ಪುಷ್ಯ ಕಳೆಯುವುದೇ ತಡ ಕರಾವಳಿಯಲ್ಲಿ ಒಂದಲ್ಲ ಒಂದು ತೇರು. ಒಂದೂರಿನಲ್ಲಿ ತೇರು ಎಂದರೆ ಏಜುಬಾಜಿನ ಹತ್ತೂರಲ್ಲಿ ಮನೆಮನೆಯಲ್ಲೂ ಹಬ್ಬವೇ ಹಬ್ಬ. ಆಗಲೆ ಕಾತ್ಗಿ ಬೆಳೆಯ ಕುಯ್ಲು ಮುಗಿದು ಎಲ್ಲರ ಮನೆಯಲ್ಲೂ ಕಾಳುಕಡಿ ಸಮೃದ್ಧವಾಗಿರುತ್ತದೆ. ಸುಗ್ಗಿ ಬೆಳೆಯ ಸಾಧ್ಯತೆ ಇದ್ದಲ್ಲಿ ಬಿತ್ತನೆ, ನಾಟಿ ಮುಗಿದಿರುತ್ತದೆ. ಕೆಲಸವೆಲ್ಲ ಮುಗಿಯಿತಪ್ಪ ಎಂದು ರೈತರಲ್ಲ ನಿರುಂಬಳವಾಗಿ ಉಸಿರಾಡಿಸಿಕೊಳ್ಳುತ್ತಿರುವಾಗಲೆ ಈ ತೇರುಗಳು ಬಂದುಬಿಡುತ್ತವೆ.ಒಂದೇ, ಎರಡೇ….ಇಡಗುಂಜಿಯ ತೇರು, ಬಳಕೂರು ತೇರು, ದಿಬ್ಬಣಗಲ್ಲ ತೇರು, ಕೊಳಗದ್ದೆ ತೇರು, ಕಾಸರಕೋಡು ತೇರು, ಹಳದಿಪುರ ತೇರು, ಅಗ್ರಹಾರ ತೇರು, ಧಾರೇಶ್ವರ...
ನಾನಿನ್ನೂ ಆಗ ಚಿಕ್ಕವನು. ಏಳೆಂಟು ವರ್ಷಗಳು ಇರಬಹುದು. ನಮ್ಮ ಮನೆಗೆ ಒಂದು ಎಮ್ಮೆಯನ್ನು ತರಬೇಕು ಎಂಬ ವಿಷಯದಲ್ಲಿ ನನ್ನ ಅಪ್ಪ ಅಮ್ಮ ಚರ್ಚೆ ನಡೆಸಿದ್ದರು. ಗಂಟಿಗಳಿಗೂ ಕಾಲುಗುಣ ಎನ್ನುವುದು ಇರುತ್ತದೆ. ಎಂಥೆಂಥದ್ದೋ ತಳಿಗಳನ್ನು ತಂದು ಹೊಕ್ಕಿಸಿದರೆ ಇರುವ ದನಕರುಗಳೂ ನಾಶವಾಗುವವು ಎನ್ನುವ ಜನರಾಗಿದ್ದರು ಅವರು. ನೀವು ಮಾಡಿದ್ದು ಸರಿ ಎಂದು ಶಕುನದ ನುಡಿ ಅವರಿಗೆ ಹೇಳುವವರು ಯಾರು?ಅದಕ್ಕೆ ಅವರೇನು ಮಾಡಿದರು ಗೊತ್ತೆ? ಒಂದು ಮೊರದಲ್ಲಿ ಎರಡು ಮೂಲೆಗಳಿಗೂ ಎರಡೆರಡು ಬೊಗಸೆ ಅಕ್ಕಿಯನ್ನು ಹಾಕಿದರು. ಒಂದರಲ್ಲಿ ಅವರು ಇದ್ದಲಿಯನ್ನೂ...
ದೇವರು ಬಂದರು ದಾರಿಬಿಡಿ ಪಲ್ಲಕ್ಕಿ! ಹೌದು, ಪಲ್ಲಕ್ಕಿಯೆಂದರೆ ಪಲ್ಲಕ್ಕಿಯೇ. ಆದು ಬಂತೆಮದರೆ ಇಡೀ ಊರಿಗೆ ಊರೇ ಎಚ್ಚರ. ಪಲ್ಲಕ್ಕಿ ಇದ್ದಾಗ ಕಳ್ಳತನವಿರಲಿಲ್ಲ. ಜನರನ್ನು ರೋಗ ಬಾಧಿಸುತ್ತಿರಲಿಲ್ಲ. ಬರೀ ಮನುಷ್ಯರೇ ಏನು, ದನ ಕರು ಕೋಳಿಗಳಿಗೂ ರೋಗ ತಟ್ಟುತ್ತಿರಲಿಲ್ಲ! ಮಿಂದು ಅದೆಷ್ಟೋ ದಿನಗಳಾದವರೂ ಪಲ್ಲಕ್ಕಿ ಊರಲ್ಲಿ ಇದ್ದಷ್ಟು ದಿನ ಮಿಂದುಬಿಡುತ್ತಿದ್ದರು. ಬೇಲಿಯಲ್ಲಿ ಅರಳಿ ಮುಡಿಗೂ ಜಡೆಗೂ ಸಲ್ಲುವ ಭಾಗ್ಯವಿಲ್ಲದೆ ಬಾಡಿಹೋಗುತ್ತಿದ್ದ ಕೋಟೆ ಹೂವು, ಕೆಂಪುದಾಸವಾಳ, ಹುಲಿಮೀಸೆ ಹೂವುಗಳು ಪಲ್ಲಕ್ಕಿ ಇದ್ದ ಅವಧಿಯಲ್ಲಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದವು.ನಮ್ಮೂರ ಪುರಾಣ ಬಿಚ್ಚಿದರೆ...
ಅದು ಹೀಗಾಯಿತು. ಶರಾವರಿ ನದಿಯಲ್ಲಿ ಹೊನ್ನಾವರದಿಂದ ಗೇರಸಪ್ಪಾ ವರೆಗೆ ಕೇರಳದ ಕಡೆಯವರೊಬ್ಬರು ಲಾಂಚ್ ಸವರ್ಿಸ್ ಇಟ್ಟಿದ್ದರು. ಒಂದಲ್ಲ ಎರಡು ಲಾಂಚುಗಳು. ಬರಿ ಲಾಂಚ್ ಎಂದರೆ ಕಲ್ಪನೆಗೆ ನಿಲುಕುವುದಿಲ್ಲ. ಒಮ್ಮೆಲೆ ಸುಮಾರು 500 ಜನರನ್ನು ಒಯ್ಯಬಹುದಾದಷ್ಟು ದೊಡ್ಡ ಲಾಂಚು ಅದು. ಇದಕ್ಕೆ ಮಾಳಿಗೆ ಕೂಡ ಇತ್ತು. ಅಲ್ಲಿ `ಎ’ ಕ್ಲಾಸ್ ಸೀಟುಗಳು. ಬಸ್ಸಿನಲ್ಲಿರುವಂತೆ ಗ್ಲಾಸಿನ ಕಿಡಕಿಗಳು. ಕೆಳಗಡೆ ಕೇವಲ ಕಟ್ಟಿಗೆಯ ಹಲಗೆಗಳು.ಹೊನ್ನಾವರದಿಂದ ಗೇರಸಪ್ಪಾಗೆ ಕ್ರಮಿಸಲು ಕನಿಷ್ಠ ಮೂರೂವರೆ ತಾಸು ಹಿಡಿಯುತ್ತಿತ್ತು. ಒಂದು ಲಾಂಚನ್ನು ಗೇರಸಪ್ಪಾದಿಂದ ಬೆಳಿಗ್ಗೆ ಆರು ಆರೂವರೆಗೆ...
ಇತ್ತೀಚಿನ ಹದಿನೈದು ವರ್ಷಗಳಲ್ಲಿ ಡಿಂಗೀ ಇಲ್ಲದೆ ಹೊಳೆಸಾಲಿನವರಿಗೆ ಬದುಕೇ ಇಲ್ಲ ಅನ್ನಿಸಿಬಿಟ್ಟಿದೆ. ಅವರ ಬದುಕಿನ ಹಾಸುಹೊಕ್ಕುಗಳಲ್ಲಿ ಯಾವುದೋ ಒಂದು ಎಳೆಯಾಗಿ ಅದು ನೇಯ್ದುಕೊಂಡುಬಿಟ್ಟಿದೆ. ನಿಶ್ಶಬ್ದ ನದಿ ಕೊಳ್ಳದಲ್ಲಿ ಒಂದು ದಿನ ಡಿಂಗೀಯ ಸದ್ದು ಕೇಳಲಿಲ್ಲವೆಂದರೆ ಅದೇನೋ ಕಳೆದುಕೊಂಡ ಹಾಗೆ ಜನರು ಚಡಪಡಿಸುವರು. ಅವರ ಬದುಕಿನ ವೇಳಾಪಟ್ಟಿಯಲ್ಲಿ ಏರುಪೇರು ಸಂಭವಿಸಿ ಬಿಡುವುದು.ಪ್ರಶಾಂತವಾದ ಶರಾವತಿ ಕೊಳ್ಳದಲ್ಲಿ ಡಿಂಗೀಯಲ್ಲಿ ಪ್ರಯಾಣಿಸುವುದೇ ಒಂದು ವಿಶಿಷ್ಟವಾದ ಅನುಭವ. ಗೇರುಸೊಪ್ಪೆಯಿಂದ ಹೊನ್ನಾವರದ ವರೆಗಿನ ಹೊಳೆಸಾಲಿನ ಜನರಿಗೆ ಜಲಸಂಚಾರದ ಸಾಧನವಾಗಿ ಡಿಂಗೀ ಬಳಕೆಯಾಗುತ್ತಿದೆ. ಏನಿದು ಡಿಂಗೀ? ಹೆಸರು...
ಅಂಗಳ ಇಲ್ಲದ ಮನೆ ಇರುವುದೆ? ನಮ್ಮೂರಂಥ ಹಳ್ಳಿಗಳಲ್ಲಿ ಮನೆಯ ಮುಂದೊಂದುಪುಟ್ಟ ಅಂಗಳವಿದ್ದರೆ ಅದರ ಶೋಭೆಯೇ ಬೇರೆ. ನಮ್ಮ ಕರಾವಳಿಯಲ್ಲಾಗಲಿ, ಮಗ್ಗುಲಿನ ಮಲೆನಾಡಿನಲ್ಲಾಗಲಿ ಬಯಲುಸೀಮೆಯಂತೆ ಗುಂಪು ಗುಂಪಾಗಿ ಮನೆಗಳು ಇರುವುದಿಲ್ಲ. ಎಲ್ಲರದೂ ಪ್ರತ್ಯೇಕ ಅಡಕೆ ಅಥವಾ ತೆಂಗಿನ ತೋಟ, ಇಲ್ಲವೆ ಎರಡರ ಬೆರಕೆಯ ಹಿತ್ತಿಲು. ಇದರಲ್ಲಿಯೇ ನಮ್ಮದು ಎನ್ನುವ ಮನೆ.ಕಾತರ್ಿಕ ಮುಗಿಯಿತು ಎನ್ನುವುದೇ ತಡ ಮನೆಯ ಮುಂದೆ ಒಂದು ಅಂಗಳ ಸಿದ್ಧಪಡಿಸುವ ಚಡಪಡಿಕೆ ಎಲ್ಲರ ಮನೆಯ ಹೆಂಗಸರಿಗೆ. ಮುಂದೆ ಒಂದೊಂದೇ ಹಬ್ಬ ಹುಣ್ಣಿಮೆಗಳು, ತೇರು ಜಾತ್ರೆಗಳು, ಮದುವೆ ಮುಂಜಿಗಳು...
ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನುವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಪಣ ತೊಡುವ ಇನ್ನೊಂದು ಮುಹೂರ್ತ ನಿಗದಿಯಾಗಿದೆ. ಅಯ್ಯೋ, ಈ ವಾಕ್ಯವನ್ನೂ ಇಡಿಯಾಗಿ ಕನ್ನಡದಲ್ಲೇ ಹೇಳುವುದಕ್ಕೆ ಆಗುತ್ತಿಲ್ಲವಲ್ಲ. ಈ ಮುಹೂರ್ತ ಎಲ್ಲಿಂದ ಬಂತು? ಮುಹೂರ್ತಕ್ಕೆ ಕನ್ನಡದಲ್ಲಿಯೇ ಪದ ಇಲ್ಲವೆ? ಗಳಿಗೆಯೆ, ಕ್ಷಣವೆ, ಕಾಲವೆ.. ಓಹೋ! ಇವು ಒಂದೂ ಕನ್ನಡವಲ್ಲವಲ್ಲ!...
ನನಗಾದ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿದೆ. ದ್ವಿತೀಯ ಪಿಯುಸಿ ಮಕ್ಕಳಿಗೆ ವೃತ್ತಿಶಿಕ್ಷಣದ ಕೌನ್ಸಿಲಿಂಗನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವುದು ಸರಿಯಷ್ಟೆ. ಇಲ್ಲಿ ಮಕ್ಕಳು ಕೌನ್ಸೆಲಿಂಗ್ ಸಮಯದಲ್ಲಿ ಸಲ್ಲಿಸುವ ಪ್ರಮಾಣಪತ್ರಗಳ ಝರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಸಹಿಮಾಡಿಸಬೇಕು ಎಂಬ ನಿಯಮ ಮಾಡಿದ್ದಾರೆ. ಈ ರೀತಿ ಸಹಿಮಾಡಿಸಿಕೊಳ್ಳಲು ಪತ್ರಾಂಕಿತ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಮಕ್ಕಳೋ ಅವರ ಹೆತ್ತವರೋ ಹೋಗಬೇಕಾಗುತ್ತದೆ. ಅಲ್ಲಿ ಅವರು ಕಚೇರಿಯಲ್ಲಿ ಇದ್ದರೆ ಆಯಿತು, ಇಲ್ಲದಿದ್ದರೆ ಅವರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕಾಯ್ದುಕುಳಿತುಕೊಳ್ಳಬೇಕು, ಇಲ್ಲ ಅವರು...
ಈ ದೇಶದ ಕಾನೂನು ಯಾರಿಗೂ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿಲ್ಲ. ಬೇರೆಯವರ ಜೀವವನ್ನು ತೆಗೆಯುವುದು ಹೇಗೆ ಅಪರಾಧವೋ ತಮ್ಮ ಜೀವವನ್ನು ತೆಗೆದುಕೊಳ್ಳುವುದೂ ಅಪರಾಧವೇ. ಇಂಥ ಕಾನೂನಿನ ವ್ಯವಸ್ಥೆ ಇರುವ ದೇಶದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಎನ್ನುವ ಮಾತು ಅಪರಾಧವೇ. ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ.ಗಾಂಧೀಜಿಯ ನಾಡಿನಲ್ಲಿ ಉಪವಾಸ ಸತ್ಯಾಗ್ರಹ ಹಾದಿ ತಪ್ಪುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ಉಪವಾಸ ಸತ್ಯಾಗ್ರಹ ಗಾಂಧೀಜಿಯವರ ದೃಷ್ಟಿಯಲ್ಲಿ ಆತ್ಮಶುದ್ಧಿಯ ಸಾಧನವಾಗಿತ್ತು. ಅವರು ಯಾವುದೇ ಬೇಡಿಕೆ ಇಲ್ಲದೆಯೂ, ಕೆಲವೊಮ್ಮೆ ಪ್ರಾಯಶ್ಚಿತ್ತ ರೂಪದಲ್ಲಿ...
ಈಗ ಕವನ ಬರೆಯುವುದು ಸುಲಭವಲ್ಲ ಗೆಳೆಯ ಏಕೆಂಬೆಯಾಏಕೆಂದರೆ ಕವನಬರೆಯುವುದೆಂದರೆ ಸತ್ಯವನ್ನುಹೇಳಬೇಕು, ಕವನಬರೆಯುವುದೆಂದರೆ ಮಾಡಿದ್ದನ್ನೇಮಾಡಿದ್ದೇನೆ ಎನ್ನಬೇಕುಕವನ ಬರೆಯುವುದೆಂದರೆಜಗ ಮೆಚ್ಚಿ ಅಹುದಹುದುಎನಬೇಕು.ಆದರೆಸತ್ಯ ಹೇಳುವುದುಅಷ್ಟು ಸುಲಭವಲ್ಲಮಾಡಿದ್ದನ್ನೆಲ್ಲ ಹೇಳಿ ಬೆತ್ತಲಾಗುವ ಎದೆಗಾರಿಕೆ ಇಲ್ಲಇನ್ನು ಜಗ ಎಲ್ಲಿಮೆಚ್ಚಬೇಕು ಹೇಳು?ಅದಕ್ಕೇ ಕವನ ಬರೆಯುವುದುಈಗ ಸುಲಭವಲ್ಲ.