ಘಮಘಮಿಸುವ “ಸುರಗಿ’

ಕನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಎನ್ನುವುದನ್ನು ನನ್ನ ಅಮ್ಮ ಮತ್ತು ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ಒಂದು ಸಾರಿ ಅಬ್ಬಕ್ಕ (ಅವರ ಮನೆಯ ಕೆಲಸದ ಹೆಂಗಸು) ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ಹೀಗೆ ತಮಾಷೆ ಮಾತನಾಡಿದೆನಂತೆ, “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’. ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನನ್ನ ಅಮ್ಮ “ನೋಡು, ನಮ್ಮ ಅನಂತು “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’’ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿದ್ದರು. ಇಲ್ಲೊಂದು...

ಸತ್ಯಾನ್ವೇಷಣೆಯ ಕಥನಗಾರಿಕೆಯ ಹೆಗ್ಗುರುತು

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ “ಹೆಗ್ಗುರುತು’ ಹತ್ತು ಕತೆಗಳನ್ನು ಒಳಗೊಂಡಿದೆ. ಈ ಸಂಕಲನದ ಮೂಲಕ ಕನ್ನಡ ಕಥನಕ್ರಿಯೆಯಲ್ಲಿ ಹೊಸ ಹೆಗ್ಗುರುತು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಸಂಕಲನಕ್ಕೆ ಮಲ್ಲಿಕಾರ್ಜುನ ಹಿರೇಮಠ ಅವರು ವಿಸ್ತಾರವಾದ, ಅಧ್ಯಯನಪೂರ್ಣ ವಿಮರ್ಶೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿರುವರು. ಹಿರೇಮಠ ಅವರು ಹೇಳದೆ ಬಿಟ್ಟ ಒಳನೋಟಗಳು ಏನಾದರೂ ಇವೆಯೇ ಎಂದು ನೋಡಿ ಹೇಳುವುದಕ್ಕೆ ಮಾಡಿರುವ ಪುಟ್ಟ ಪ್ರಯತ್ನ ಇದು. ಕೆ.ಸತ್ಯನಾರಾಯಣ ಅವರು ಕಥಾರಚನೆಯನ್ನು ಒಂದು ಸವಾಲಿನ, ಸೃಜನಶೀಲ ಮನಸ್ಸಿನ ಪ್ರತಿಷ್ಠೆಯ...

ಸಂಸಾರ ಸಮನ್ವಯ ಸಾರುವ ಶಾಂತ ಕತೆಗಳು

ಶಾಂತಾದೇವಿ ಕಣವಿಯವರು ತಮ್ಮ ಮೊದಲ ಕತೆಯನ್ನು ಬರೆದದ್ದು 1958ರಲ್ಲಿ. ಅಲ್ಲಿಂದ ಇಲ್ಲಿಗೆ ಸರಿಸುಮಾರು ಐವತ್ತೈದು ವರ್ಷಗಳೇ ಕಳೆದುಹೋಗಿವೆ. ಈ ನಡುವೆ ಅವರು ಬರೆದು ಪ್ರಕಟಿಸಿದ ಕಥಾಸಂಕಲನಗಳು ಏಳು. ಕಥಾ ಸಂಕಲನದಲ್ಲಿ ಬಾರದೆ ಇರುವ ಕೆಲವು ಕತೆಗಳನ್ನು ಸೇರಿಸಿದರೆ ನೂರಹತ್ತರಷ್ಟು ಕತೆಗಳನ್ನು ಶಾಂತಾದೇವಿಯವರು ಬರೆದಿರುವರು. ಹೆಚ್ಚೂಕಡಿಮೆ ವರ್ಷಕ್ಕೆ ಎರಡು ಕತೆಗಳಂತೆ ಅನ್ನಿ. ಶಾಂತಾದೇವಿ ಕಣವಿಯವರ ಈ ವರೆಗಿನ ಎಲ್ಲ ಕತೆಗಳನ್ನು ಸೇರಿಸಿ ಸಮಗ್ರ ಸಂಪುಟವನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಹೊರತಂದಿದೆ. ಅವರಿಗೆ ಸರಿಯಾದ ವಿಮರ್ಶನ ನ್ಯಾಯವನ್ನು ಒದಗಿಸುವ ರೀತಿಯಲ್ಲಿ...

ಘಾಚರ್ ಘೋಚರ್ ಹ್ರಾಂ ಹ್ರೀಂ ಹ್ರೂಂ ಫಟ್ !!!

ವಿವೇಕ ಶಾನಭಾಗ ಅವರ ಹೊಸ ಕತೆಗಳ ಸಂಕಲನ ‘ಘಾಚರ್ ಘೋಚರ್’. ಇದರಲ್ಲಿ ಆರು ಕತೆಗಳಿವೆ. ಮೊದಲ ಕತೆ ಘಾಚರ್ ಘೋಚರ್ 63 ಪುಟಗಳಷ್ಟು ದೀರ್ಘವಾಗಿರುವುದರಿಂದ ಅದೊಂದು ಕಿರುಕಾದಂಬರಿಯೇ ಸೈ. ಇದರಲ್ಲಿ ಕಥಾನಾಯಕ, ಆತನ ಪತ್ನಿ ಅನಿತಾ, ಆತನ ತಂದೆ, ಚಿಕ್ಕಪ್ಪ, ತಾಯಿ, ಗಂಡನ ಬಿಟ್ಟು ಬಂದಿರುವ ತಂಗಿ ಮಾಲತಿ ಇವರನ್ನೊಳಗೊಂಡ ಒಂದು ಕೂಡು ಕುಟುಂಬವಿದೆ. ಚಿಕ್ಕಪ್ಪ ವೆಂಕಟಾಚಲನೇ ಕುಟುಂಬದ ಕೇಂದ್ರ ವ್ಯಕ್ತಿ. ಏಕೆಂದರೆ ಅವನು ಕುಟುಂಬದ ಆದಾಯ ಮೂಲ. ಬಡತನದಲ್ಲಿದ್ದ ಕುಟುಂಬವು ಈ ವೆಂಕಟಾಚಲ ಸೋನಾ ಮಸಾಲಾ ಕಾರ್ಖಾನೆಯನ್ನು...

ಕಥನ ಪ್ರಕಾರದ ತ್ರಿವಿಕ್ರಮ ರೂಪ

ಕ  ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ ‘ಝೀರೋ ಮತ್ತು ಒಂದು’ ಕಥಾಸಂಕಲನದ ಒಂದು ಕತೆಯಲ್ಲಿ ‘ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ’.ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.ಬದುಕಿನ ಸಾರ್ಥಕತೆಯ ಬಗ್ಗೆ...

ಡಬಲ್ ಕ್ರಾಸರ್ ಸೀಕ್ರೆಟ್ ಏಜೆಂಟ್‌ನ ಸೂಪರ್ ಸ್ಟೋರಿ

ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 90ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು.– ಜೈಲು ಸಿಬ್ಬಂದಿಯೊಬ್ಬರು ನನ್ನನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು...

ಕಂಬಾರರಿಗೇ ಏಕೆ ಜ್ಞಾನಪೀಠ, ಭೈರಪ್ಪಗೇಕಿಲ್ಲ?

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ  ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ...

ವೇಣು ನಾದ

ಲೋಕದಲ್ಲಿ ಜನಿಸಿದಾ ಬಳಿಕ..  ನಮ್ಮ ಬದುಕಿನ ಕಥೆಯನ್ನು ನಾವೇ ಬರೆದುಕೊಂಡರೆ ಅದು ಆತ್ಮಕಥನವಾಗುತ್ತದೆ. ನಮ್ಮ ಜೀವನ ಕಥೆಯನ್ನು ಬೇರೆಯವರು ಬರೆದಾಗ ಅದು ಜೀವನ ಚರಿತ್ರೆಯಾಗುತ್ತದೆ. ಈ ಎರಡೂ ಪ್ರಕಾರಗಳಲ್ಲಿ ಕೆಲವು ಲೋಪಗಳು ತಲೆದೋರುವ ಸಾಧ್ಯತೆಗಳಿವೆ. ಆತ್ಮಕಥನದಲ್ಲಿ ಲೇಖಕ ತನ್ನ ಮೂಗಿನ ನೇರಕ್ಕೆ ಸರಿ ಎನಿಸಿದ್ದನ್ನಷ್ಟೇ ಬರೆಯುತ್ತಾನೆ. ಬದುಕಿನ ಘಟನೆಗಳಿಗೆ ಎರಡನೆಯ ಮಗ್ಗಲೂ ಇರುತ್ತದೆ. ಆ ಮಗ್ಗಲು ಇಲ್ಲಿ ತಪ್ಪಿಹೋಗುತ್ತದೆ. ಜೀವನಚರಿತ್ರಕಾರನಿಗೆ ಬರೆಯುವಾಗ ಆಯ್ಕೆಗಳಿರುತ್ತವೆ. ಈ ಆಯ್ಕೆಯಲ್ಲಿ ಕೆಲವು ಬಿಟ್ಟುಹೋಗುವ ಸಾಧ್ಯತೆಯೂ ಇರುತ್ತದೆ. ಆತ್ಮಕಥನಗಳು ಒಂದು ಸಾಹಿತ್ಯ ಪ್ರಕಾರ ಎನ್ನುವಷ್ಟು...

ಮಾತನಾಡದೆ ಸಾಹಿತ್ಯ ವಿಶ್ವ ಗೆದ್ದ ಗುಆನ ಮೋಯೆ

ಮಾತನಾಡಬೇಡ.(Don`t Speak) ಇದು ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಚೀನದ ಸಾಹಿತಿ ಗುಆನ್ ಮೋಯೆಯ ಕಾವ್ಯನಾಮ “ಮೋ ಯಾನ್” ಎಂಬುದರ ಅರ್ಥ. ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತಿನ ಮಹತ್ವವನ್ನು ವರ್ಣಿಸಿದ ನಾಡು ನಮ್ಮದು. ಆದರೆ ಚೀನದಂಥ ಕಮ್ಯುನಿಸ್ಟ್ ದೇಶದಲ್ಲಿ ಇಲ್ಲವೆ ಮಿಲಿಟರಿ ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಸೃಜನಶೀಲ ಬರೆಹಗಾರನೊಬ್ಬನ ಸ್ಥಿತಿ ಇದು. ಈ ಸ್ಥಿತಿಯನ್ನೇ ತನ್ನ ಕಾವ್ಯನಾಮ ಮಾಡಿಕೊಂಡ ಗೋಆನ್ ಮೋಯೆ ಒಂದರ್ಥದಲ್ಲಿ ವ್ಯವಸ್ಥೆಗೆ ಧಿಕ್ಕಾರ ಹೇಳಿದವರು. ತಮ್ಮ ದೇಶದ ಸಾಮಾಜಿಕ ಮತ್ತು...

ನೆನಹು ತಂತಿ ಮೀಟುವಾಗ….

ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ ಕಾಲನೇಮಿಯೂ ಆಗಬಹುದು! ಪಂಚಾಂಗದಲ್ಲಿ ಇನ್ನೊಂದು ವರ್ಷ ಸಂದುಹೋಗಿದೆ. ಗೋಡೆಯ ಮೊಳೆಗೆ ಹೊಸ ಕ್ಯಾಲೆಂಡರ್ ಬಂದು ಕುಂತಿದೆ. ಹೋಗಿಯೇ ಬಿಟ್ಟಿತೇ ಒಂದು ವರ್ಷ ಎಂಬ ಉದ್ಗಾರದಲ್ಲಿಯೇ ಬೇಸರವೋ ಆತಂಕವೋ ಅವರವರ ಭಾವಕ್ಕೆ ತಕ್ಕಂತೆ ಅಭಿವ್ಯಕ್ತಿಗೊಂಡಿರುತ್ತದೆ. ಕಾಲವನ್ನು ಖಂಡಖಂಡವಾಗಿ ನೋಡಿ ಇಲ್ಲವೆ ಅಖಂಡವಾಗಿಯೇ ನೋಡಿ ಅದೇನೋ ನಿಗೂಢತೆ ಅದರಲ್ಲಿ ತುಂಬಿರುತ್ತದೆ.ಕಾಲಮಾನವು ಈಗ ಇದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಕಾಲ ಮತ್ತು ಮನಸ್ಸು ಇವುಗಳಲ್ಲಿ ಯಾವಾಗಲೂ ಒಂದು ರೀತಿಯ ಹೊಯ್ದಾಟ ಇದ್ದೇ ಇರುತ್ತದೆ. ಭವಿಷ್ಯದ...