ಬದಲಾಗಬೇಕು ಬದಲಾಯಿಸಬೇಕು

ಮಗಳು ಹೇಳಿದಳು-ನಿನ್ನೆಯೂ ದೋಸೆ ಇವತ್ತೂ ದೋಸೆಅಮ್ಮ ನಿನ್ನದೇನು ವರಸೆ?ನೀ ಬದಲಾಗಬೇಕುರುಚಿ ಬದಲಾಯಿಸಬೇಕು ಮಗ ಹೇಳಿದ-ಮೊನ್ನೆಯೂ ಇದೇ ಚಡ್ಡಿಇವತ್ತೂ ಇದೇ ಚಡ್ಡಿಬೆವರು ನಾರುತ್ತಿದೆಗೆಳೆಯರು ಮೂಗು ಮುಚ್ಚಿಕೊಳ್ಳುತ್ತಿದ್ದಾರೆಬದಲಾಯಿಸು ಅನ್ನುತ್ತಿದ್ದಾರೆಅಮ್ಮ ಬೇರೆಯದು ಕೊಡುಸ್ವಲ್ಪ ಹರಿದಿದ್ದರೂ ಅಡ್ಡಿಯಿಲ್ಲಕೊಳಕಾದುದು ಬೇಡವೇ ಬೇಡ ಅತ್ತೆ ಹೇಳಿದಳು-ಈ ಚಾಳೀಸು ಬದಲಿಸಬೇಕು ಮಗಳೆಹತ್ತು ವರ್ಷದ ಹಿಂದೆ ಖರೀದಿಸಿದ್ದುನಂಬರು ಬದಲಾಗಿದೆ ದೃಷ್ಟಿ ಮಂಜಾಗಿದೆಟೀವಿಯಲ್ಲಿ ಯಾರನ್ನೋ ಕಂಡರೆಯಾರನ್ನೋ ಕಂಡಂತೆಮುಖವಿದ್ದರೂ ಮಖವಾಡ ಧರಿಸಿದವರಂತೆರಾಮನ ಮಾತು ಕೇಳುತ್ತದೆಆದರೆ ಚಹರೆ ರಾವಣನದುಸೀತೆಯೋ ಶೂರ್ಪನಖಿಯೋಒಂದೂ ತಿಳಿಯುತ್ತಿಲ್ಲಚಾಳೀಸು ಮೊದಲು ಬದಲಾಯಿಸಬೇಕು ಗಂಡ ಹೇಳಿದ-ಅದೇನು ನಿನ್ನ ಹಾಡು ನಿತ್ಯಸುಳ್ಳು ಹೇಳಿದ್ದೇ...

ರತ್ನಗಳ ವ್ಯಾಪಾರ

ಡೆಲ್ಲಿಯಲ್ಲಿ ದಲ್ಲಾಳಿಗಳುಅಂಗಡಿ ತೆರೆದಿದ್ದಾರೆಅಳೆದಳೆದು ತೂಗಿ ತೂಗಿರತ್ನಗಳನ್ನು ಮಾರುತ್ತಿದ್ದಾರೆ ಕೂಗಿ ಕೂಗಿ ಕರೆಯುತ್ತಿದ್ದಾರೆಬನ್ನಿ ಬನ್ನಿಕೈ ಬದಲಾಯಿಸಿ ನೋಡಿಬೆರಳು ಬೆರಳಿಗೂಮುತ್ತು ರತ್ನ ಪಚ್ಚೆ ಪವನಿನ ಉಂಗುರ ನಿಮ್ಮಲ್ಲಿ ಎಷ್ಟಿದೆಯೋ ಅಷ್ಟೇ ತನ್ನಿಅದಕ್ಕೆ ತಕ್ಕಂತೆನಿಮ್ಮ ಬೆರಳು ಕೊರಳುಅಳತೆಗೆ ಎರಕ ಹೊಯ್ದುಸ್ಥಳದಲ್ಲೇ ಸುಂದರ ರತ್ನದ ಹಾರ ಅದನ್ನು ತೊಟ್ಟರೆನಿಮ್ಮ ಗುರುತು ನಿಮಗೇ ಹತ್ತುವುದಿಲ್ಲನಮ್ಮ ಆಭರಣವೇ ನಿಮಗೆ ಹೂರಣಎಲ್ಲ ಕಡೆ ಸಲ್ಲುವ ನಿಮಗೆಹೋದಕಡೆಗೆಲ್ಲ ತೋರಣ ನೀವು ನಡೆವ ದಾರಿಯಲಿತಾವರೆಯ ಪಕಳೆಗಳುಕಮಲ ಕೊಳದಲ್ಲಿ ಮುಳುಗೆದ್ದರೆನೀವು ತುಳಿದ ಕೊಳಚೆಯೆಲ್ಲಇಲ್ಲಿ ಮಡಿಯಾಗಿ ನೀವು ಶುದ್ಧವೋ ಶುದ್ಧ ನೀವು ಏನೇ...

ಸ್ತ್ರೀ ಚೈತನ್ಯದ ವಿವಿಧ ಮಜಲುಗಳ ಅನಾವರಣ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’

ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’. ಇದಕ್ಕೆ ಅವರು ಟೆಕ್ಸ್ಟ್‌ ಬುಕ್ ಸ್ತ್ರೀವಾದ ಮತ್ತು ಹವ್ಯಾಸಿ ಸ್ತ್ರೀವಾದಿಗಳ ಬರವಣಿಗೆಯ ಆಚೆಗೂ ಇರುವ ಹೆಣ್ಣು ಕಥೆಗಳು ಎಂದು ಉಪಶೀರ್ಷಿಕೆ ನೀಡಿದ್ದಾರೆ. ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ನನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇತಾನಾಗಿ ರೂಪುಗೊಂಡಿದೆ ಎಂದು ಲೇಖಕರು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಆ ಇನ್ನೊಂದು ಜಗತ್ತುಎಂದರೆ ಸೃಷ್ಟಿಕ್ರಿಯೆಯ ಶರೀರದ ಒಳಗಿರುವ ಆತ್ಮ. ಅದೇ ಧ್ವನಿ. ಪ್ರತಿಯೊಂದು ಕೃತಿಯೂ ಸಾರ್ಥಕವೋ ವಿಫಲವೋ ಎನ್ನುವುದು ಅದು ಹೊರಡಿಸುವ ಧ್ವನಿ...

ಗುಂಡೂಮನೆಯ ಮೂರು ಮುತ್ತು

ಜಿ.ಎಸ್‌.ಸದಾಶಿವ ಅವರು ಮೂರು ಕೃತಿಗಳು ಕನ್ನಡ ಕಾವ್ಯಲೋಕಕ್ಕೆ ಒಬ್ಬರು ಜಿಎಸ್‌ಎಸ್‌ ಇದ್ದಾರೆ. ಅದೇ ರೀತಿ ಕನ್ನಡ ಪತ್ರಿಕಾ ಲೋಕಕ್ಕೂ ಒಬ್ಬರು ಜಿಎಸ್‌ಎಸ್‌ ಇದ್ದರು. ಅವರೇ ಡೂಮನೆ ಶ್ರೀಪಾದರಾವ್‌ ಸದಾಶಿವ. ಕಾಲೇಜಿನಲ್ಲಿ ಪ್ರೊಫೆಸರ್‌ ಆಗಬೇಕು ಎಂದುಕೊಂಡಿದ್ದ ಸದಾಶಿವ ಪತ್ರಿಕಾರಂಗಕ್ಕೆ ಬಂದದ್ದು ತೀರ ಆಕಸ್ಮಿಕ. `ಸಂಯುಕ್ತ ಕರ್ನಾಟಕ'ದಲ್ಲಿ ವೃತ್ತಿ ಆರಂಭಿಸಿದ ಅವರು `ಪ್ರಜಾವಾಣಿ', `ಸುಧಾ' ಬಳಿಕ `ಕನ್ನಡಪ್ರಭ'ಕ್ಕೂ ಕಾಲಿಟ್ಟರು. ಮಹಾಮೌನಿಯಾಗಿದ್ದ ಸದಾಶಿವ ಅವರೊಳಗೊಬ್ಬ ನಗೆಗಾರ ಇದ್ದ ಎಂದರೆ ನಂಬುವುದಕ್ಕೇ ಆಗುವುದಿಲ್ಲ. ಸದಾಶಿವ ಕಥೆಗಾರರೆಂದು ಪ್ರಸಿದ್ಧರಾದವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನೂ ಅವರು...

ಅವತಾರ- ನಾಟಕ

ಅವತರಿಸುವ ಮುನ್ನ (1995ರ ಸುಮಾರಿಗೆ ಬರೆದ ನಾಟಕ ಇದು. ಆಗ ನಾನು ಬೆಳಗಾವಿಯ ನಾಡೋಜ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ.) ಅವತಾರದ ರಚನಾ ಶಿಲ್ಪದಲ್ಲಿ ಪೌರಾಣಿಕ ಕಲ್ಪನೆ ಇದ್ದರೂ ಅದು ಸ್ಫೋಟಗೊಳಿಸುವ ಬೀಜಾಣುಗಳು ತೀರ ಸಮಕಾಲೀನವಾದುದಾಗಿದೆ. ಅದು ಹೇಳಹೊರಟ ಗುರಿಯತ್ತ ತಡೆಯಿಲ್ಲದೆ ಸಾಗಿದೆ ಎಂಬುದು ನನ್ನ ಭಾವನೆ. ಜಾನಪದ ಗೇಯತೆಯುಳ್ಳ ಪದ್ಯಗಳ ಬಾಹುಳ್ಯತೆಯಿಂದಾಗಿ ಇದೊಂದು ಸಂಗೀತ ನಾಟಕವೇನೋ ಎನ್ನುವ ಗುಮಾನಿಯೂ ಬರಬಹುದು.ವಿಶೇಷ ಸಲಕರಣೆಗಳಿಲ್ಲದೆ, ರಂಗದಲ್ಲಿಯೇ ಜೋಡಿಸಬಹುದಾದ ಖುರ್ಚಿಯೊಂದನ್ನುಳಿದು, ಇದನ್ನು ಬೀದಿ ನಾಟಕವನ್ನಾಗಿಯೂ ನಟಿಸಬಹುದಾದ ಸಾಧ್ಯತೆ ಇದೆ. ರಂಗಪ್ರಯೋಗದ ವೇಳೆಯಲ್ಲಿ...

ಕ್ಷಯ

ಕಾದಂಬರಿ ಬರೆಹಗಾರನ ಬಿನ್ನವತ್ತಳೆ ಸೃಜನಶೀಲ ವ್ಯಕ್ತಿಯೊಬ್ಬನ ಸವಾಲುಗಳು ಉಳಿದವರ ಸವಾಲುಗಳಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ಸೃಜನಶೀಲ ವ್ಯಕ್ತಿ ಪರಿಭಾವಿಸುತ್ತಾನೆ. ಚಿಂತಿಸುತ್ತಾನೆ. ನೊಂದುಕೊಳ್ಳುತ್ತಾನೆ. ಉಸಿರುಕಟ್ಟಿದವನಂತೆ ಚಡಪಡಿಸುತ್ತಾನೆ. ಏಕಕಾಲದಲ್ಲಿ ಖಾಸಗಿಯಾಗಿಯೂ ಸಾರ್ವಜನಿಕವಾಗಿಯೂ ವರ್ತಿಸಬೇಕಾದ ಜವಾಬ್ದಾರಿ ಅವನ ಮೇಲಿರುತ್ತದೆ. ಈ ಕಾರಣಕ್ಕಾಗಿಯೇ ಅವನು ಇತರರಿಂದ ಭಿನ್ನವಾಗಿರುತ್ತಾನೆ.ಇದನ್ನೇ ಒಂದು ಚಿಕ್ಕ ಉದಾಹರಣೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ರಸ್ತೆ ಬದಿಯಲ್ಲಿ ಒಂದು ಮಾವಿನ ಮರ ಇದೆ. ಅದಕ್ಕೊಬ್ಬ ಮಾಲೀಕನೂ ಇದ್ದಾನೆ. ಅವನೊಬ್ಬ ಸಾಮಾನ್ಯ ವ್ಯಕ್ತಿ. ಆ ಮಾವಿನ ಮರದ ಬಗ್ಗೆ ಆತನ ಆಲೋಚನೆಗಳು, ಅದು ಬಿಡುವ ಹಣ್ಣು...

ಇರುವುದೆಲ್ಲವ ಬಿಟ್ಟು ಇರದುದರತ್ತ…..

ಡಾ.ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯ ಕುರಿತು ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿ ಕೃತಿ ರಚನೆಯಲ್ಲಿ ತೊಡಗಿರುವವರಲ್ಲಿ ಡಾ.ನಾ ಮೊಗಸಾಲೆಯವರು ಮೊದಲ ಶ್ರೇಣಿಯಲ್ಲಿ ನಿಲ್ಲುತ್ತಾರೆ. ನಾನು ಕಳೆದ ಒಂದೂವರೆ ದಶಕದಿಂದ ಡಾ.ನಾ.ಮೊಗಸಾಲೆಯವರು ರಚಿಸಿದ ಎಲ್ಲ ಕೃತಿಗಳನ್ನೂ ಬಹುತೇಕ ಓದಿದ್ದೇನೆ. ಕಾಂತಾವರದಲ್ಲಿ ಕುಳಿತು ಕನ್ನಡ ಕಟ್ಟುವ ಕೆಲಸವನ್ನು ಅವರು ಬಹಳ ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ಅವರ ಪರಿಸರದಲ್ಲಿ ಬಹಳಷ್ಟು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳು ನಡೆದಿವೆ. ಇವುಗಳಲ್ಲಿ ಮೊಗಸಾಲೆಯವರು ಬಹಿರಂಗದಲ್ಲಿ ಯಾವುದೇ ಚಳವಳಿಯಲ್ಲಿ ಕಾಣಿಸಿಕೊಂಡು...

ತೀರ್ಪು

ಭಾಗ 1.ಬೆಡಗು ಅವಳು ಸತ್ತಳಂತೆ' ಅವ್ವ ಹೇಳಿದಳು. ನನಗೇ ಹೇಳಿದಳು ಅಂದುಕೊಂಡೆ ನಾನು. ಮತ್ತೆ ಮತ್ತೆ ಅದನ್ನೇ ಅವ್ವ ಪುನರಾವರ್ತಿಸಿದಾಗ ನನಗೆ ಅನುಮಾನ. ಅವಳು ಹೇಳಿದ್ದು ನನಗಲ್ಲ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಳೆ ಎನ್ನುವುದು ನನಗೆ ಖಾತ್ರಿಯಾಯಿತು. ಧ್ವನಿಯಲ್ಲಿ ದುಃಖವಿತ್ತೆ, ಎಲ್ಲವೂ ಸರಿಹೋಯಿತು ಎಂಬ ಸಮಾಧಾನವಿತ್ತೆ ಒಂದೂ ಗೊತ್ತಾಗದೆ ತಬ್ಬಿಬ್ಬಾದೆ. ಅವ್ವ, ಸತ್ತದ್ದು ಯಾರು?’ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅವ್ವನ ಕಿವಿಯ ಮೇಲೆ ಬಿದ್ದಂತೆ ನನಗೆ ತೋರಲಿಲ್ಲ. ಅವಳು ತನ್ನದೇ ಲೋಕದಲ್ಲಿ ಗರ್ಕಾಗಿದ್ದಳು. ಮೆರೆಯವುದಕ್ಕೂ ಒಂದು ಲೆಕ್ಕ...

ಮನುಷ್ಯ ಬದಲಾಗಲೇಬೇಕು…

ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.. (ಒಂದು ಭೋಜನ ಮೀಮಾಂಸೆ) ಎಂಬ ನಂಬಿಕೆಯಿಂದ ಬರೆಯುತ್ತಿರುವ ಕತೆಗಾರ ಕೆ. ಸತ್ಯನಾರಾಯಣ ಅವರ `ಮನುಷ್ಯರು ಬದಲಾಗುವರೆ?’ ಕಥಾಸಂಕಲನ ಮನುಷ್ಯ ಜಗತ್ತಿನ ಹಲವು ಸೂಕ್ಷ್ಮ ಸುಳಿಹುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಕತೆಗಾರನ ಮುಂದೆ ವಿಶಾಲವಾದ, ವಿಚಿತ್ರವಾದ ಜಗತ್ತಿದೆ. ಅವರವರ ನೋಟಕ್ಕೆ ತಕ್ಕಂತೆ ಅದು ಅವರಿಗೆ ದಕ್ಕುತ್ತದೆ. ಹಾಗೆ ದಕ್ಕಿಸಿಕೊಳ್ಳುವಾಗ ಅವರಿಗೆ ಜವಾಬ್ದಾರಿಯೂ ಇರುತ್ತದೆ....

ಮರುಳ ಮುನಿಯನ ಕಗ್ಗ ಒಂದು ದರ್ಶನ ಕಾವ್ಯ

ಮಂಕು ತಿಮ್ಮನ ಕಗ್ಗಕ್ಕಿಂತ ಒಂದು ಮೆಟ್ಟಿಲು ಮೇಲಿನ ವೈಚಾರಿಕತೆ ಇದರಲ್ಲಿದೆ (ನಾನು ಮರುಳ ಮುನಿಯನ ಕಗ್ಗವನ್ನು ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 1984ರಲ್ಲಿ. ಪಠ್ಯಕ್ರಮದ ಭಾಗವಾಗಿ ಬರೆದ ವಿಮರ್ಶೆ ಇದು. ಸುಮಾರು 38 ವರ್ಷಗಳ ಹಿಂದೆ.) ಅಕಸ್ಮಾತ್ತಾಗಿ ಡಿವಿಜಿ ಕನ್ನಡಿಗರ ನೆನಪಿನಿಂದ ಮರೆಯಾದರೂ ಅವರ ಮಂಕುತಿಮ್ಮ ಮಾತ್ರ ಮರೆಯಾಗಲಾರ. ಡಿವಿಜಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರು ಟ್ಟುಹೋದ ಸಾಹಿತ್ಯ ರಾಶಿ ಮಾತ್ರ ಇದೆ. ಅವರು ನಿಧನರಾಗಿ ಒಂಬತ್ತು ವರ್ಷಗಳ ನಂತರ (1984) ಅವರದೇ ಆದ ಕೃತಿಯೊಂದು...