ವಿಮರ್ಶೆ

ಸಹಸ್ರ ಚಂದ್ರ

ಕನ್ನಡದಲ್ಲಿ ಹನಿಗವನಗಳು ಸಾಹಿತ್ಯದ ಒಂದು ಪ್ರಕಾರವಾಗಿ ಈಗಾಗಲೆ ಮನ್ನಣೆಯನ್ನು ಪಡೆದುಕೊಂಂಡಿವೆ. ಯಾವುದೋ ಒಂದು ಸುಂದರ ಕ್ಷಣವನ್ನು ಪಕ್ಕನೆ ಹಿಡಿದು ಅಕ್ಷರಗಳಲ್ಲಿ ಮೂಡಿಸುವುದಕ್ಕೆ ವಿಶೇಷ ಪ್ರತಿಭೆಯೇ ಬೇಕು. ಸಂಸ್ಕೃತ ಸಾಹಿತ್ಯದಲ್ಲಿ ಮುಕ್ತಕಗಳ ಪರಂಪರೆಯೇ ಇದೆ. ರಾಮಾಯಣದಂಥ ಮಹಾಕಾವ್ಯವನ್ನೇ ಅನುಷ್ಟುಪ್ ಎಂಬ ದ್ವಿಪದಿಯ ಛಂದಸ್ಸಿನಲ್ಲಿ ಬರೆಯಲಾಗಿದೆ. ಸುಭಾಷಿತಗಳ ದೊಡ್ಡ ಗಣಿಯೇ ಅಲ್ಲಿದೆ. ಉರ್ದುದಲ್ಲಿಯೂ ಇಂಥ ಹನಿಗವನಗಳ ಪರಂಪರೆ ಇದೆ. ಕನ್ನಡದಲ್ಲಿಯೂ ಭಾವನೆಗಳನ್ನು ಆರೆಂಟು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆದಿದೆ. ಜಪಾನಿನ ಹೈಕುಗಳ ಪ್ರಭಾವ ಇದರ ಮೇಲಿದೆ. ಈ ಪ್ರಭಾವ ಅವುಗಳ...

ಗಂಟೆ ಗೋಪುರ

ಅನುವಾದವೆಂದರೆ ಪುನರ್‌ಸೃಷ್ಟಿ. ಒಂದು ಭಾಷೆಯಲ್ಲಿರುವ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪುನರ್‌ನಿರ್ಮಾಣ ಮಾಡುವುದು. ಅನುವಾದಿಸುವವನಲ್ಲಿ ಇರಬೇಕಾದ ಪ್ರಮುಖ ಅರ್ಹತೆ ಎಂದರೆ ಎರಡೂ ಭಾಷೆಯಲ್ಲಿ ಇರಬೇಕಾದ ಸಮಾನ ಪ್ರಭುತ್ವ. ಅನುವಾದವು ಕೆಲವೊಮ್ಮೆ ಅನುಸೃಷ್ಟಿಯೂ ಆಗಬಹುದು. ಒಂದೇ ದೇಶದ ಸಮಾನ ಸಂಸ್ಕೃತಿಯ ಪಠ್ಯವೊಂದನ್ನು ಅನುವಾದಿಸುವುದು ಅಂಥ ಸವಾಲಿನ ಕೆಲಸವಾಗಲಾರದು. ಆದರೆ ಬೇರೊಂದು ದೇಶದ, ಭಿನ್ನ ಸಂಸ್ಕೃತಿಯ ಪಠ್ಯವನ್ನು ಅನುವಾದಿಸುವುದು ಕಷ್ಟದ ಕೆಲಸ. ಇಂಥ ಸಂದರ್ಭಗಳಲ್ಲಿ ಅನುವಾದಕನು ಆ ಸಂಸ್ಕೃತಿಯ ವಿಶೇಷತೆಗಳನ್ನು ಪ್ರಸ್ತಾವನೆಯ ರೂಪದಲ್ಲಿ ನೀಡುತ್ತಾನೆ. ಅಂದರೆ ಓದುಗನಿಗೆ ಅನುವಾದಿತ ಪಠ್ಯವು ಆಗಂತುಕ...

ಓಬಳವ್ವ ನಾಗತಿ

ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ಒಂದು ಪರಂಪರೆಯೇ ಇದೆ. ನವೋದಯದ ಆರಂಭದ ಕಾಲದಲ್ಲಿ ಬಂದ ಐತಿಹಾಸಿಕ ಕಾದಂಬರಿಗಳು ಪುನರುತ್ಥಾನ ಕಾಲದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿದ್ದವು. ನಾಡು-ನುಡಿ- ರಾಜ್ಯ- ದೇಶಗಳ ಬಗೆಗೆ ಅಭಿಮಾನ ಮೂಡಿಸುವಂಥ ಬರೆಹಗಳು ಬ್ರಿಟಿಷರ ವಿರುದ್ಧದ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಅಗತ್ಯವಾಗಿತ್ತು. ರಾಷ್ಟ್ರೀಯತೆಯ ಪ್ರಚೋದನೆಯು ಒಂದು ಉದ್ದೇಶವಾದರೆ ಹಿಂದೂ ಸನಾತನವಾದದ ಸಮರ್ಥನೆ ಮತ್ತು ವಿರೋಧ ಇನ್ನೊಂದು ಮುಖವಾಗಿತ್ತು. ವಿಜಯನಗರ ಸಾಮ್ರಾಜ್ಯದ ೪೫೦ನೆ ವರ್ಷಾಚರಣೆಯನ್ನು ವೈಭವದಿಂದ ಮಾಡಲಾಯಿತು. ಈ ಸಂದರ್ಭದಲ್ಲಿಯೇ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹೇಳುವ ಕೃತಿಗಳು ಬಂದವು. ಗಳಗನಾಥರ...

ಬುದ್ಧನ ಕಾರುಣ್ಯ

‘‘ಅಸ್ತ್ರಗಳಿಗೆ ತಮ್ಮದೇ ಆದ ಶಕ್ತಿ ಎಲ್ಲಿದೆ? ಅವುಗಳಿಗೆ ಸಾಮರ್ಥ್ಯ ಬರುವುದು ಅವುಗಳನ್ನು ಬಳಸುವ ಕೈಗಳಿಂದ. ಆ ಕೈಗಳಿಗೆ ಪ್ರಯೋಗ ನೈಪುಣ್ಯ ಬರುವುದು ಮನೋಬಲದಿಂದ. ಮಿತ್ರಾ ನಿನ್ನ ಈ ಶಕ್ತಿ ಸಾಮರ್ಥ್ಯಗಳು ನಿನ್ನ ಅಂತರಂಗದ ಮೈತ್ರಿ ಕರುಣೆಗಳಿಗಿಂತ ಬಲಶಾಲಿಗಳಲ್ಲ. ಅವು ಕೇವಲ ಅನ್ಯರ ಬಲಹೀನತೆಯನ್ನು ಅವಲಂಬಿಸಿವೆ.’’ ಇದು ಗೌತಮಬುದ್ಧನು ಅಂಗುಲಿಮಾಲನಿಗೆ ಹೇಳುವ ಮಾತುಗಳು. ಬುದ್ಧ ಗೊತ್ತಿದ್ದಾನೆ ಎಂದ ಮೇಲೆ ಅಂಗುಲಿಮಾಲನೂ ಗೊತ್ತಿರಲಿಕ್ಕೇ ಬೇಕು. ಬುದ್ಧನ ಮಹಾತ್ಮೆಯನ್ನು ಹೇಳುವುದಕ್ಕೆ ಅಂಗುಲಿಮಾಲ ಬೇಕೇಬೇಕು. ಅಂಗುಲಿಮಾಲ ಬುದ್ಧನ ಹಾಗೆ ಐತಿಹಾಸಿಕ ವ್ಯಕ್ತಿಯೋ ಅಥವಾ...

ಅವ್ವ ಎಂದರೆ ಅವ್ವ ಮಾತ್ರ- ಅವ್ವನ ಸ್ಮರಣೆ ಅನನ್ಯ

ಸಾಹಿತ್ಯದ ಪ್ರೇರಣೆಗಳಲ್ಲಿ ಅಮ್ಮ ಕೂಡ ಒಂದು. ಬಹುಶಃ ತನ್ನ ತಾಯಿಯನ್ನು ನೆನೆಯದ ಬರೆಹಗಾರ ಇಲ್ಲವೇ ಇಲ್ಲವೇನೋ. ಪ್ರತಿಯೊಬ್ಬರಿಗೂ ತಮ್ಮ ಅಮ್ಮನ ಕುರಿತು ಒಂದು ಬೆಚ್ಚಗಿನ ಕತೆ ಇರುತ್ತದೆ. ಒಂದು ಸುಂದರ ಕವನ ಇರುತ್ತದೆ. ಯಾರಿಗೂ ಹೇಳಿಕೊಳ್ಳಲಾಗದಂಥ, ಮಾತಿಗೆ ನಿಲುಕದ ಒಂದು ಆರ್ದ್ರ ಭಾವವಿರುತ್ತದೆ. ಅಮ್ಮನ ಋಣವನ್ನು ತೀರಿಸಲಾಗದ್ದು ಎಂಬ ದೈನ್ಯವಿರುತ್ತದೆ. ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ನೀಡಿರುವುದು. ಅಮ್ಮ ಪದಕ್ಕೆ ಬೇರೆ ಅರ್ಥವಿಲ್ಲ. ಅಮ್ಮನೆಂದರೆ ಅಮ್ಮ ಎಂದೇ ಅರ್ಥ. ಇಂಥ ಅಮ್ಮನನ್ನು ಅಜರಾಮರಗೊಳಿಸಿದವನು...

ಚಿತ್ರಗುಪ್ತನ ಕತೆಗಳು

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರ ಹೊಸ ಕತೆಗಳ ಸಂಕಲನ ‘ಚಿತ್ರಗುಪ್ತನ ಕತೆಗಳು’ ಈಗ ಬಂದಿದೆ. ಇದರಲ್ಲಿ ಒಟ್ಟೂ ೩೦ ಕತೆಗಳು ಇವೆ. ಸಂಕಲನದಿಂದ ಸಂಕಲನಕ್ಕೆ ಹೊಸತನ್ನು – ರೂಪ, ಗಾತ್ರ, ಸತ್ವ, ಸ್ವರೂಪದಲ್ಲಿ- ನೀಡಲು ಸದಾ ತುಡಿಯುವ ಸತ್ಯನಾರಾಯಣ ಅವರ ಈ ಸಂಕಲನ ಕೂಡ ನಿರಾಶೆ ಮೂಡಿಸುವುದಿಲ್ಲ. ಇದರಲ್ಲಿ ಅವರು ಕತೆಯ ಗಾತ್ರವನ್ನು ಕಿರಿದುಗೊಳಿಸಿದ್ದಾರೆ. ಕವಿತೆಯ ಬಿಗಿಯಲ್ಲಿ ಕತೆಯನ್ನು ಕಟ್ಟುವ ಅವರ ಕುಶಲತೆಗೆ ಈ ಸಂಕಲನ ಒಂದು ಪುರಾವೆ. ಸಾಮಾನ್ಯವಾಗಿ ಸತ್ಯನಾರಾಯಣ ಅವರು ದೀರ್ಘ...

ಭಾರತೀಯರ ಬೌದ್ಧಿಕ ದಾಸ್ಯ

ಪ್ರೊ.ಎಸ್.ಎನ್.ಬಾಲಗಂಗಾಧರ ಅವರ ಸಂಶೋಧನ ಗ್ರಂಥ ‘ದಿ ಹೀದನ್ ಇನ್ ಹೀಸ್ ಬ್ಲೈಂಡ್‌ನೆಸ್’ನ ವಿಚಾರಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆಯವರು ಬರೆದಿರುವ ಕೃತಿ ‘ಬೌದ್ಧಿಕ ದಾಸ್ಯದಲ್ಲಿ ಭಾರತ’. ವಸಾಹತುಶಾಹಿ ಪ್ರಜ್ಞೆಯು ಭಾರತೀಯ ಚಿಂತನಾಕ್ರಮವನ್ನು ಹೇಗೆ ಪ್ರಭಾವಿಸಿವೆ, ಪಾಶ್ಚಾತ್ಯ ಪ್ರಜ್ಞೆಯಿಂದ ಭಾರತೀಯ ಜೀವನವನ್ನು ಹೇಗೆ ಅರ್ಥೈಸಲು ಯತ್ನಿಸಲಾಗಿದೆ ಮತ್ತು ಅವೆಲ್ಲ ಹೇಗೆ ನಿರರ್ಥಕವಾದವು ಎಂಬುದನ್ನು ಈ ಕೃತಿಯಲ್ಲಿ ಮನಗಾಣಿಸಲು ಪ್ರಯತ್ನಿಸಲಾಗಿದೆ. ಭಾರತೀಯ ಚಿಂತಕರು ಶತಮಾನದ ಹಿಂದಿನಿಂದಲೂ ಎದುರಿಸುತ್ತಿರುವ ಬೌದ್ಧಿಕ ಸಮಸ್ಯೆಯನ್ನು ಬಾಲಗಂಗಾಧರರು ತಮ್ಮ ಸಂಶೋಧನೆಯ ಮೂಲಕ ಪರಿಹರಿಸಲು ಯತ್ನಿಸಿದ ಫಲ ಈ...

ಧರಣೀದೇವಿ ಕೃತ ಇಳಾಭಾರತಂ

ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂದು ವಿ.ಕೃ.ಗೋಕಾಕರು ಪರ್ಮಾನು ಹೊರಡಿಸಿ ಅರ್ಧ ಶತಮಾನವೇ ಕಳೆದುಹೋಯಿತು. ಮುಕ್ತ ಛಂದದ ರಚನೆಯ ಸುಖವನ್ನು ನವ್ಯ, ನವ್ಯೋತ್ತರ ಕವಿಗಳು ತುಂಬ ಚೆನ್ನಾಗಿಯೇ ಅನುಭವಿಸಿದ್ದಾರೆ. ಇಂಥ ಕಾಲಘಟ್ಟದಲ್ಲಿ ತಮ್ಮ ಭಾವನೆಗಳಿಗೆ ಛಂದಸ್ಸಿನ ಚೌಕಟ್ಟನ್ನು ನಿರ್ಮಿಸಿಕೊಂಡು ಕಾವ್ಯ ರಚನೆಯಲ್ಲಿ ತೊಡಗುವುದೆಂದರೆ ಅದೊಂದು ಸಾಹಸದ ಕೆಲಸವೆಂದೇ ಹೇಳಬೇಕು. ಅಂಥ ಒಂದು ಸಾಹಸವನ್ನು ಡಾ.ಧರಣೀದೇವಿ ಮಾಲಗತ್ತಿಯವರು ತಮ್ಮ ‘ಇಳಾಭಾರತಂ’ ಕೃತಿಯಲ್ಲಿ ಮಾಡಿದ್ದಾರೆ. ಬಿರುದು ಬಾವಲಿಗಳ ಪಡೆಯಲಿದ ಬರೆದುದಲ್ಲವು ಬರೆಹ ಲೋಕದಿ ಮರೆತ ದನಿಗಳ ಹುಡುಕಿ ಕೇಳಿಸೆ ಸಹೃದಯಗಳಿಗೆ...

ಮಾಯಾಕನ್ನಡಿಯಲ್ಲಿ ಬೋದಿಲೇರ್

ಒಂದು ಹೂವು ಹಾದಿಯಲ್ಲಿ ಬಿದ್ದಿದ್ದರೆ ಅದನ್ನು ಮೆಟ್ಟಿ ಮುಂದೆ ಹೋಗದಂಥ ಮಾರ್ದವತೆ, ತನ್ನತ್ತ ಕೆಕ್ಕರಿಸಿ ನೋಡಿದವನ ಕತ್ತು ಚೆಂಡಾಡುವಂಥ ಕೋಪ, ಹೆಣ್ಣಿನ ಮುಗುಳ್ನಗೆಯಲ್ಲಿ ಕರಗಿ ಹೋಗುವಂಥ ಆಪ್ತತೆ ಇಂಥ ಭಾವಗಳ ಮಿಶ್ರಣವಾಗಿದ್ದ ಹಾಗೂ ತನ್ನ ಕೃತಿಗಳಲ್ಲಿ ಅವನ್ನೇ ಚಿತ್ರಿಸಿದ ದೊಡ್ಡ ಲೇಖಕ ಚಾರ್ಲ್ಸ್ ಬೋದಿಲೇರ್ ತೀವ್ರವಾಗಿ ಅನುಭವಿಸಿ ಬರೆಯಬಲ್ಲವನಾಗಿದ್ದ. ಆತನ ಗದ್ಯರೂಪದ ಐವತ್ತು ಪದ್ಯಗಳನ್ನು, ಬೇಕಾದರೆ ಗಪದ್ಯವೆನ್ನಿ, ಎಸ್.ಎಫ್.ಯೋಗಪ್ಪನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೋದಿಲೇರನ ಕವಿತೆಗಳನ್ನು ‘ಪಾಪದ ಹೂಗಳು’ ಹೆಸರಿನಲ್ಲಿ ಲಂಕೇಶ್ ಕನ್ನಡಕ್ಕೆ ತಂದಿದ್ದರು. ಅವರ ಗರಡಿಯಲ್ಲಿಯೇ ತಯಾರಾದ...

ಬೆಳದಿಂಗಳಲ್ಲಿ ಬದುಕಿನ ಅರ್ಥದ ಹುಡುಕಾಟ

ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ...