*ಕಷ್ಟಪಡದೆ ಸುಖ ಇಲ್ಲ ಸುಖ ಪಡಬೇಕು ಎಂದರೆ ಕಷ್ಟ ಪಡಲೇಬೇಕು. `ಕೈ ಕೆಸರಾದರೆ ಬಾಯಿ ಮೊಸರು' ಎಂದು ಹೇಳುತ್ತಾರಲ್ಲ. ಹಾಗೆ ಇದು. ಕಷ್ಟಪಡದೆ ಸುಖಪಡುವ ಆಸೆಯಲ್ಲಿದ್ದವರನ್ನು ಕಂಡಾಗಕೊಕ್ಕೆಯಲ್ಲಿ ಜೇನು ಕೊಯ್ಯುವವರು ಇವರು’ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇಲ್ಲಿ ಕೊಯ್ಯುವುದು ಎದರೆ ಕೀಳುವುದು. ಕೊಕ್ಕೆಯಿಂದ ಜೇನನ್ನು ಕಿತ್ತರೆ ಅದು ನಮ್ಮ ಕೈಗೆ ಸಿಗದೆ ನೆಲಕ್ಕೆ ಬಿದ್ದು ತಿನ್ನಲು ಆಗದ ಸ್ಥಿತಿಯನ್ನು ತಲುಪುತ್ತದೆ. ಆದರೆ ಜೇನಿನ ಸ್ವಾದ ನಮಗೆ ಸಿಗಬೇಕೆಂದರೆ ಜೇನಿನ ಹುಟ್ಟಿಗೆ ನಾವು ಕೈ ಹಚ್ಚಬೇಕು. ಆಗ...
*ಸೋಲನ್ನು ಒಪ್ಪಿಕೊಳ್ಳಲಾಗದ ದೊಡ್ಡಸ್ಥಿಕೆ ಇದು ಒಬ್ಬ ಜಟ್ಟಿ ಇದ್ದನಂತೆ. ಕುಸ್ತಿ ನಡೆಯಿತು. ಎದುರಾಳಿ ಅವನನ್ನು ಎತ್ತಿ ಒಗೆದು ಚಿತ್ ಮಾಡಿಬಿಟ್ಟ. ಅಖಾಡಾದಿಂದ ಹೊರಕ್ಕೆ ಬಂದ ಸೋತ ಜಟ್ಟಿ, ನನ್ನನ್ನೇನೋ ಅವನು ಕೆಳಕ್ಕೆ ಹಾಕಿದ. ಆದರೆ ನನ್ನ ಮೀಸೆಗೆ ಮಾತ್ರ ಮಣ್ಣು ಹತ್ತಲಿಲ್ಲ ಎಂದು ತನ್ನ ಪೊಗದಸ್ತಾದ ಮೀಸೆಯ ಮೇಲೆ ಕೈಯಾಡಿಸಿಕೊಂಡನಂತೆ. ರಾಜಕಾರಣಿಗಳು ಚುನಾವಣೆಯ ಫಲಿತಾಂಶ ಬಂದ ಬಳಿಕ ತಮ್ಮ ಸೋಲನ್ನು ವಿಶ್ಲೇಷಿಸುವುದನ್ನು ಕೇಳಿದಾಗ ಈ ಮಾತು ನೆನಪಾಗುತ್ತದೆ. ತಮಗೆ ಸ್ಥಾನಗಳು ಕಡಿಮೆ ಬಂದಿವೆ ನಿಜ, ಆದರೆ ಪಡೆದ...
*ದುರ್ಬಲ ಮನಸ್ಸಿನ ಪ್ರತೀಕ ದೃಢ ಚಿತ್ತ ಇಲ್ಲದ ವ್ಯಕ್ತಿಗಳನ್ನು, `ಅವನೊಬ್ಬ ಕೆಸರೊಳಗಿನ ಗೂಟ’ ಎಂದು ಹೇಳುವುದಿದೆ. ಗೂಟ ಗಟ್ಟಿಯಾಗಿ ನಿಲ್ಲಬೇಕಿದ್ದರೆ ಭೂಮಿ ಗಟ್ಟಿಯಾಗಿರಬೇಕು. ಭೂಮಿಯೇ ಗಟ್ಟಿಯಿಲ್ಲದಿದ್ದರೆ ಗೂಟವು ಬಲವಾಗಿ ನಿಲ್ಲುವುದು ಸಾಧ್ಯವೆ? ಯಾವ ಕಡೆಗೆ ಬೇಕಾದರೂ ಈ ಕೆಸರೊಳಗಿನ ಗೂಟ ವಾಲುತ್ತದೆ. ಆದರೆ ಗಟ್ಟಿಯಾದ ನೆಲದ ಮೇಲೆ ಹುಗಿದ ಗೂಟವನ್ನು ಬಾಗಿಸಲು ಸಾಧ್ಯವೇ ಇಲ್ಲ. ಕೆಲವರಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಸದಾ ಡೋಲಾಯಮಾನ ಸ್ಥಿತಿ. ಹಾಗೆ ಮಾಡಿದರೆ ಸರಿಯೆ, ಹೀಗೆ ಮಾಡಿದರೆ ಸರಿಯೆ ಎಂಬ ಗೊಂದಲದಲ್ಲಿ ಸದಾ...
*ಷಡ್ಯಂತ್ರಗಳಿಗೆ ಭಗವಂತನ ಸಂಬಂಧ ಇಬ್ಬರು ಏನನ್ನೋ ಗುಟ್ಟಾಗಿ ಮಾತನಾಡುತ್ತಿದ್ದರೆ ಅದೇನು ಕಾರಸ್ಥಾನ ನಡೆಸುತ್ತಿದ್ದೀರಿ ಎಂದು ಕೇಳುತ್ತೇವೆ. ಕಾರಸ್ಥಾನ ಎಂದರೆ ಒಳಸಂಚು, ಕುಟಿಲ ನೀತಿ ಎಂಬ ಅರ್ಥ. ನಮ್ಮ ಪುರಾಣಪುರುಷ ಶ್ರೀಕೃಷ್ಣ ಇಂಥ ಕುಟಿಲ ನೀತಿಯಲ್ಲಿ ಎತ್ತಿದ ಕೈ. ರಾಜಕಾರಣದಲ್ಲಿ ಶ್ರೀಕೃಷ್ಣನಂಥ ಚಾಣಾಕ್ಷ ಮತ್ತೊಬ್ಬನನ್ನು ನಾವು ಕಾಣುವುದಿಲ್ಲ. ಭೂಮಿಯ ಮೇಲೆ ಜನಿಸುವಾಗಲೇ ತನ್ನ ಕಾರಸ್ಥಾನ ತೋರಿಸಿದ್ದಾನೆ. ಎಷ್ಟೆಂದರೂ ಭಗವಂತನಲ್ಲವೆ ಆತ. ಜರಾಸಂಧನ ವಿರುದ್ಧ ಯುದ್ಧ ಮಾಡುವಾಗ, ಪಾಂಡವರ ಪಕ್ಷವನ್ನು ವಹಿಸಿದಾಗ ಹೀಗೆ ಎಲ್ಲಿ ನೋಡಿದರೂ ಕೃಷ್ಣನ ರಾಜಕೀಯ ಮುತ್ಸದ್ಧಿತನ...
*ಪ್ರಪಂಚದ ವಿಸ್ತಾರ ಅರಿಯದವರು ಅವನೊಳ್ಳೆ ಕೂಪಮಂಡೂಕ ಇದ್ದಂಗೆ ಅವ್ನೆ ನೋಡು' ಎಂದೋ,ಅವನೊಳ್ಳೆ ಬಾವಿ ಕಪ್ಪೆ ನೋಡು’ ಎಂದೋ ಇನ್ನೊಬ್ಬರ ಮೇಲೆ ಟಿಪ್ಪಣಿಯನ್ನು ದಾಖಲಿಸುವುದು ಸಾಮಾನ್ಯ. ಏನಿದು ಕೂಪ ಮಂಡೂಕ? ಕೂಪವೆಂದರೆ ಬಾವಿ. ಬಾವಿಯಲ್ಲಿರುವ ಕಪ್ಪೆಗೆ ಕೂಪಮಂಡೂಕ ಎಂದು ಹೇಳುತ್ತಾರೆ. ಬಾವಿಯಲ್ಲಿರುವ ಕಪ್ಪೆಗೆ ಹೊರಗಿನ ಪ್ರಪಂಚದ ವಿಸ್ತಾರವೇ ಗೊತ್ತಿರುವುದಿಲ್ಲ. ಆ ಬಾವಿಯೇ ಅದರ ಪ್ರಪಂಚವಾಗಿರುತ್ತದೆ. ಬಾವಿಗಿಂತ ದೊಡ್ಡ ಇನ್ನೊಂದು ಪ್ರಪಂಚ ಇದೆ ಎಂಬುದನ್ನು ಅದು ಒಪ್ಪುವುದಕ್ಕೆ ಸಿದ್ಧವೇ ಇರುವುದಿಲ್ಲ. ಅಲ್ಪ ಜ್ಞಾನಿಗಳಾದವರು ತಮ್ಮ ಜ್ಞಾನದ ಮಿತಿಗೆ ದಕ್ಕಿದ್ದೇ ಸತ್ಯವೆಂದುಕೊಳ್ಳುತ್ತಾರೆ....
*ಪುಸ್ತಕದ ಹುಳುಗಳನ್ನು ಹೀಗೆ ಕರೆಯುತ್ತಾರೆ ಸದಾ ಪುಸ್ತಕದಲ್ಲಿ ತಲೆ ಹುದುಗಿಸಿಕೊಂಡು ಕುಳಿತವರನ್ನು ಕಂಡಾಗ `ಒಳ್ಳೆ ಕೂಚಂಭಟ್ಟನ ಹಾಗೆ ಕುಂತಿದ್ದಾನೆ ನೋಡು' ಎಂದು ಅಪಹಾಸ್ಯ ಮಾಡುವುದನ್ನು ಕೇಳಿದ್ದೇವೆ. ಇದನ್ನೇ ಇನ್ನೂ ಸ್ವಾರಸ್ಯಕರವಾಗಿ,ಓದಿ ಓದಿ ಕೆಟ್ಟು ಹೋದ ಕೂಚು ಭಟ್ಟ, ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ’ ಎಂದು ಹೇಳುವವರೂ ಇದ್ದಾರೆ. ಅತಿಯಾದ ಓದಿನ ನಿರರ್ಥಕತೆ, ಓದಿಲ್ಲದಿದ್ದರೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಬಹುದೆಂಬ ಆಶಾದಾಯಕ ಮಾತು ಇದರಲ್ಲಿದೆ. ದೇಶ ನೋಡು ಕೋಶ ಓದು ಎಂಬ ಮಾತೇನೋ ಇದೆ. ಆದರೆ ಬರೀ ಓದಿನಿಂದಲೇ...
*ಆಲಸಿಯಾದ ಆಡಳಿತ ಯಂತ್ರ ತುಂಬ ನಿದ್ದೆ ಮಾಡುವವರನ್ನು ಕುಂಭಕರ್ಣ ಎಂದೋ, `ಅವನದು ಕುಂಭಕರ್ಣ ನಿದ್ದೆ’ ಎಂದೋ ಹೇಳುವುದಿದೆ. ಆಲಸಿಯಾದ ಆಡಳಿತ ಯಂತ್ರವನ್ನೂ ಕುಂಭಕರ್ಣ ನಿದ್ದೆಗೆ ಹೋಲಿಸುವುದಿದೆ. ಕುಂಭಕರ್ಣ ಯಾರಿಗೆ ಗೊತ್ತಿಲ್ಲ ಹೇಳಿ? ಮಡಕೆಯಂಥ ಕಿವಿಗಳನ್ನು ಹೊಂದಿದವನು ಎಂಬ ಅರ್ಥದ ನಾಮ ರಾವಣನ ತಮ್ಮನಿಗೆ ಅನ್ವರ್ಥವಾಗಿಯೇ ಬಂದದ್ದು. ಪರ್ವತಕಾಯದ ಕುಂಭಕರ್ಣ ನಿದ್ದೆಗೆ ಹೇಗೆ ಪ್ರಸಿದ್ಧನಾದ? ಅದರ ಹಿಂದಿನ ಪುರಾಣವೇನು? ರಾವಣ, ಕುಂಭಕರ್ಣ, ವಿಭೀಷಣ ಸಹೋದರರು. ಮಹಾನ್ ಶಕ್ತಿಶಾಲಿಗಳು. ಇವರೆಲ್ಲ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸಿದ್ದರು. ಈ ಅಸಾಮಾನ್ಯ...
*ಕುರುಕ್ಷೇತ್ರ ನಡೆಯದ ಮನೆ ಇದೆಯೆ? ಅದೇನು ಮಾರಾಯ, ಅವರ ಮನೆ ಒಂದು ಕುರುಕ್ಷೇತ್ರ ಆಗಿದೆ ಎಂದೋ, ಅವರ ಸಂಸಾರ ಕುರುಕ್ಷೇತ್ರ ಎಂದೋ ತೀರ ಸಹಜವಾಗಿ ಹೇಳಿಬಿಡುತ್ತೇವೆ. ಕೇಳಿಸಿಕೊಂಡವನಿಗೆ, ಆ ಮನೆಯಲ್ಲಿ ಎಲ್ಲವೂ ಸರಿ ಇಲ್ಲ, ನಿತ್ಯ ಜಗಳ, ಒಳಸಂಚು ನಡೆಯುತ್ತಿದೆ ಎಂಬ ಅರ್ಥವನ್ನು ರವಾನಿಸುತ್ತದೆ. `ಅದೇನು ಮಹಾಭಾರತ ನಡೆಸಿದ್ದೀರೋ?'ಅದೆಲ್ಲ ರಾಮಾಯಣ ನನಗೆ ಹೇಳಬೇಡ’ ಎಂದು ಹೇಳುವುದನ್ನೂ ಕೇಳಿದ್ದೇವೆ. ಈ ಎರಡು ಮಹಾಕಾವ್ಯಗಳು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೇವಲ ಹಿಂದೂಗಳಷ್ಟೇ ಅಲ್ಲ, ಇತರ ಧರ್ಮದವರೂ ಈ ಎರಡು ಮಹಾಕಾವ್ಯದ...
*ಬಹಳ ಅವಸರ ಮಾಡುವ ವ್ಯಕ್ತಿ ಬಹಳ ಅವಸರ ಮಾಡುವ, ದರ್ಪ ತೋರುವ ವ್ಯಕ್ತಿಯನ್ನು ನೋಡಿದಾಗ, `ಏನು, ಕುದುರೆ ಮೇಲೆ ಬಂದವನ ಹಾಗೆ ಮಾಡ್ತಾ ಇದ್ದೀಯಲ್ಲೋ, ಸ್ವಲ್ಪ ತಡ್ಕೋ' ಎಂದು ಹೇಳುವುದನ್ನು ಕೇಳಿದ್ದೇವೆ. ನಾವೇ ಎಷ್ಟೋ ಸಲ ಇದನ್ನು ಬಳಸಿರಬಹುದು. ಮಾವನ ಮನೆಗೆ ಬಂದ ಅಳಿಯ ತಿರುಗಿ ಹೋಗಲು ಗಡಿಬಿಡಿ ಮಾಡತೊಡಗಿದರೆ,ಕುದುರೆ ಕಟ್ಟಿಹಾಕಿ ಬಂದೆಯೋ ಇಲ್ಲ ಹಾಗೇ ಬಿಟ್ಟು ಇಟ್ಟಿದ್ದೀಯೋ’ ಎಂದು ಹೇಳುವುದನ್ನೂ ಕೇಳಿರಬಹುದು. ಬಸ್ಸು, ಕಾರುಗಳು ಇಲ್ಲದ ಕಾಲದಲ್ಲಿ ಕುದುರೆಯೇ ಬಹಳ ವೇಗದ ಸಂಚಾರ ವ್ಯವಸ್ಥೆಯಾಗಿತ್ತು. ಕುದುರೆಯ...
*ಮೌಲ್ಯಮಾಪನ ಕಷ್ಟವಾಗಿರುವ ವ್ಯಾಪಾರ ಕುದುರೆ ವ್ಯಾಪಾರ ಎಂಬ ಪದಗುಚ್ಛ ಬಳಕೆ ರಾಜಕೀಯಕ್ಕೆ ಸಂಬಂಧಿಸಿದಂತೆ ಬಳಕೆಯಾಗುತ್ತಿದೆ. ಒಂದು ಪಕ್ಷದ ಚುನಾಯಿತ ಪ್ರತಿನಿಧಿಯನ್ನು ಇನ್ನೊಂದು ಪಕ್ಷಕ್ಕೆ ಸೇರಿಸಿಕೊಳ್ಳಲು ನಡೆಸುವ ವ್ಯವಹಾರವನ್ನು ಕುದುರೆ ವ್ಯಾಪಾರ ಎಂದು ಕರೆಯಲಾಗುತ್ತದೆ. ಬೇರೆ ಪಕ್ಷದವರ ಮತವನ್ನು ತಮ್ಮ ಪಕ್ಷದ ಕಡೆ ಸೆಳೆದುಕೊಳ್ಳಲು ಕುದುರಿಸುವ ವ್ಯವಹಾರವನ್ನೂ ಕುದುರೆ ವ್ಯಾಪಾರ ಎನ್ನುವರು. ಕುದುರೆ ವ್ಯಾಪಾರ ತುಂಬ ಕಷ್ಟದ್ದು. ಇದರಲ್ಲಿ ದಲ್ಲಾಳಿಗಳು ಗ್ರಾಹಕರನ್ನು ಮೋಸಗೊಳಿಸುವ ಸಾಧ್ಯತೆ ತುಂಬ ಇರುತ್ತದೆ. ಕುದುರೆಯ ಗುಣ ಸ್ವಭಾವ, ಅದರ ವಯಸ್ಸು ಇತ್ಯಾದಿಗಳ ಸಂಬಂಧದಲ್ಲಿ ಸುಳ್ಳನ್ನು...