*ಕೆಲಸದಆರಂಭದಲ್ಲಿಯೇ ಒದಗುವ ವಿಘ್ನ

ಚಿಕ್ಕ ಮಕ್ಕಳಿಗೆ ಸೆಟೆಬೇನೆ ಬರುತ್ತದೆ. ಇದೊಂದು ಥರ ಅಪಸ್ಮಾರ ರೋಗ. ದೊಡ್ಡದಾಗಿ ಅಳುತ್ತ ಹಟ ಮಾಡುತ್ತ ರಚ್ಚೆ ಹಿಡಿಯುತ್ತ ಮಕ್ಕಳ ಮುಖ ಕಪ್ಪಿಟ್ಟು ಪ್ರಜ್ಞೆ ತಪ್ಪುತ್ತಾರೆ. ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗದೆ ಇರುವುದೇ ಇದಕ್ಕೆ ಕಾರಣ. ಇದು ವೈದ್ಯಕೀಯ ವಿಜ್ಞಾನದ ಕಾರಣ. ಆದರೆ ಹೆತ್ತವರು ಇದನ್ನು ಬಾಲಗ್ರಹ ಎಂದು ಕರೆದು ದೇವರಿಗೆ ಪೂಜೆ ಮಾಡಿಸುತ್ತಾರೆ. ಭಟ್ಟರಿಂದ ಯಂತ್ರ ಕಟ್ಟಿಸುವುದು, ಹರಕೆ ಹೊರುವುದು ಇತ್ಯಾದಿ ಮಾಡುತ್ತಾರೆ. ಬಾಲಗ್ರಹವೆಂದರೆ ಇಲ್ಲಿ ಚಿಕ್ಕ ಮಕ್ಕಳಿಗೆ ಕಾಡುವ ಉಪದ್ರವ. ಬೆಳೆಯುವ ಮಕ್ಕಳಿಗೆ ಈ ರೀತಿಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ.
ಯಾವುದಾದರೂ ಕಾಮಗಾರಿಯನ್ನು ಆರಂಭಿಸಿ ಅದು ಆರಂಭದಲ್ಲಿಯೇ ತೊಂದರೆಯನ್ನು ಅನುಭವಿಸಿದರೆ, ಕೆಲಸವು ತಡೆದು ತಡೆದು ಸಾಗುತ್ತಿದ್ದರೆ ಆಗ ಆ ಕಾಮಗಾರಿಗೆ ಬಾಲಗ್ರಹ ತಾಕಿದೆ ಎಂದು ಹೇಳುತ್ತಾರೆ.
ಕೇವಲ ಕಾಮಗಾರಿಯಲ್ಲ, ಯಾವುದೇ ಕೆಲಸವಾಗಿರಲಿ, ಆರಂಭದಲ್ಲಿಯೇ ಒದಗುವ ವಿಘ್ನಕ್ಕೆ ಈಗ ಬಾಲಗ್ರಹ ಪೀಡೆ ಎಂದು ಕರೆಯುವುದು ರೂಢಿಯಾಗಿಬಿಟ್ಟಿದೆ.