ಗಳಸ್ಯ ಕಂಠಸ್ಯ

*ದ್ವೈತ ಅಳಿದ ಅದ್ವೈತ ಭಾವ ಅವರಿಬ್ಬರೂ ತುಂಬಾ ಸ್ನೇಹಿತರು ಎಂದು ಹೇಳುವಾಗ `ಗಳಸ್ಯ ಕಂಠಸ್ಯ' ಎಂದು ಹೇಳುತ್ತಾರೆ. ಒಂದೇ ತಾಟಿನಲ್ಲು ಊಟ ಮಾಡುವವರು ಎಂದೋ, ಚಡ್ಡಿ ದೋಸ್ತರು ಎಂದೋ, ಲಂಗೋಟಿ ಸ್ನೇಹಿತರು ಎಂದೋ ಈ ಸ್ನೇಹವನ್ನು ವಿವರಿಸುವವರು ಇದ್ದಾರೆ. ಅವನ ಕಣ್ಣಿಗೆ ಇರಿದರೆ ಇವನ ಕಣ್ಣಲ್ಲಿ ನೀರು ಎನ್ನುವ ಮಾತೂ ಇದೆ. ಗಳಸ್ಯ ಕಂಠಸ್ಯ’ದಲ್ಲಿ ಏನು ವಿಶೇಷ? ಗಳ ಎಂದರೂ ಕೊರಳು ಕಂಠ ಎಂದರೂ ಕೊರಳು. ಎರಡೂ ಒಂದೇ. ಅದೊಂದು ಅವಿನಾಭಾವ ಸಂಬಂಧ. ದ್ವಿರುಕ್ತಿ. ಸ್ನೇಹದಲ್ಲಿ ಸ್ವಾರ್ಥ...

ಗರುಡಬಂಗಾಲಿ

*ಎಲ್ಲ ಕಣ್ಕಟ್ಟು, ಮೋಸ ಉತ್ತರಕನ್ನಡದ ಕರಾವಳಿ ಭಾಗದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಮೋಸ ಮಾಡುವವರನ್ನು ಕಂಡಾಗ `ಅವನೊಬ್ಬ ಗರುಡ ಬಂಗಾಲಿ' ಎಂದು ಹೇಳುತ್ತಾರೆ.ನಿನ್ನ ಗರುಡ ಬಂಗಾಲಿಯೆಲ್ಲ ನನ್ನ ಹತ್ತಿರ ನಡೆಯೋದಿಲ್ಲ’ ಎಂದೂ ಹೇಳುತ್ತಾರೆ. `ಗರುಡ ಬಂಗಾಲಿ’ ಎಂಬುದು ಮೋಸ, ಅತಿ ಚಾಣಾಕ್ಷತೆ, ಕಣ್ಕಟ್ಟು ಇತ್ಯಾದಿ ಅರ್ಥಗಳನ್ನು ಇಲ್ಲಿ ನೀಡುತ್ತದೆ. ಇದು ಗಾರುಡ ಬಂಗಾಲಿ. ಮಾತಿನ ಸೌಲಭ್ಯ ಗುಣದಿಂದಾಗಿ ಇದು ಗರುಡ ಬಂಗಾಲಿ ಎಂದಾಗಿದೆ. ಗಾರುಡ ಎಂದರೆ ಇಂದ್ರಜಾಲ, ಕಣ್ಕಟ್ಟು ಎಂಬ ಅರ್ಥವಿದೆ. ಗಾರುಡದ ಜೊತೆ ಬಂಗಾಲಿ ಏಕೆ ಸೇರಿತು?...

ಗಣಪತಿ ಮದುವೆ

*ಈ ಮದುವೆಗೆ ಎಂದೂ ಮುಹೂರ್ತ ಕೂಡಿಬರಲೇ ಇಲ್ಲ ಗಣಪತಿ ಬ್ರಹ್ಮಚಾರಿಯೋ ಅಥವಾ ಗೃಹಸ್ಥನೋ ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿ ಬಂದಿಲ್ಲ. ಕೆಲವರು ಆತ ಬ್ರಹ್ಮಚಾರಿ ಎಂದರೆ ಇನ್ನು ಕೆಲವರು ಆತನಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಹೆಂಡತಿಯರು ಎಂದು ಹೇಳುತ್ತಾರೆ. ಗಣಪತಿಯ ಜನ್ಮಕ್ಕೆ ಕಾರಣಳಾದ ಪಾರ್ವತಿಗೆ ಆತನ ಮೇಲೆ ಷಣ್ಮುಖನಿಗಂತ ಒಂದು ಗುಂಜಿ ಪ್ರೀತಿ ಹೆಚ್ಚಿಗೆ ಎಂದೇ ಹೇಳಬಹುದು. ಪ್ರೀತಿಯ ಮಗನಿಗೆ ಮದುವೆ ಮಾಡುವ ಮನಸ್ಸು ಆಕೆಗೆ. ಗಣಪತಿ ನಿನ್ನ ಮದುವೆ ಯಾವಾಗ ಮಾಡೋಣ ಎಂದು ಅಮ್ಮ...

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ

*ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ ಮೈಲಾರಕ್ಕೆ ಹೋಗುವುದಕ್ಕೆ ನೇರವಾದ ಹತ್ತಿರದ ದಾರಿಯಿದೆ. ಆದರೆ ನಮ್ಮೂರ ಗಣೇಶ ಯಾವತ್ತೂ ಆ ಹತ್ತಿರದ ದಾರಿಯಿಂದ ಹೋದವನೇ ಅಲ್ಲ. ದೂರದ ಕೊಂಕಣವನ್ನು ಸುತ್ತಿಯೇ ಮೈಲಾರಕ್ಕೆ ಹೋಗುವುದು ಅವನು ರೂಢಿ. ಗಣೇಶನಂಥವರು ಎಲ್ಲ ಕಡೆಯೂ ನಮಗೆ ಎದುರಾಗುತ್ತಾರೆ, ಬಸ್ಸಿನಲ್ಲಿ, ಕಛೇರಿಯಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಂದರೆ ಅಲ್ಲಿ. ಹೇಳುವುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಾರೆ ಇವರು. ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ. ಕೆಲವರ ಬರೆವಣಿಗೆಯೂ ಹಾಗೆಯೇ ಇರುತ್ತದೆ. ಹೇಳಬೇಕಾಗಿರುವುದನ್ನು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ ಅದಕ್ಕೆ...

ಕಂಕುಳಲ್ಲೇ ಕೂಸು ಇಟ್ಟುಕೊಂಡು ಊರೆಲ್ಲ ಹುಡುಕಿದಳು

*ಹಿತ್ತಲ ಗಿಡ ಮದ್ದಲ್ಲ ಮಗು ಕಂಕುಳಲ್ಲಿಯೇ ಇದೆ. ತನ್ನ ಮಗು ಕಳೆದುಹೋಯಿತು ಎಂದು ತಾಯಿಯೊಬ್ಬಳು ಊರಲ್ಲೆಲ್ಲ ಹುಡುಕಿದಳಂತೆ. ನಾವು ಹುಡುಕಾಡುತ್ತಿರುವ ವಸ್ತು ನಮಗೆ ಕೈಗೆಟಕುವಂತೆಯೇ ಇರುತ್ತದ. ಆದರೆ ಅದು ನಮ್ಮ ಅರಿವಿಗೆ ನಿಲುಕದೆ ಮರುಳರಂತೆ ಇರುತ್ತೇವೆ ನಾವು. ಇಂಥದ್ದನ್ನೆಲ್ಲ ಕಂಡಾಗ ಈ ಮೇಲಿನ ಮಾತನ್ನು ಹೇಳುವುದು ಸಾಮಾನ್ಯ. ಹಣ ಹಣ ಎಂದು ನಾವು ಒದ್ದಾಡುತ್ತಿರುತ್ತೇವೆ. ಅದೆಷ್ಟೋ ಬಾರಿ ನಾವು ನೆಲದಲ್ಲಿರುವ ನಿಧಿಯ ಮೇಲೆಯೇ ಅಡ್ಡಾಡಿರುತ್ತೇವೆ. ಆದರೆ ನಾವು ತುಳಿದ ಜಾಗದಲ್ಲಿಯೇ ನಿಧಿ ಇದೆ ಎಂಬುದು ನಮ್ಮ ಅರಿವಿಗೆ...

ಕಂಕಣ ತೊಡು

*ವ್ರತಸ್ಥನಾಗಿ ಕಾರ್ಯ ಆರಂಭಿಸು ಕಂಕಣ ಎಂದರೆ ಬಳೆ ಎಂಬ ಅರ್ಥವಿದೆ. ಬಳೆಯನ್ನು ತೊಡುವುದು ಹೆಂಗಸರು ಮಾತ್ರವಲ್ಲವೆ? ಗಂಡಸರಿಗೆ ಬಳೆ ತೊಡು ಎಂದು ಹೇಳಿದರೆ ಅಪಮಾನ ಮಾಡಿದಂತೆ. `ಬಳೆ ಹಾಕಿಕೊಂಡಿದ್ದೀನಾ ನಾನು?’ ಎಂದು ಅಬ್ಬರಿಸುವುದನ್ನು ಕೇಳಿದ್ದೇವೆ. ಕಂಕಣಕ್ಕೆ ಬಳೆ ಅಲ್ಲದೆ ಇನ್ನೂ ಬೇರೆ ಅರ್ಥಗಳಿವೆ. ಮಂಗಳ ಕಾರ್ಯಗಳಲ್ಲಿ ಅರಿಶಿಣದ ತುಂಡಿಗೆ ಕೆಂಪು ದಾರವನ್ನು ಕಟ್ಟಿ ಅದನ್ನು ಬಲಗೈ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತಾರೆ. ಶುಭಕಾರ್ಯದ ಆರಂಭದಲ್ಲಿ ಸಂಕಲ್ಪವನ್ನು ತೊಡುವುದರ ಸಂಕೇತ ಈ ಕಂಕಣ ತೊಡುವಿಕೆ. ಬಳೆಯನ್ನು ತೊಡುವ ಸ್ಥಳದಲ್ಲಿಯೇ ಇದನ್ನು ಕಟ್ಟಿಕೊಳ್ಳುವುದರಿಂದ...

ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ?

*ಬಲಿಗೆ ಆಯ್ಕೆ ಇರುವುದಿಲ್ಲ ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ ಎಂದೋ, ಕುರಿ ಕೇಳಿ ಮಸಾಲೆ ರುಬ್ಬುತ್ತಾರಾ ಎಂದೋ ಹೇಳುವುದನ್ನು ಹಲವು ಬಾರಿ ನಾವು ಕೇಳಿದ್ದೇವೆ. ಕೋಳಿ ತಿನ್ನುವವನು ಕೋಳಿಯ ಹತ್ತಿರ ಹೋಗಿ `ಇವತ್ತು ನಿನ್ನನ್ನು ಕೊಂದು ಸಾರು ಮಾಡಿ ತಿನ್ನುತ್ತೇನೆ, ಆಗಬಹುದೆ?’ ಎಂದು ಕೇಳಿದರೆ ಕೋಳಿ ಹೂಂ ಅನ್ನಬಹುದೆ? ಇದೇ ಮಾತು ಕುರಿಗೂ ಅನ್ವಯಿಸುತ್ತದೆ. ಯಾವ ಕೋಳಿಯನ್ನು ಕತ್ತರಿಸಬೇಕು, ಹೇಗೆ ಕತ್ತರಿಸಬೇಕು, ಎಷ್ಟು ಕೋಳಿಗಳನ್ನು ಕತ್ತರಿಸಬೇಕು ಎಂದು ನಿರ್ಧರಿಸುವವನು ಕೋಳಿಯನ್ನು ತಿನ್ನುವವನೋ ಅಡುಗೆಯನ್ನು ಮಾಡುವವನೋ ಆಗಿರುತ್ತಾರೆ. ಕೋಳಿಯ...

ಕೊಟ್ರೆ ವರ ಇಟ್ರೆ ಶಾಪ

*ಅದ್ಭುತ ಸಾಮರ್ಥ್ಯ ಇದು ಸೂಚಿಸುತ್ತದೆ ಜೇನು ಸಿಹಿಯಾಗಿದೆ ಎಂದು ಎದುರು ಇದ್ದವನಿಗೆ ಸಾವಿರ ಸಲ ಹೇಳಿದರೂ ಅದರ ಅನುಭವ ಅವನಿಗೆ ಆಗುವುದಿಲ್ಲ. ಅದೇ ಒಂದು ಹನಿ ಜೇನನ್ನು ಆತನ ನಾಲಿಗೆಯ ಮೇಲೆ ಹಾಕಿದರೆ ಸಿಹಿ ಯಾವ ವಿವರಣೆ ಇಲ್ಲದೆಯೇ ಅವನಿಗೆ ಅರಿವಾಗುವುದು. ಅಕ್ಷರಗಳಿಗೆ ನಿಲುಕದ ಅದೆಷ್ಟೋ ಅದ್ಭುತಗಳು ಇವೆ. ಅವನ್ನು ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವರ್ಣಿಸುತ್ತಲೂ ಇರುತ್ತೇವೆ. ಇದಕ್ಕಾಗಿ ಶಬ್ದದ ವಾಚ್ಯಾರ್ಥವನ್ನು ಮೀರಿ ವ್ಯಂಗ್ಯಾರ್ಥದ ನೆರವನ್ನು ಪಡೆದುಕೊಳ್ಳುತ್ತೇವೆ. ಇಲ್ಲಿ ಒಬ್ಬ ವ್ಯಕ್ತಿ ಮಹಾನ್‌ ಸಾಮರ್ಥ್ಯದವನು ಎಂದು...

ಕೊಕ್ಕೆಯಲ್ಲಿ ಜೇನು ಕೊಯ್ಯುವುದು

*ಕಷ್ಟಪಡದೆ ಸುಖ ಇಲ್ಲ ಸುಖ ಪಡಬೇಕು ಎಂದರೆ ಕಷ್ಟ ಪಡಲೇಬೇಕು. `ಕೈ ಕೆಸರಾದರೆ ಬಾಯಿ ಮೊಸರು' ಎಂದು ಹೇಳುತ್ತಾರಲ್ಲ. ಹಾಗೆ ಇದು. ಕಷ್ಟಪಡದೆ ಸುಖಪಡುವ ಆಸೆಯಲ್ಲಿದ್ದವರನ್ನು ಕಂಡಾಗಕೊಕ್ಕೆಯಲ್ಲಿ ಜೇನು ಕೊಯ್ಯುವವರು ಇವರು’ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇಲ್ಲಿ ಕೊಯ್ಯುವುದು ಎದರೆ ಕೀಳುವುದು. ಕೊಕ್ಕೆಯಿಂದ ಜೇನನ್ನು ಕಿತ್ತರೆ ಅದು ನಮ್ಮ ಕೈಗೆ ಸಿಗದೆ ನೆಲಕ್ಕೆ ಬಿದ್ದು ತಿನ್ನಲು ಆಗದ ಸ್ಥಿತಿಯನ್ನು ತಲುಪುತ್ತದೆ. ಆದರೆ ಜೇನಿನ ಸ್ವಾದ ನಮಗೆ ಸಿಗಬೇಕೆಂದರೆ ಜೇನಿನ ಹುಟ್ಟಿಗೆ ನಾವು ಕೈ ಹಚ್ಚಬೇಕು. ಆಗ...

ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ

*ಸೋಲನ್ನು ಒಪ್ಪಿಕೊಳ್ಳಲಾಗದ ದೊಡ್ಡಸ್ಥಿಕೆ ಇದು ಒಬ್ಬ ಜಟ್ಟಿ ಇದ್ದನಂತೆ. ಕುಸ್ತಿ ನಡೆಯಿತು. ಎದುರಾಳಿ ಅವನನ್ನು ಎತ್ತಿ ಒಗೆದು ಚಿತ್‌ ಮಾಡಿಬಿಟ್ಟ. ಅಖಾಡಾದಿಂದ ಹೊರಕ್ಕೆ ಬಂದ ಸೋತ ಜಟ್ಟಿ, ನನ್ನನ್ನೇನೋ ಅವನು ಕೆಳಕ್ಕೆ ಹಾಕಿದ. ಆದರೆ ನನ್ನ ಮೀಸೆಗೆ ಮಾತ್ರ ಮಣ್ಣು ಹತ್ತಲಿಲ್ಲ ಎಂದು ತನ್ನ ಪೊಗದಸ್ತಾದ ಮೀಸೆಯ ಮೇಲೆ ಕೈಯಾಡಿಸಿಕೊಂಡನಂತೆ. ರಾಜಕಾರಣಿಗಳು ಚುನಾವಣೆಯ ಫಲಿತಾಂಶ ಬಂದ ಬಳಿಕ ತಮ್ಮ ಸೋಲನ್ನು ವಿಶ್ಲೇಷಿಸುವುದನ್ನು ಕೇಳಿದಾಗ ಈ ಮಾತು ನೆನಪಾಗುತ್ತದೆ. ತಮಗೆ ಸ್ಥಾನಗಳು ಕಡಿಮೆ ಬಂದಿವೆ ನಿಜ, ಆದರೆ ಪಡೆದ...