ಹುಲಿಗಾಯ

*ಪರಿಹಾರವೇ ಇಲ್ಲದ ಸಮಸ್ಯೆ ಒಮ್ಮೆ ಕಾಡಿನಲ್ಲಿ ಹುಲಿಗೆ ತೀವ್ರ ಗಾಯವಾಗಿತ್ತಂತೆ. ಕಾಡಿನ ಹುಲಿಗೆ ಔಷಧ ನೀಡುವವರು ಯಾರು? ಹುಲಿಗೆ ಹುಲಿಯೇ ವೈದ್ಯ. ತನ್ನ ಗಾಯವನ್ನು ಮುಚ್ಚಲು ಅದು ತನ್ನದೇ ಶರೀರದ ಇನ್ನೊಂದು ಕಡೆಯ ಚರ್ಮವನ್ನು ಕಿತ್ತು ಮೆತ್ತಿತು. ಹಳೆಯ ಗಾಯ ವಾಸಿಯಾಯಿತು. ಹೊಸ ಗಾಯ ಕೊಳೆಯತೊಡಗಿತು. ಮತ್ತೆ ಇನ್ನೊಂದು ಕಡೆಯ ಚರ್ಮ ಕಿತ್ತು ಅಲ್ಲಿ ತೇಪೆ ಹಾಕಿತು. ಹೀಗೆ ಹುಲಿಯ ದೇಹದಲ್ಲಿ ಗಾಯ ವಾಸಿಯಾಗಲೇ ಇಲ್ಲ. ಜಾಗ ಮಾತ್ರ ಬೇರೆಯಾಗುತ್ತ ಹೋಯಿತು. ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಮನುಷ್ಯನೂ...

ಹಾವು ಮುಂಗಸಿ

*ಬದ್ಧ ವೈರತ್ವವನ್ನು ಇದು ಹೇಳುತ್ತದೆ ಇಬ್ಬರು ಶತ್ರುಗಳು ಬಹಳ ವೈರಿಗಳು ಎಂದು ಒತ್ತಿ ಹೇಳುವುದಕ್ಕೆ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ರಾಜಕೀಯದಲ್ಲಿ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ಇಬ್ಬರ ಹೋರಾಟವನ್ನು ಹೇಳುವಾಗಲೂ ಅವರಿಬ್ರೂ ಹಾವು ಮುಂಗಸಿಯ ಹಾಗೆ ಹೋರಾಡಿದರು ಎಂದು ಹೇಳುತ್ತೇವೆ. ಅಂದರೆ ಜೀವದ ಹಂಗು ತೊರೆದು ಹೋರಾಡಿದರು. ಇಬ್ಬರಲ್ಲಿ ಯಾರಾದರೂ ಒಬ್ಬರು ಸಾಯಬಹುದಿತ್ತು ಎಂಬ ತಾತ್ಪರ್ಯ. ಹಾವು ಮುಂಗಸಿಯ ನಡುವೆ ಅದೇನು ಶತ್ರುತ್ವ? ಇಲ್ಲಿ ಶತ್ರುತ್ವದ ಪ್ರಶ್ನೆ ಇಲ್ಲ. ಮುಂಗಲಿಗಳ...

ಹರಿಶ್ಚಂದ್ರ ಘಾಟ್‌

*ಸತ್ಯಹರಿಶ್ಚಂದ್ರ ಇಲ್ಲಿ ಕಾವಲುಗಾರನಾಗಿದ್ದ ಯಾರ ಮೇಲಾದರೂ ತುಂಬಾ ಕೋಪ ಬಂದಾಗ, ನಿನ್ನ ಹರಿಶ್ಚಂದ್ರ ಘಾಟ್‌ಗೆ ಕಳುಹಿಸುತ್ತೇನೆ ಎಂದು ಹೇಳುವವರಿದ್ದಾರೆ. ಅಂದರೆ ಶ್ಮಶಾನಕ್ಕೆ ಕಳುಹಿಸುತ್ತೇನೆ ಎಂದೇ ಅರ್ಥ. ಎಷ್ಟೋ ಊರುಗಳಲ್ಲಿ ಶ್ಮಶಾನಗಳಿಗೆ ಹರಿಶ್ಚಂದ್ರ ಘಾಟ್‌ ಎಂದು ಫಲಕದಲ್ಲಿ ಬರೆದಿರುವುದನ್ನು ಕಂಡಿದ್ದೇವೆ. ಏನಪ್ಪಾ ಸೈಟುಗೀಟು ಮಾಡಿದ್ಯಾ? ಎಂದು ಪ್ರಶ್ನಿಸಿದರೆ, ಹರಿಶ್ಚಂದ್ರ ಘಾಟ್‌ನಲ್ಲಿ ಆರಡಿ ಮೂರಡಿ ಸೈಟ್‌ ಮಾಡಿದ್ದೀನಿ ಎಂದು ಹೇಳುವವರನ್ನು ಕಂಡಿದ್ದೇವೆ. ಪುಣ್ಯಕ್ಷೇತ್ರ ಕಾಶಿಯಲ್ಲಿ ಅಪರಕರ್ಮವನ್ನು ಮಾಡುವ ಸ್ಥಳಕ್ಕೆ ಹರಿಶ್ಚಂದ್ರ ಘಾಟ್‌ ಎಂದು ಹೇಳುತ್ತಾರೆ. ಕಾಶಿಗೆ ಹತ್ತಿರದವರೆಲ್ಲ ಸತ್ತರೆ ಈ...

ಹನುಮನ ಬಾಲ

*ಜಗ್ಗಿದಷ್ಟೂ ಹಿಗ್ಗುವುದು ಈ ಬಾಲ ಹಿಗ್ಗಿಸಿ ಹಿಗ್ಗಿಸಿ ಬರೆಯುವವರನ್ನು ಕಂಡಾಗ, ತುಂಡಿಲ್ಲದೆ ಮಾತನಾಡುವುದನ್ನು ಕೇಳಿದಾಗ ಅದೇನು ಹನುಮಂತನ ಬಾಲದ ಹಾಗೆ ಬೆಳೆಸುತ್ತಾನಪ್ಪ ಎಂದು ಮೂಗುಮುರಿಯುತ್ತೇವೆ. ಅವನದೇನು ಹರಿಕಥೆ ಮುಗಿಯುವುದೇ ಇಲ್ಲ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ಉದ್ಗಾರ ತೆಗೆಯುತ್ತೇವೆ. ಏನಿದು ಹನುಮಂತನ ಬಾಲ? ರಾಮನ ಭಂಟ ಹನುಮಂತ ಎಲ್ಲರಿಗೂ ಗೊತ್ತು. ಆದರೆ ಅವನ ಬಾಲದ ಬಗ್ಗೆ ಗೊತ್ತಿದ್ದವರು ವಿರಳ. ಸೀತಾನ್ವೇಷಣೆಗೆ ಹನುಮಂತ ಉಳಿದವರೊಂದಿಗೆ ಹೊರಡುತ್ತಾನೆ. ಹನುಮಂತ ಕಾಮರೂಪಿ. ಅಂದರೆ ಇಷ್ಟಪಟ್ಟ ರೂಪವನ್ನು ಧರಿಸುವ ಸಾಮರ್ಥ್ಯ ಅವನಲ್ಲಿತ್ತು....

ಹಗ್ಗಜಗ್ಗಾಟ

*ಪರಮ ಚೌಕಾಶಿ ಇದು ಅವನೂ ಬಿಡ್ತಾ ಇಲ್ಲ, ಇವನೂ ಬಿಡ್ತಾ ಇಲ್ಲ. ಇಬ್ಬರದೂ ಹಗ್ಗಜಗ್ಗಾಟ ಜೋರಾಗಿ ನಡೆದಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯವಹಾರದ ಚೌಕಾಶಿಯಲ್ಲೋ ನಿಜವಾದ ಬಲಪ್ರದರ್ಶನದಲ್ಲೋ ಸ್ವಲ್ಪವೂ ಬಿಟ್ಟುಕೊಡದೆ ಜಿದ್ದಿನಿಂದ ವರ್ತಿಸುವುದು ಹಗ್ಗಜಗ್ಗಾಟ. ರಾಜಕೀಯ ಪಕ್ಷಗಳು ಅಧಿಕಾರ ಹಂಚಿಕೆ ಸಂಬಂಧದಲ್ಲಿ ಇಂಥ ಹಗ್ಗಜಗ್ಗಾಟ ನಡೆಸುತ್ತವೆ. ಪರಮಾಣು ಒಪ್ಪಂದದ ವಿಷಯದಲ್ಲಿ ಯು.ಪಿ.ಎ. ಮತ್ತು ಎಡಪಕ್ಷಗಳು ನಡೆಸಿದ ಚೌಕಾಶಿ ಇಂಥ ಹಗ್ಗಜಗ್ಗಾಟಕ್ಕೆ ಉತ್ತಮ ಉದಾಹರಣೆ. ಹಗ್ಗಜಗ್ಗಾಟ ನಿಜವಾಗಿ ಒಂದು ಜನಪದ ಕ್ರೀಡೆ. ಒಂದು ಹಗ್ಗವನ್ನು ಎರಡೂ ಬದಿಯಲ್ಲಿ ಅಷ್ಟಷ್ಟೇ...

ಸೊಪ್ಪು ಹಾಕು

*ದೈವಕ್ಕೆ ರಕ್ಷಣೆಯ ಹೊಣೆ ಒಪ್ಪಿಸುವುದು ನಾನು ಅವನಿಗೆ ಸೊಪ್ಪು ಹಾಕುವುದಿಲ್ಲ ಎಂದು ಯಾರೋ ಹೇಳಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಆತನ ಮಾತಿನ ಭಾವಾರ್ಥವೂ ನಿಮಗೆ ವೇದ್ಯವಾಗಿರಬಹುದು. ಅವನಿಗೆ ನಾನು ಯಾವುದೇ ಗೌರವ ಕೊಡುವುದಿಲ್ಲ. ಅವನ ಮಾತು ನಾನು ಕೇಳುವುದಿಲ್ಲ. ಅವನ ಅಧೀನವಾಗಿ ನಾನು ಇರುವುದಿಲ್ಲ… ಹೀಗೆ ಅರ್ಥಪರಂಪರೆಯನ್ನು ಅದು ಹೇಳುತ್ತಿದೆ. ಏನಿದು ಸೊಪ್ಪು ಹಾಕುವುದು? ಸೊಪ್ಪು ಹಾಕಿದರೆ ಗೌರವ ನೀಡಿದಂತೆ ಅಂತ ಇಲ್ಲಿ ಅರ್ಥ ಹೊರಡುತ್ತದೆ. ಸೊಪ್ಪು ಹಾಕದಿರುವುದು ಇದರ ವಿರುದ್ಧ ಅರ್ಥವನ್ನು ನೀಡುತ್ತದೆ. ಊರ ಗಡಿಯಲ್ಲಿ ಒಂದು...

ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ. ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ...

ಸುಪಾರಿ

*ಹತ್ಯೆಗೆ ನೀಡುವ ವೀಳ್ಯ ಹಿಂದೂ ಸಂಪ್ರದಾಯದಲ್ಲಿ ಅಡಕೆಗೆ ಮಹತ್ವದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ದೇವರ ಪ್ರತಿಮೆಗೆ ಬದಲಾಗಿ ಅಡಕೆಯನ್ನೇ ಇಟ್ಟು ಪೂಜಿಸುವ ಪದ್ಧತಿಯೂ ಇದೆ. ಹಿಂದೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸದೆ ಇದ್ದ ಕಾಲದಲ್ಲಿ ಎಲೆ ಮತ್ತು ಅಡಕೆಯನ್ನು ನೀಡಿ ಶುಭಕಾರ್ಯಗಳಿಗೆ ಆಹ್ವಾನ ನೀಡಲಾಗುತ್ತಿತ್ತು. ಇದನ್ನು ವೀಳ್ಯ ಎಂದು ಕರೆಯಲಾಗುತ್ತಿತ್ತು. ಶತ್ರು ರಾಜನನ್ನು ಯುದ್ಧಕ್ಕೆ ಆಹ್ವಾನಿಸುವಾಗಲೂ ಎಲೆ ಅಡಕೆಯನ್ನು ಕಳುಹಿಸಲಾಗುತ್ತಿತ್ತು. ಇದು ರಣವೀಳ್ಯ. ಅಡಕೆಗೆ ಹಿಂದಿ, ಮರಾಠಿಯಲ್ಲಿ ಸುಪಾರಿ ಎಂದು ಕರೆಯುತ್ತಾರೆ. ಅವನ ಕೊಲೆಗೆ ಇವನು ಸುಪಾರಿ ಕೊಟ್ಟಿದ್ದಾನೆ...

ಸುಗ್ರೀವಾಜ್ಞೆ

*ಕಠಿಣವಾದ ಆದೇಶ ಸುಗ್ರೀವಾಜ್ಞೆ ಎಂಬ ಪದವನ್ನು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಯಾರಾದರೂ ಹೀಗೇ ಮಾಡು ಎಂದು ಕಟ್ಟುನಿಟ್ಟಾಗಿ ಹೇಳಿದರೆ, ನಿಂದೇನು ಸುಗ್ರೀವಾಜ್ಞೆನಾ ಎಂದು ಕೇಳುತ್ತಾರೆ. ಯಾವುದೋ ವಿಷಯದ ಕುರಿತು ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಎಂದು ಪತ್ರಿಕೆಯಲ್ಲಿ ಬಂದುದನ್ನು ಓದುತ್ತೇವೆ. ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಆಕೆಯನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಸಂಪಾದಿಸುತ್ತಾನೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಆತನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಿಕೊಡಬೇಕಾದ ಅನಿವಾರ್ಯತೆ ಈಗ ಸುಗ್ರೀವನ ಮೇಲೆ. ಸುಗ್ರೀವನು ವಾನರರನ್ನೆಲ್ಲ ಕರೆದು...

ಸಿಂಹಸ್ವಪ್ನ

*ಕೇಳಿದರೇ ಭಯವಾಗುವ ಸ್ಥಿತಿ ಎದುರಾಳಿಗಳಿಗೆ ಆತ ಸಿಂಹಸ್ವಪ್ನವಾಗಿದ್ದ ಎಂದು ವರ್ಣಿಸುವುದನ್ನು ಕೇಳಿದ್ದೇವೆ. ಅಂದರೆ ಎದುರಾಳಿಗಳು ಅವನನ್ನು ಕಂಡರೆ ಅಂಜುತ್ತಿದ್ದರು, ಎದುರಾಳಿಗಳಲ್ಲಿ ಆತ ಭಯವನ್ನು ಹುಟ್ಟಿಸುತ್ತಿದ್ದ, ಎದುರಾಳಿಗಳನ್ನು ನಾಶ ಮಾಡುವ ಸಾಮರ್ಥ್ಯ ಅತನಲ್ಲಿತ್ತು ಎಂದೆಲ್ಲ ಭಾವಾರ್ಥ ಇಲ್ಲಿ ಹುಟ್ಟುತ್ತದೆ. ಆತನ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ ಎಂದರೆ ಆತನ ಕ್ರೂರತೆಯನ್ನೂ ಇದು ಹೇಳುತ್ತದೆ. ಪೊಲೀಸ್‌ ಅಧಿಕಾರಿಯೊಬ್ಬನ ವಿಷಯದಲ್ಲಿ ಅಪರಾಧಿಗಳಿಗೆ ಸಂಬಂಧಿಸಿದಂತೆ ಹೀಗೆ ಹೇಳಿದರೆ ಆತ ದಕ್ಷ ಎಂದರ್ಥ. ಇದೇ ಮಾತುಗಳನ್ನು ಅಪರಾಧಿಗಳ, ರೌಡಿಗಳ ವಿಷಯದಲ್ಲಿ ಹೇಳಿದರೆ ಆತ ಕ್ರೂರಿ...