ವಿಮರ್ಶೆ

ಗ್ರಾಮಮುಖಿ ನಾಗತಿಹಳ್ಳಿ

ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು. ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ...

ಬೇಂದ್ರೆ ಸಾಹಿತ್ಯದ ವಿರಾಟ್ ದರ್ಶನ

ಕನ್ನಡಿಗರ ವಿಮರ್ಶನ ಪ್ರಜ್ಞೆಯನ್ನು ಸದಾ ಕೆಣಕುತ್ತಿರುವ ವಿಶೇಷ ಕವಿಗಳಲ್ಲಿ ವರಕವಿ ಅಂಬಿಕಾತನಯ ದತ್ತರು ಒಬ್ಬರು. ದ.ರಾ.ಬೇಂದ್ರೆ ಬದುಕಿನಲ್ಲಿ ಬಹಳ ಬೆಂದವರು. ಬೆಂದರಷ್ಟೆ ಬೇಂದ್ರೆಯಾಗುತ್ತಾರೆ ಎಂದು ಅವರು ಹೇಳುತ್ತಿದ್ದರು. ಹೀಗಿದ್ದರೂ ಅವರು ತಮ್ಮ ನೋವನ್ನು ಇತರರಿಗೆ ಹಂಚಲಿಲ್ಲ. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ !’ ಎಂದು ಅವರು ಹೇಳಿದರು. ಅವರ ಮಟ್ಟಿಗೆ ಹೇಳುವುದಾದರೆ ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಹರಿಯಿತು. ಅದು ಕನ್ನಡಿಗರ ಭಾಗ್ಯ. ಕಾವ್ಯ ಅವರ ಪಾಲಿಗೆ ನಾದ ಲೀಲೆ. ಲೀಲೆ ಎಂಬುದು...

ಲಕ್ಷ್ಮಣ ಮಾರ್ಗದ ಆಚೆಈಚೆ

ಕನ್ನಡದ ಸಮಕಾಲೀನ ಕವಿಗಳಲ್ಲಿ ಪ್ರಮುಖರಾದ ಬಿ.ಆರ್.ಲಕ್ಷ್ಮಣರಾವ್್ ಅವರು ಕವಿತೆ ಬಿಟ್ಟು ಬೇರೇನೂ ಬರೆಯುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕವಿಗಳೇ ಆಗಿದ್ದಾರೆ. ಅವರು ಕತೆಗಳನ್ನೂ ಬರೆದಿದ್ದಾರೆ. ನಾಟಕ, ವ್ಯಕ್ತಿಚಿತ್ರ ಇಷ್ಟೇ ಅಲ್ಲ ಕಾದಂಬರಿಯನ್ನೂ ಬರೆದಿದ್ದಾರೆ. ಆದರೂ ಅವರು ಕವಿಯೆಂದೇ ಪ್ರಸಿದ್ದರು. ಅವರ ಅಭಿವ್ಯಕ್ತಿ ಪ್ರಕಟಗೊಳ್ಳಲು ಕಾತರಿಸುವುದು ಕಾವ್ಯ ಮಾಧ್ಯಮದ ಮೂಲಕವೇ. ‘ಗೋಪಿ ಮತ್ತು ಗಾಂಡಲಿನಾ’ದಿಂದ ಇಲ್ಲಿಯ ವರೆಗೆ ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ಇದೀಗ ‘ನನ್ನ ಮಟ್ಟಿಗೆ’ ಎಂಬ ಹತ್ತನೆಯ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ 50 ಕವಿತೆಗಳಿವೆ....

ಕೃಷ್ಣನ ರಾಧೆಯ ಧ್ಯಾನ

ಪ್ರೇಮದ ಪರಿಕಲ್ಪನೆ ವಿಭಿನ್ನವಾದದ್ದು. ಗ್ರಹಿಸುವವರ ಮನಸ್ಥಿತಿಯನ್ನು ಇದು ಅವಲಂಬಿಸಿರುತ್ತದೆ. ಸಖ ಮತ್ತು ಸಖಿಯನ್ನು ನಾವು ಲೌಖಿಕದ ನೆಲೆಯಲ್ಲೂ ನೋಡಬಹುದು ಅಧ್ಯಾತ್ಮದ ನೆಲೆಯಲ್ಲೂ ನೋಡಬಹುದು. ಪರಮಾತ್ಮನನ್ನೇ ತಮ್ಮ ಪತಿಯೆಂದು ಬಗೆದು ಆರಾಧಿಸುವ ಶರಣ ಪರಂಪರೆ ದಾಸ ಪರಂಪರೆ ನಮ್ಮಲ್ಲಿದೆ. ಪುರುಷರೂ ಭಗವಂತನನ್ನು ಪತಿಯೆಂದು ಬಗೆದು ತಮ್ಮನ್ನು ಸತೀತ್ವದಲ್ಲಿರಿಸಿಕೊಂಡು ಆರಾಧಿಸಿದವರಿದ್ದಾರೆ. ಬೇಂದ್ರೆಯವರ ‘ಸಖೀಗೀತ’ ಲೌಖಿಕದ ಪ್ರೇಮಪ್ರಪಂಚದಿಂದ ಅಧ್ಯಾತ್ಮದ ಭಕ್ತಿಪ್ರಪಂಚದ ವರೆಗೆ ಭಾವವನ್ನು ಬೆಳಗಿದೆ. ಅಕ್ಕಮಹಾದೇವಿಯ ಹರ ಪ್ರೇಮ, ಸಂತ ಮೀರಾಳ ಹರಿ ಪ್ರೇಮ ಕಾವ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಪಡೆದುದನ್ನು ಗಮನಿಸಬಹುದು....

‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’

‘ದಾದಾಗಿರಿಯ ದಿನಗಳು’ ಮೂಲಕ ಭೂಗತ ಜಗತ್ತಿನ ಹತ್ತಿರದ ಚಿತ್ರಣವನ್ನು ಕನ್ನಡ ಸಾಹಿತ್ಯ ರಸಿಕರಿಗೆ ಉಣಬಡಿಸಿರುವ ಅಗ್ನಿ ಶ್ರೀಧರ ಅವರ ಹೊಸ ಕಾದಂಬರಿ ‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’. ಇದು ಕೂಡ ಭೂಗತ ಜಗತ್ತಿನ ವಸ್ತುವನ್ನೇ ಹೊಂದಿದೆ. ಒಬ್ಬ ಮಜೂರ್ (ಕಿಸೆಗಳ್ಳ) ಆಗಿದ್ದ ಆಸೀಫ್‌ನನ್ನು ಇಬ್ಬರು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗುವುದರೊಂದಿಗೆ ಈ ಕಾದಂಬರಿ ಆರಂಭವಾಗುತ್ತದೆ. ನಿರಪರಾಧಿಗಳೂ, ಅವಕಾಶಕೊಟ್ಟರೆ ಸುಧಾರಣೆಯ ಬದುಕನ್ನು ಬದುಕಬಲ್ಲ ಪುಡಿ ಅಪರಾಧಿಗಳು ಪೊಲೀಸರ ತಂತ್ರ ಕುತಂತ್ರಗಳಿಂದಾಗಿ ಹೇಗೆ ಸಮಾಜಘಾತಕರಾಗಬಹುದು ಎಂಬುದನ್ನ ಆಸೀಫ್, ವರದ ಮೊದಲಾದವರ...

ಬರಗೂರರ ಅನುಸಂಧಾನ

ನಮ್ಮ ಸಮಕಾಲೀನ ಬರಹಗಾರರಲ್ಲಿ ಸಮಕಾಲೀನ ವಿವಾದಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರು ವಿವಿಧ ಕೃತಿಗಳಿಗೆ ಬರೆದ ಮುನ್ನುಡಿ ರೂಪದ ಬರೆಹಗಳ ಸಂಕಲನ ‘ಅನುಸಂಧಾನ’. ಮುನ್ನುಡಿ ಬರೆಹವು ಸಾಹಿತ್ಯದಲ್ಲಿ ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ನಿರ್ವಚಿಸಬಹುದಾಗಿದೆ. ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರೆಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ...

ಕನಕನ ಮಾಯೆ

ಕನಕದಾಸರು ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು, ಅವರು ರಚಿಸಿದ ಕೀರ್ತನಗಳು ಮತ್ತು ಇತರ ಸಾಹಿತ್ಯ ಕೃತಿಗಳಿಗಳಿಗಾಗಿ. ಇದು ಸಾಹಿತ್ಯದ ಭಾಗ. ಇನ್ನೊಂದು, ಸಮಕಾಲೀನ ಸಮಾಜದಲ್ಲಿ ಅವರು ಬಹುದೊಡ್ಡ ಸಮುದಾಯದ ನಾಯಕನೆಂದು ಪರಿಗಣಿಸಲ್ಪಟ್ಟು ಆ ಜನಾಂಗದ ಅಸ್ಮಿತೆಗೆ ಅವರು ನೆಲೆಯನ್ನು ಒದಗಿಸಿದ್ದಕ್ಕಾಗಿ. ಇದು ಸಾಮಾಜಿಕ ಭಾಗ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆ, ಕನಕ ಭವನಗಳ ನಿರ್ಮಾಣ, ಕನಕದಾಸ ಪ್ರಶಸ್ತಿಯ ಸ್ಥಾಪನೆ ಮೊದಲಾದವೆಲ್ಲ ಕನಕದಾಸರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಈ ಕಾರಣಕ್ಕಾಗಿಯೇ ಉಳಿದ ದಾಸವರೇಣ್ಯರಿಂದ ಕನಕದಾಸರು ಪ್ರತ್ಯೇಕವಾಗಿ...

ದೇವುಡು ಮಹಾದರ್ಶನ

ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾಗಿದ್ದ ದೇವುಡು ನರಸಿಂಹ ಶಾಸ್ತ್ರಿಗಳ ವ್ಯಕ್ತಿತ್ವ ಹಾಗೂ ಕೃತಿಗಳ ದರ್ಶನ ಮಾಡಿಸುವ “ದೇವುಡು ದರ್ಶನ’ ಕೃತಿಯನ್ನು ಹೊ.ರಾ. ಸತ್ಯನಾರಾಯಣ ಮತ್ತು ಗಂಗಾಧರ ದೇವುಡು ಅವರು ಸಂಪಾದಿಸಿದ್ದಾರೆ. ದೇವುಡು ಅವರ ಜೀವನ ಒಂದು ಭಾಗ ಮತ್ತು ಅವರ ಸಾಹಿತ್ಯ ಕೃತಿಗಳ ವಿಮರ್ಶೆ ಎರಡನೇ ಭಾಗದಲ್ಲಿದೆ.ನಿಟ್ಟೂರು ಶ್ರೀನಿವಾಸರಾಯರು, ವಿ. ಸೀತಾರಾಮಯ್ಯ, ಅ.ನ. ಕೃಷ್ಣರಾಯರು, ಬಿ. ಶಿವಮೂರ್ತಿಶಾಸ್ತ್ರಿಗಳು, ಎನ್.ಕೆ. ಕುಲಕರ್ಣಿ ಮೊದಲಾದವರ ಲೇಖನಗಳು ಈ ಭಾಗದಲ್ಲಿವೆ. ದೇವುಡು ಅವರೇ ಬರೆದಿರುವ ಆತ್ಮಕಥನವೂ ಇದರಲ್ಲಿದೆ. ದೇವುಡು ನರಸಿಂಹ ಶಾಸ್ತ್ರಿಗಳ...

ಘಮಘಮಿಸುವ “ಸುರಗಿ’

ಕನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಎನ್ನುವುದನ್ನು ನನ್ನ ಅಮ್ಮ ಮತ್ತು ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ಒಂದು ಸಾರಿ ಅಬ್ಬಕ್ಕ (ಅವರ ಮನೆಯ ಕೆಲಸದ ಹೆಂಗಸು) ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ಹೀಗೆ ತಮಾಷೆ ಮಾತನಾಡಿದೆನಂತೆ, “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’. ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನನ್ನ ಅಮ್ಮ “ನೋಡು, ನಮ್ಮ ಅನಂತು “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’’ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿದ್ದರು. ಇಲ್ಲೊಂದು...

ಸತ್ಯಾನ್ವೇಷಣೆಯ ಕಥನಗಾರಿಕೆಯ ಹೆಗ್ಗುರುತು

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ “ಹೆಗ್ಗುರುತು’ ಹತ್ತು ಕತೆಗಳನ್ನು ಒಳಗೊಂಡಿದೆ. ಈ ಸಂಕಲನದ ಮೂಲಕ ಕನ್ನಡ ಕಥನಕ್ರಿಯೆಯಲ್ಲಿ ಹೊಸ ಹೆಗ್ಗುರುತು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಸಂಕಲನಕ್ಕೆ ಮಲ್ಲಿಕಾರ್ಜುನ ಹಿರೇಮಠ ಅವರು ವಿಸ್ತಾರವಾದ, ಅಧ್ಯಯನಪೂರ್ಣ ವಿಮರ್ಶೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿರುವರು. ಹಿರೇಮಠ ಅವರು ಹೇಳದೆ ಬಿಟ್ಟ ಒಳನೋಟಗಳು ಏನಾದರೂ ಇವೆಯೇ ಎಂದು ನೋಡಿ ಹೇಳುವುದಕ್ಕೆ ಮಾಡಿರುವ ಪುಟ್ಟ ಪ್ರಯತ್ನ ಇದು. ಕೆ.ಸತ್ಯನಾರಾಯಣ ಅವರು ಕಥಾರಚನೆಯನ್ನು ಒಂದು ಸವಾಲಿನ, ಸೃಜನಶೀಲ ಮನಸ್ಸಿನ ಪ್ರತಿಷ್ಠೆಯ...