ವಿಮರ್ಶೆ

ಮಾಸ್ತಿ ಕಥಾಲೋಕಕ್ಕೆ ಹೊಸ ಬೆಳಕಿಂಡಿ

ಕೆ.ಸತ್ಯನಾರಾಯಣ ಅವರ- ಮಹಾ ಕಥನದ ಮಾಸ್ತಿ ಕನ್ನಡದ ಪ್ರಮುಖ ಗದ್ಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಆಸ್ತಿ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಓದುತ್ತ, ಅವರ ಪ್ರಭಾವಕ್ಕೆ ಒಳಗಾಗುತ್ತ, ಆ ಪ್ರಭಾವವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತ, ತಮ್ಮದೇ ಒಂದು ಕಥನ ಶೈಲಿಯನ್ನು ರೂಢಿಸಿಕೊಂಡವರು. ಮಾಸ್ತಿಯವರ ಪ್ರಥಮ ಕಥಾ ಸಂಕಲನ ಪ್ರಕಟವಾಗಿ ನೂರು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಮಾಸ್ತಿಯವರ ಕತೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ `ಮಹಾ ಕಥನದ ಮಾಸ್ತಿ’ ಎಂಬ...

ಹುಲಿಯ ನೆರಳಿನೊಳಗೆ ಬೆಳೆದ ಬದುಕು

ಮರಾಠಿ ಸಾಹಿತ್ಯದಲ್ಲಿ ಆತ್ಮಕಥನವು ಅತ್ಯಂತ ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅಲ್ಲಿಯ ಸತ್ವಶಾಲಿ ಮತ್ತು ಬೆಂಕಿಯುಂಡೆಯಂಥ ಬರೆಹಗಳು ಅವತರಿಸಿದ್ದು ಆತ್ಮಕಥನದ ರೂಪದಲ್ಲಿಯೇ. ಅದರಲ್ಲಿಯೂ ದಲಿತ ವರ್ಗದವರು ಬರೆದಿರುವ ಆತ್ಮಕಥನಗಳು ಅದರಲ್ಲಿಯ ಹಸಿಹಸಿಯಾದ ಮತ್ತು ಅಕ್ಷರಲೋಕಕ್ಕೆ ಮುಖಾಮುಖಿಯಾದವರ ತಾಜಾತನದಿಂದಾಗಿ ಉತ್ಕೃಷ್ಟ ಸಾಹಿತ್ಯವಾಗಿಯೂ ಮನ್ನಣೆ ಗಳಿಸಿದವು. ಆ ಸಾಲಿನಲ್ಲಿ ನಿಲ್ಲುವ ಆತ್ಮಕಥನ ಪ್ರಸಿದ್ಧ ವಿಜ್ಞಾನಿ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ’. ಇದಕ್ಕೊಂದು ಉಪಶೀರ್ಷಿಕೆ ‘ಅಂಬೇಡ್ಕರ್‌ವಾದಿಯ ಆತ್ಮಕಥೆ’ ಎಂದು. ಇದನ್ನು ಬಿ.ಶ್ರೀಪಾದ ಅವರು ಭಾವಾನುವಾದ ಮಾಡಿದ್ದಾರೆ. ಮೂಲ ಆತ್ಮಕತೆಯನ್ನು ಓದುವಾಗ ತಮಗೆ ಮುಖ್ಯವೆನಿಸಿದ್ದು ಕನ್ನಡದ...

`ಗ್ರಹಣ’ದ ಭೈರಪ್ಪ ಒಬ್ಬ ಪುರೋಗಾಮಿ ಲೇಖಕ

ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್‌.ಎಲ್‌. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.ಆದರೆ ಈ ಎಲ್ಲ...

ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ. ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ...

ಸಾಮಾನ್ಯ ಚಿತ್ರಕ್ಕೆ ಭಾಷೆಯ ಸುವರ್ಣ ಚೌಕಟ್ಟು

ನಾಟಕಕಾರ ಮತ್ತು ವರ್ಣಚಿತ್ರ ಕಲಾವಿದ ಡಿ.ಎಸ್‌. ಚೌಗಲೆವರು ತಮ್ಮ ಸ್ವತಂತ್ರ ನಾಟಕ ‘ದಿಶಾಂತರ'ದ ಎರಡನೆಯ ಆವೃತ್ತಿಗೆ ನಾನೇ ವಿಮರ್ಶೆ ಬರೆಯಬೇಕು ಎಂದು ಒತ್ತಾಯ ಮಾಡಿದ ಕಾರಣ ಬಹು ದಿನಗಳ ಬಳಿಕ ನಾಟಕವೊಂದನ್ನು ಓದುವ ಅವಕಾಶ ದೊರೆಯಿತು. ನಾಟಕ 76 ಪುಟಗಳಲ್ಲಿದ್ದರೆ ಇತರರು ಈ ನಾಟಕದ ಬಗ್ಗೆ ಲೇಖನ ಇತ್ಯಾದಿ 43 ಪುಟಗಳಲ್ಲಿವೆ. ಸಾಹಿತಿ ಚಂದ್ರಕಾಂತ ಕುಸನೂರರ ಅನಿಸಿಕೆ, ಲೇಖಕರ ನನ್ನ ಮಾತು, ರಂಗಕರ್ಮಿ ಸಿ.ಬಸವಲಿಂಗಯ್ಯನವರ ದಿಶಾಂತರದ ಜಾಡಿನಲ್ಲಿ...., ರಂಗನಿರ್ದೇಶಕ ಬಿ.ಸುರೇಶ ಅವರು ನಾಟಕ ಕುರಿತು ಮಾಹಿತಿಗಾಗಿ ಮಾಡಿಕೊಂಡ...

ಸಲಿಂಗಿಗಳ ಒಳ ಬದುಕಿನ ಚಿತ್ರಣ ನೀಡುವ ಲೈಂಗಿಕ ಜಾತಕ

ಕನ್ನಡದ ಈಗಿನ ಗದ್ಯ ಬರೆಹಗಾರರಲ್ಲಿ ಕೆ.ಸತ್ಯನಾರಾಯಣ ಅವರು ಪ್ರಮುಖರು. ಗದ್ಯ ಬರೆಹಗಾರರು ಎಂದು ಉದ್ದೇಶಪೂರ್ವಕವಾಗಿ ನಾನು ಇಲ್ಲಿ ಹೇಳಿದ್ದೇನೆ. ಅವರು ಕವಿತೆ ಬರೆದಿಲ್ಲ. ಆದರೆ ಇದುವರೆಗೆ ಒಂಬತ್ತು ಕಾದಂಬರಿ, ಹದಿನಾಲ್ಕು ಕಥಾಸಂಕಲನಗಳು, ಆರು ಪ್ರಬಂಧ ಸಂಕಲನಗಳು, ವಿಮರ್ಶೆ-ಸಾಂಸ್ಕೃತಿಕ ಬರೆಹ ಎಂದು ಆರು ಸಂಕಲನಗಳು, ನಾಲ್ಕು ಅಂಕಣ ಬರೆಹಗಳ ಕೃತಿಗಳು, ಒಂದು ಪ್ರವಾಸ ಕಥನ, ಒಂದು ವ್ಯಕ್ತಿ ಚಿತ್ರ, ಮೂರು ಆತ್ಮಚರಿತ್ರೆ ಹೀಗೆ ಇಷ್ಟೊಂದು ವೈವಿಧ್ಯಮಯ ಬರೆಹಗಳನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮೂರು ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ....

ಪೂರ್ಣಚಂದ್ರ ತೇಜಸ್ವಿಯವರ ‘‘ಹುಲಿಯೂರಿನ ಸರಹದ್ದು’’

ನವ್ಯ ಸಾಹಿತ್ಯ ತನ್ನ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕತೆಗಳನ್ನು ಬರೆಯಲು ತೊಡಗಿದ ಪೂರ್ಣಚಂದ್ರತೇಜಸ್ವಿಯವರು ‘‘ಅಬಚೂರಿನ ಪೋಸ್ಟಾಫೀಸು’’ ಕಥಾ ಸಂಕಲನಕ್ಕೆ ‘‘ಹೊಸದಿಗಂತದ ಕಡೆಗೆ’’ ಎನ್ನುವ ಮುನ್ನುಡಿ ಬರೆಯುತ್ತ, ‘‘ಕನ್ನಡ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸ ದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ’’ ಎಂದು ಹೇಳಿದ್ದಾರೆ. ಇದನ್ನು ಲಕ್ಷಿಸಿ ಕೆಲವು ವಿಮರ್ಶಕರು ತೇಜಸ್ವಿಯವರನ್ನು ನವ್ಯೋತ್ತರ ಕಾಲದ ಶ್ರೇಷ್ಠ ಕತೆಗಾರ ಎಂದು ಗುರುತಿಸುತ್ತಾರೆ. ನವ್ಯದ ವ್ಯಾಖ್ಯೆ ವಿಮರ್ಶೆಯ ನಿಲುಕು- ನೆಲೆಯಲ್ಲಿ ನಿಷ್ಕೃಷ್ಟವಾಗಿ ನಿರ್ಣಯಿಸಲ್ಪಡುವವರೆಗೆ ಅವರನ್ನು ನವ್ಯರಲ್ಲೇ ಒಬ್ಬರೆಂದು ಪರಿಗಣಿಸುವುದು ಸೂಕ್ತ. ಏಕೆಂದರೆ...

ಮೊಗಸಾಲೆಯವರ ಗಾಂಧಿ ಮಾರ್ಗ

ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್‌ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ...

ನೂರು ತುಂಬಿದ ಇಂದಿರಾಬಾಯಿ

ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿಗೆ ಈಗ ನೂರು ತುಂಬಿದೆ. 1899ರಲ್ಲಿ ಗುಲ್ವಾಡಿ ವೆಂಕಟರಾಯರು ಇದನ್ನು ಬರೆದರು. ಇಂದಿರಾಬಾಯಿಯ ಇನ್ನೊಂದು ಹೆಸರು ಸದ್ಧರ್ಮ ವಿಜಯ. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್್ನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. ಈ ಶತಮಾನದ 6ನೆ ದಶಕದ ವರೆಗೆ ಇದು ಪ್ರಚಾರದಲ್ಲಿಯೇ ಇರಲಿಲ್ಲ. ಸಾಹಿತ್ಯದ ವಿಮರ್ಶಕರಿಗೂ ಈ ಕೃತಿಯ ಪರಿಚಯ ಇರಲಿಲ್ಲ. 1962ರಲ್ಲಿ ಈ ಕೃತಿಯು ಎಂ. ಗೋವಿಂದ ಪೈ, ಕೆ.ಶಿವರಾಮ ಕಾರಂತ ಮತ್ತು ಸಂತೋಷಕುಮಾರ ಗುಲ್ವಾಡಿ ಇವರ ಜಂಟಿ ಪ್ರಯತ್ನದಿಂದ ಮರುಮುದ್ರಣ...

ಅವಿನ್ಯೂ ರೋಡಿನಲ್ಲಿ ಮುಲ್ಲಾ

‘ಅವಿನ್ಯೂ ರೋಡಿನಲ್ಲಿ ಮುಲ್ಲಾ’ ಆರ್.ವಿಜಯರಾಘವನ್ ಅವರು ಬರೆದಿರುವ ಲೇಖನಗಳ ಸಂಕಲನ ಅವಿನ್ಯೂ ರೋಡಿನಲ್ಲಿ ಮುಲ್ಲಾ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಅದಕ್ಕಾಗಿಯೇ ಅದನ್ನೊಂದು ಸಂಕೀರ್ಣ ಎಂದು ಕರೆಯಬಹುದು. ಏಕೆಂದರೆ ಇದರಲ್ಲಿ ಕೃತಿ ವಿಮರ್ಶೆ ಇದೆ, ಮೀಮಾಂಸೆ ಇದೆ, ವ್ಯಕ್ತಿ ಚಿತ್ರಗಳಿವೆ, ಚಿಂತನೆ ಇದೆ, ಮುನ್ನುಡಿಗಳಿವೆ. ಇದರಲ್ಲಿಯ ಮೊದಲ ಲೇಖನ ಕೆ.ಸತ್ಯನಾರಾಯಣ ಅವರ ‘ಈ ತನಕದ ಕಥೆಗಳು ಮತ್ತು ವಿಚ್ಛೇದನಾ ಪರಿಣಯ’ ಎಂಬ ಕಾದಂಬರಿಯ ಕುರಿತಿದೆ. ಸತ್ಯನಾರಾಯಣರಿಗೆ ಈ ಲೋಕದಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಬಹುಜನರು...