಹಣ್ಣೋ ಇನ್ನೇನೋ ಆಗಿದ್ದರೆ ಅದು ಅದನ್ನು ಮಾತ್ರ ತಿನ್ನುತ್ತಿತ್ತು. ವಸ್ತು ಎಷ್ಟೇ ಅಮೂಲ್ಯವಾದದ್ದು ಆಗಿರಬಹುದು. ಆದರೆ ಅದು ಉಪಯೋಗಕ್ಕೆ ಬರದಿದ್ದರೆ ಅದು ಕಸಕ್ಕಿಂತ ನಿಕೃಷ್ಟ ಎಂಬುದು ಈ ಹೇಳಿಕೆಯ ಒಂದು ಮುಖ. ಇದಕ್ಕೆ ಇನ್ನೊಂದು...