ಶಬ್ದಪುರಾಣ

ಕಾಲು ಸುಟ್ಟ ಬೆಕ್ಕು

*ಮಾನಸಿಕ ಸಮತೋಲನ ಕಳೆದುಕೊಂಡವರು ತುಂಬ ಚಡಪಡಿಕೆಯ ಸ್ವಭಾವದವರನ್ನು ಕಂಡಾಗ, `ಅವ್ನ ನೋಡು, ಕಾಲು ಸುಟ್ಟ ಬೆಕ್ಕಿನಂಗೆ ಮಾಡ್ತಾ ಅವ್ನೆ' ಎಂದು ಹೇಳುವುದು ಸಾಮಾನ್ಯ. ಬೆಕ್ಕಿನ ಕಾಲು ಬಲು ಮೃದುವಾದದ್ದು. ಸದ್ದಿಲ್ಲದೆ ಹೆಜ್ಜೆಯನ್ನು ಇಕ್ಕುತ್ತ ಇಲಿಯ ಬೇಟೆಯಾಡುವುದರಲ್ಲಿ ಅದು ನಿಸ್ಸೀಮ. ಬೇಟೆಗೆ ಅದರ ಕಾಲೇ ಪ್ರಮುಖ ಸಾಧನ. ಅಂಥ ಕಾಲು ಸುಟ್ಟು ಹೋದರೆ ಅದಕ್ಕೆ ಚಡಪಡಿಕೆ ಸಹಜ. ನಿಂತಲ್ಲಿ ನಿಲ್ಲುವುದಿಲ್ಲ ಅದು. ಮನುಷ್ಯನಿಗೂ ಅಂತಹ ಚಡಪಡಿಕೆ ಶುರುವಾಗುವುದು ಯಾವಾಗ? ಆತನ ಅಹಂಗೆ ಧಕ್ಕೆಯಾದಾಗ, ಸಾಧಿಸಬೇಕು ಅಂದುಕೊಂಡಿದ್ದನ್ನು ಸಾಧಿಸಲು ಆಗದೇ...

ಕನ್ನಡಿಯೊಳಗಿನ ಗಂಟು

*ಸುಳ್ಳು ಭರವಸೆಗಳ ಮೂಟೆ ನಾವು ಏನನ್ನೋ ಪಡೆದುಕೊಳ್ಳಬೇಕು ಎಂದು ಆಸೆಪಟ್ಟಿರುತ್ತೇವೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡಿರುತ್ತೇವೆ. ಆದರೆ ಅದನ್ನು ದಕ್ಕಿಸಿಕೊಳ್ಳುವುದು ನಮ್ಮಿಂದ ಆಗುವುದೇ ಇಲ್ಲ. ಅಯ್ಯೋ ಆಗಿಯೇ ಹೋಯ್ತು ಎನ್ನುವಂತೆ ಇರುತ್ತದೆ. ಆದರೆ ಏನೂ ಆಗಿಯೇ ಇರುವುದಿಲ್ಲ. ಎಟಕುತ್ತದೆ ಅಂತಿರುವಾಗ ದಕ್ಕುವುದೇ ಇಲ್ಲ. ಹೀಗೆ ಗಮ್ಯವು ಕಾಣುತ್ತಿದ್ದರೂ ಅಗರತ್ತ ಗಮನ ಸಾಧ್ಯವಾಗದೆ ಇದ್ದರೆ ಬಹಳ ನಿರಾಶೆಯಾಗುತ್ತದೆ. ಆಗ `ಕನ್ನಡಿಯೊಳಗಿನ ಗಂಟು’ ಎಂಬ ಉದ್ಗಾರ ತನ್ನಿಂದ ತಾನೇ ಹೊರಡುತ್ತದೆ. ಕನ್ನಡಿಯೊಳಗೆ ಗಂಟು ಕಾಣುತ್ತಿರುತ್ತದೆ. ಕೈಚಾಚಿದರೆ ಅದನ್ನು ನಾವು ಎತ್ತಿಕೊಳ್ಳುವುದು ಸಾಧ್ಯವಿಲ್ಲ....

ಕಡ್ಡಿಯನ್ನು ಗುಡ್ಡ ಮಾಡು

*ಕ್ಷುಲ್ಲಕ ವಿಷಯ ದೊಡ್ಡದು ಮಾಡುವುದು ಏನ್‌ ಮಾರಾಯಾ ಅವ್ನು, ಕಡ್ಡಿಯ ಗುಡ್ಡ ಮಾಡ್ದ. ಎಲ್ಲ ಫಜೀತಿ ಆಗಿ ಹೋಯ್ತು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕಡ್ಡಿ ಬಹಳ ಚಿಕ್ಕದು. ಕಡ್ಡಿಗೆ ಹೋಲಿಸಿದರೆ ಗುಡ್ಡ ಬಹಳ ದೊಡ್ಡದು. ಚಿಕ್ಕ ವಿಷಯವನ್ನು, ನಿರ್ಲಕ್ಷಿಸಿಬಿಡಬಹುದಾದ ವಿಷಯವನ್ನು ದೊಡ್ಡದು ಮಾಡಿದ ಎನ್ನುವ ಅರ್ಥ ಇಲ್ಲಿದೆ. ಜೊತೆಯಲ್ಲಿಯೇ ಹಾಗೆ ಮಾಡುವ ಅಗತ್ಯವಿರಲಿಲ್ಲ ಎಂಬ ಧ್ವನಿಯೂ ಇದರ ಒಡಲಲ್ಲಿ ಇದೆ. ಇದೇ ರೀತಿಯ ಇನ್ನೂ ಹಲವು ಮಾತುಗಳು ನಮ್ಮಲ್ಲಿವೆ. ಉಗುರಿನಲ್ಲಿ ಆಗುವುದಕ್ಕೆ ಕೊಡಲಿ ಎತ್ತಿದ ಎಂಬುದು ಅವುಗಳಲ್ಲಿ...

ಕಾಡಬೆಳದಿಂಗಳು

*ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿ ಪ್ರತಿಭೆ ಅರಳಲು ಸೂಕ್ತವಾದ ಅವಕಾಶ ಬೇಕು. ಸೂಕ್ತ ಅವಕಾಶ ದೊರೆಯದೆ ಎಷ್ಟೋ ಪ್ರತಿಭೆ ಮುರುಟಿ ಹೋಗುತ್ತದೆ. ಅವಕಾಶ ಸಿಗದ ಪ್ರತಿಭೆಯನ್ನು ಕಂಡು `ಅವನ ಬದುಕು ಕಾಡ ಬೆಳದಿಂಗಳು' ಆಗಿ ಹೋಯ್ತು ಎಂದು ಅನುಕಂಪ ತೋರಿಸುತ್ತೇವೆ. ಕಾಡಿನಲ್ಲಿಯ ಬೆಳದಿಂಗಳು ಎಷ್ಟೊಂದು ಆಹ್ಲಾದಕರವಾಗಿದ್ದರೂ ಯಾರ ಗಮನಕ್ಕೂ ಬರದೆ ಹೋಗುತ್ತದೆಯಲ್ಲವೆ? ಹಾಗೆ ಇದು. ಇದನ್ನೇ ಕೆಲವರು ವನಸುಮ ಎಂದು ಹೇಳುತ್ತಾರೆ. ವನಸುಮವೆಂದರೆ ಕಾಡಿನಲ್ಲಿ ಅರಳಿದ ಹೂವು. ಈ ಹೂವು ಬೀರುವ ಸುವಾಸನೆ ಯಾರಿಗೂ ತಟ್ಟದೆ ಹೋಗುತ್ತದೆ....

ಕಾಕತಾಳೀಯ

*ಎರಡು ಘಟನೆಗಳ ನಡುವೆ ಸಂಬಂಧ ಇರಲೇಬೇಕಿಲ್ಲ ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು. ಅದೇ ಕಾಕತಾಳೀಯ. ಕಾಗೆಯ ಭಾರವಾದರೂ ಎಷ್ಟು? ಟೊಂಗೆ ಮುರಿಯುವಷ್ಟು ಬಾಗಿತು ಎಂದರೆ ಕಾಗೆ ಹಾರಿಯೇ ಹೋಗುತ್ತದೆ. ಮುರಿಯುವುದಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ. ಟೊಂಗೆ ಮುರಿಯುವುದಕ್ಕೆ ಕಾಗೆ ಕುಳಿತದ್ದೇ ಕಾರಣವಲ್ಲ. ಬೇರಾವುದೋ ಕಾರಣವಿರಬಹುದು. ಆದರೆ ಕಾಗೆ ಕುಳಿತೇ ಟೊಂಗೆ ಮುರಿಯಿತು ಎಂದು ಸಾಧಿಸುವುದು ತಪ್ಪು. ಸೇತುವೆಯ ಮೇಲೆ ಬಸ್ಸು ಹೋಗುತ್ತಿರುವಾಗಲೇ ಕೆಳಗೆ ನದಿಯಲ್ಲಿ ಚಲಿಸುತ್ತಿದ್ದ ದೋಣಿ ಮುಳುಗಿತು. ಈ ಎರಡೂ ಘಟನೆಗಳು ತನ್ನಷ್ಟಕ್ಕೆ ತಾನೇ...

ಕರತಲಾಮಲಕ

*ಬಹಳ ಸುಲಭವಾಗಿ ಸಾಧ್ಯವಾಗುವಂಥದ್ದು ಅವನಿಗೇನಪ್ಪ ಎಲ್ಲವೂ ` ನೀರು ಕುಡಿದಷ್ಟು ಸುಲಭ' ಎಂದು ಸಾಮಾನ್ಯರು ಹೇಳುತ್ತಾರೆ. ಅದನ್ನೇ ಪಂಡಿತರು, ಅವನಿಗೆ ಎಲ್ಲವೂ` ಕರತಲಾಮಲಕ’ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಬಹಳ ಪ್ರೀತಿ ಉಳ್ಳವರು ಅವನಿಗೆ ಎಲ್ಲವೂ `ಅಂಗೈ ನೆಲ್ಲಿಕಾಯಿ’ ಎಂದು ಹೇಳುತ್ತಾರೆ. ಕರತಲಾಮಲಕ ಎನ್ನುವುದು ಸಂಸ್ಕೃತ ನುಡಿ. ಕರತಲ ಎಂದರೆ ಅಂಗೈ. ಅಮಲಕ ಎಂದರೆ ನೆಲ್ಲಿಕಾಯಿ. ನೆಲ್ಲಿಕಾಯಿ ಸುಲಭದಲ್ಲಿ ಸಿಗುವಂಥದ್ದೆ? ಅಲ್ಲವೇ ಅಲ್ಲ. ಕಾಡಿಗೆ ಹೋಗಬೇಕು. ಕಲ್ಲು ಮುಳ್ಳು ತುಳಿದು ಮರ ಏರಿ ಅದನ್ನು ಕಿತ್ತು ತರುವವರೆಗೆ...

ಕಬಂಧಬಾಹು

*ಶ್ರೀರಾಮನನ್ನೇ ಹಿಡಿದಿತ್ತು ಈ ಬಾಹು ಹತ್ತು ಹಲವು ವಿಷಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವವರನ್ನು ಕಂಡಾಗ `ಅದೇನು ಕಬಂಧಬಾಹು ಅವನದು' ಎಂದು ಹೇಳುವುದಿದೆ. ನೈಸರ್ಗಿಕ ಪ್ರಕೋಪಗಳನ್ನು ಹೇಳುವಾಗಲೂಕಾಲ ತನ್ನ ಕಬಂಧಬಾಹುವನ್ನು ಬಳಸಿ ಎಲ್ಲವನ್ನೂ ತನ್ನ ಒಡಲೊಳಗೆ ಸೆಳೆದುಕೊಂಡ’ ಎಂದು ವರ್ಣಿಸುವುದಿದೆ. ಸುನಾಮಿಯಂಥ ಅನಾಹುತವಾದಾಗ ಸಮುದ್ರನಿಗೆ ಕಬಂಧಬಾಹು'ವನ್ನು ಆರೋಪಿಸುವುದಿದೆ. ಯಾರೀತ ಕಬಂಧ? ಅದೇನು ಕಬಂಧಬಾಹು? ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ...

ಏಕಲವ್ಯ ಶ್ರದ್ಧೆ

*ತನಗೆ ತಾನೇ ಗುರುವಾಗುವ ಸಾಧನೆ ಏಕ ಮನಸ್ಸಿನಿಂದ ಯಾರ ಸಹಾಯವೂ ಇಲ್ಲದೆ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವ ವ್ಯಕ್ತಿಯನ್ನು ಕಂಡಾಗ, `ನೋಡಿ, ಅವನದು ಎಂಥ ಏಕಲವ್ಯ ಶ್ರದ್ಧೆ’ ಎಂದು ಮೆಚ್ಚುಗೆಯ ಮಾತನ್ನು ಆಡುತ್ತೇವೆ. ಮಹಾಭಾರತದಲ್ಲಿ ಏಕಲವ್ಯ ಅತ್ಯಂತ ಚಿರಪರಿಚಿತ ಪಾತ್ರವಾಗಿದ್ದಾನೆ. ಮೂಲತಃ ಏಕಲವ್ಯ ಯಾದವ ವಂಶದವನು. ಚಿಕ್ಕಂದಿನಲ್ಲಿಯೇ ಆತ ಕಾಡನ್ನು ಸೇರಿದ ಕಾರಣ ಮೂಲ ವಂಶದ ಕುರುಹು ಮರೆಯಾಯಿತು. ಆದರೆ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ಇಚ್ಛೆ ಮಾತ್ರ ಆತನಲ್ಲಿ ಬಲವಾಗಿ ಉಳಿಯಿತು. ಆತ ದ್ರೋಣಾಚಾರ್ಯರ ಬಳಿಗೆ ಬಂದು ವಿದ್ಯೆ ಕಲಿಸುವಂತೆ...

ಎಲ್ಲ ಬಿಟ್ಟ ಬಂಗಿ ನೆಟ್ಟ

*ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು ನಮ್ಮೂರ ಶಂಕರ ಜೀವನದಲ್ಲಿ ನೆಲೆ ನಿಲ್ಲಲು ಏನೇನೋ ಮಾಡಿದ. ಮೊದಲು ಗೇರುಬೀಜದ ವ್ಯಾಪಾರ, ನಂತರ ಚಹಾದಂಗಡಿ, ನಂತರ ಕಲ್ಲಂಗಡಿ ಬೆಳೆ, ಐಸ್‌ಕ್ಯಾಂಡಿ ಫ್ಯಾಕ್ಟರಿ ಹೀಗೆ ಒಂದಾದ ಮೇಲೆ ಒಂದನ್ನು ಮಾಡುತ್ತ ಹೋದ. ಕೊನೆಗೆ ಅವನು ಸಿನಿಮಾ ಟಾಕೀಸಿನಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರಾಟವನ್ನೂ ಮಾಡಿದ. ಊರಿನಲ್ಲಿ, ಶಂಕರ ಈಗ ಏನು ಮಾಡ್ತಿದ್ದಾನೆ ಎಂದು ಯಾರನ್ನಾದರೂ ಕೇಳಿದರೆ, `ಎಲ್ಲ ಬಿಟ್ಟ ಬಂಗಿ ನೆಟ್ಟ' ಎಂದು ಹೇಳುತ್ತಾರೆ. ಶಂಕರನ ಇತ್ಯೋಪರಿ ಎಲ್ಲ ತಿಳಿದವರಿಗೆ...

ಎರಡು ಕುದುರೆ ಸವಾರಿ

*ಸ್ಪಷ್ಟ ನಿರ್ಧಾರ ಇಲ್ಲದವರ ಪರಿ ಇದು ಪ್ರತಿಯೊಬ್ಬರ ಬದುಕಿನಲ್ಲೂ ನಿರ್ಧಾರವನ್ನು ಕೈಗೊಳ್ಳಬೇಕಾದ ಕಾಲ ಬಂದೇ ಬರುತ್ತದೆ. ಆಗ ಯಾವುದು ಸರಿ ಯಾವುದು ಸರಿಯಲ್ಲ ಎಂಬ ದ್ವಂದ್ವ ಎದುರಾಗುತ್ತದೆ. ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು? ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ ಎನ್ನುವ ಸ್ಥಿತಿ. ಅದೂ ಇರಲಿ ಇದೂ ಇರಲಿ ಎಂಬ ಡೋಲಾಯಮಾನ ಸ್ಥಿತಿ. ಮನೆಯವರ ಒತ್ತಾಯಕ್ಕೆ ಒಂದು ಮದುವೆ, ಮನಸ್ಸಿನ ಒತ್ತಾಯಕ್ಕೆ ಒಂದು ಮದುವೆ ಮಾಡಿಕೊಂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ಗೋಳಾಟ ಇದು. ಆಯ್ಕೆ...