ಪುಸ್ತಕದ ಬದನೆಕಾಯಿ

*ಬದುಕಿಗೆ ಲೋಕಜ್ಞಾನ ಬಲು ಅಗತ್ಯ ನಿನಗೇನು ಗೊತ್ತು ಪುಸ್ತಕದ ಬದನೆಕಾಯಿ ಎಂದು ಮನೆಯಲ್ಲಿದ್ದ ಹಿರಿಯರು ಶಾಲೆ ಕಾಲೇಜು ಕಟ್ಟೆ ಹತ್ತಿ ಎಲ್ಲವೂ ತಮಗೆ ಗೊತ್ತಿದೆ ಎಂದು ಅಹಂನಿಂದ ವರ್ತಿಸುವ ಮಕ್ಕಳಿಗೆ ಗದರುವುದನ್ನು ಕೇಳಿದ್ದೇವೆ. ಪುಸ್ತಕ ಓದಿದವರಿಗೆ ಬದನೆಕಾಯಿಯ ಚಿತ್ರ ನೋಡಿ ಗೊತ್ತಿರುತ್ತದೆ. ಆದರೆ ಅದನ್ನು ಹೇಗೆ ಬೆಳೆಯುತ್ತಾರೆ, ಅದರಿಂದ ಏನೇನು ಮಾಡಬಹುದು, ಆರೋಗ್ಯಕ್ಕೆ ಅದು ಪೂರಕವೋ ಮಾರಕವೋ ಇತ್ಯಾದಿ ಗೊತ್ತಿರುತ್ತದೆ ಎಂದು ಹೇಳಲು ಬರುವುದಿಲ್ಲ. ಬದುಕಿನ ಅನುಭವ ಇದನ್ನೆಲ್ಲ ಕಲಿಸಿಕೊಡುತ್ತದೆ. ಜ್ಞಾನಾರ್ಜನೆಗೆ ಎರಡು ರೀತಿಗಳನ್ನು ಪ್ರಾಜ್ಞರು ಹೇಳಿದ್ದಾರೆ....

ನಂದೋರಾಯನ ದರ್ಬಾರು

*ಸಂಪತ್ತು ಇದ್ದಾಗ ಬೇಕಾಬಿಟ್ಟಿ ಖರ್ಚು ಮಾಡುವವ ಅತಿಯಾಗಿ ದುಂದುವೆಚ್ಚ ಮಾಡುತ್ತಿರುವುದನ್ನು ಕಂಡಾಗ, ವೈಭವದ ಜೀವನ ನಡೆಸುವವರನ್ನು ಕಂಡಾಗ `ಅವಂದೇನು, ನಂದೋರಾಯನ ದರ್ಬಾರು' ಎಂದು ಹೇಳಿಬಿಡುತ್ತಾರೆ. ಹಾಗೆ ಹೇಳುವವರಿಗೆ ಈ ನಂದೋರಾಯ ಯಾರು ಎನ್ನುವುದು ಗೊತ್ತಿರುವುದಿಲ್ಲ. ದಾನದಲ್ಲಿ ಪ್ರಸಿದ್ಧರಾದವರು ಬಲಿ ಮತ್ತು ಕರ್ಣ ಇಬ್ಬರೇ. ಈ ನಂದೋರಾಯ ಯಾರು? ಈ ಮಾತು ಹುಟ್ಟಿಕೊಂಡ ಕಾಲದಲ್ಲಿ ಮತ್ತು ಪ್ರದೇಶದಲ್ಲಿ ಇದ್ದ ಬಹುದೊಡ್ಡ ಶ್ರೀಮಂತನಿರಬೇಕು. ದಾನ ಮಾಡಿ ಮಾಡಿ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡವನಿರಬೇಕು. ಅದಕ್ಕಾಗಿಯೇಎಷ್ಟು ದಿನ ನಡೆಯುತ್ತದೆ ಈ ನಂದೋರಾಯನ ದರ್ಬಾರು?’...

ನಾಯಿ ಮುಟ್ಟಿದ ಮಡಕೆ

*ಮತ್ತೆ ಇದನ್ನು ಬಳಸುವಂತಿಲ್ಲ ಅವಳ ಬದುಕು ನಾಯಿ ಮುಟ್ಟಿದ ಮಡಕೆಯಂತಾಯ್ತು ಎಂದು ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಶೀಲ ಕಳೆದುಕೊಂಡ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಕುರಿತು ಈ ಮಾತು ಒಮ್ಮೊಮ್ಮೆ ಅನುಕಂಪವಾಗಿ ಕೆಲವೊಮ್ಮೆ ಕಟಕಿಯಾಗಿ ಹೊರಬೀಳುತ್ತದೆ. ಹಾಗೆ ನೋಡಿದರೆ ಇದನ್ನು ಪುರುಷ ಪ್ರಧಾನ ಸಮಾಜ ರೂಢಿಗೆ ತಂದದ್ದು ಎಂದು ಹೇಳಬಹುದು. ಮಡಕೆಯಲ್ಲಿ ಮಾಡಿದ ಅಡುಗೆಯನ್ನು ನಾಯಿ ಬಂದು ತಿಂದುಬಿಟ್ಟರೆ ಆ ಅಡುಗೆಯನ್ನು ತಿನ್ನುವಂತಿಲ್ಲ. ಅಷ್ಟೇ ಅಲ್ಲ ಮಡಕೆಯನ್ನೂ ಅನ್ಯ ಕೆಲಸಕ್ಕೆ ಬಳಸುವುದಿಲ್ಲ. ಮಡಕೆ ಮಾತ್ರ ತ್ಯಾಜ್ಯ. ತಾಮ್ರ...

ನಳಪಾಕ

*ಅಡುಗೆ ಪ್ರವೀಣ ಪುರುಷರು ಒಳ್ಳೆಯ ಅಡುಗೆಯನ್ನು ನಳಪಾಕ ಎಂದು ಹೊಗಳುವುದುಂಟು. ಯಾರು ಈ ನಳ? ನಳನಿಗೂ ರುಚಿಯಾದ ಅಡುಗೆಗೂ ಏನು ಸಂಬಂಧ? ನಿಷಧ ದೇಶದ ದೊರೆ ನಳ. ಆತನ ಪತ್ನಿ ದಮಯಂತಿ. ಇಬ್ಬರೂ ಅತ್ಯಂತ ಸುಂದರರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಅಗಲಿ ಇರಲಾರರು. ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇವರ ಸುಂದರ ಸಂಸಾರದ ಮೇಲೆ ಶನಿಯ ವಕ್ರದೃಷ್ಟಿ ಬೀಳುತ್ತದೆ. ಪಗಡೆಯಾಟದಲ್ಲಿ ನಳನು ಸೋತು ತನ್ನ ಸಹೋದರ ಪುಷ್ಕರನಿಗೆ ರಾಜ್ಯವನ್ನು ಒಪ್ಪಿಸಿ ಹೆಂಡತಿಯೊಂದಿಗೆ ಕಾಡಿಗೆ ಹೋಗುತ್ತಾನೆ....

ನಮಕ್‌ ಹರಾಮ್‌

*ನಂಬಿದವರಿಗೆ ದ್ರೋಹ ಬಗೆಯುವುದು ನಮಕ್‌ ಅಂದರೆ ಹಿಂದಿಯಲ್ಲಿ ಉಪ್ಪು ಎಂಬ ಅರ್ಥ. ನಮಕ್‌ ಹರಾಮ್‌ ಎಂದರೆ ನಂಬಿಕೆ ದ್ರೋಹಿ ಎಂಬ ಅರ್ಥ. ಹಿಂದಿಯಲ್ಲಿ ಇದೊಂದು ಸಾಮಾನ್ಯ ಬೈಗುಳ. ಹಿಂದಿ ಭಾಷೆಯ, ಹಿಂದಿ ಸಿನಿಮಾಗಳ ಪ್ರಭಾವದಿಂದ ಕನ್ನಡದಲ್ಲೂ ಇದು ಇಂದು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಉಂಡ ಮನೆಗೆ ದ್ರೋಹ ಬಗೆದ, ಉಂಡ ಮನೆ ಗಳ ಎಣಿಸಿದ, ಬೆನ್ನಲ್ಲಿ ಚೂರಿ ಹಾಕಿದ ಎನ್ನುವುದೂ ಇದೇ ಅರ್ಥವನ್ನು ನೀಡುತ್ತದೆ. ನಮಕ್‌ ಹಲಾಲ್‌ ಎಂಬ ಮಾತೂ ಇದೆ. ಹಲಾಲ್‌ ಎಂದರೆ ಮುಸ್ಲಿಂ ಧರ್ಮದಲ್ಲಿ ಸೇವಿಸಬಹುದು...

ನಡುರಾತ್ರೀಲಿ ಕೊಡೆ ಹಿಡಿದ

*ಅಸಹಜ ಶ್ರೀಮಂತಿಕೆ ಪ್ರದರ್ಶನಕ್ಕೆ ದಾರಿ ಕೊಡೆ ಅಂದರೆ ಛತ್ರಿಗೆ ಸಂಸ್ಕೃತದಲ್ಲಿ ಆತಪತ್ರ ಎಂದು ಹೇಳುತ್ತಾರೆ. ಅಂದರೆ ಬಿಸಿಲಿಗೆ ನೆರಳನ್ನು ಒದಗಿಸುವಂಥದ್ದು ಎಂಬ ಅರ್ಥ. ಅಂದರೆ ಕೊಡೆಯನ್ನು ಬಿಸಿಲಿನಲ್ಲಿ ಮಾತ್ರ ಹಿಡಿಯುವಂಥದ್ದು. ಬಿಸಿಲಿನಲ್ಲಿ ಹಿಡಿಯಬೇಕಾದ ಕೊಡೆಯನ್ನು ನಡುರಾತ್ರಿಯಲ್ಲಿ ಹಿಡಿದರೆ ಏನೋ ಸರಿ ಇಲ್ಲ ಎಂದು ಅರ್ಥ. ಅಲ್ಪನಿಗೆ ಐಶ್ವರ್ಯ ಬಂದಾಗ ನಡುರಾತ್ರೀಲಿ ಕೊಡೆ ಹಿಡಿದ ಎಂಬುದು ಲೋಕೋಕ್ತಿ. ಸಹಜ ಶ್ರೀಮಂತನಿದ್ದರೆ ಅವನು ಅದನ್ನು ತೋರಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ತುಂಬ ಬಡತನದಲ್ಲಿದ್ದವನಿಗೆ ಒಮ್ಮೆಲೇ ಶ್ರೀಮಂತಿಕೆ ಬಂದರೆ ನಾಲ್ಕು ಜನರಿಗೆ ತನ್ನ ಡೌಲು...

ನಕಲಿಶ್ಯಾಮ

*ಜಗವೆಲ್ಲ ನಗುತ್ತಿರಲಿ, ಜಗದಳಲು ನನಗಿರಲಿ ಎನ್ನುವವರು ಅವನೊಬ್ಬ ನಕಲಿ ಶ್ಯಾಮ ಎಂದು ಟೀಕಿಸುವುದನ್ನು ಕೇಳಿದ್ದೇವೆ. ನೀಲಮೇಘ ಶ್ಯಾಮ ಗೊತ್ತು. ಏನಿದು ನಕಲಿ ಶ್ಯಾಮ? ಸರ್ಕಸ್‌ಗಳಲ್ಲಿ ಇರುವ ಜೋಕರ್‌ಗಳನ್ನು ನಕಲಿ ಶ್ಯಾಮ ಎಂದು ಕರೆಯುತ್ತಾರೆ. ಸರ್ಕಸ್‌ಗಳಲ್ಲಿ ನಗಿಸುವುದೇ ಇವರ ಕೆಲಸ. ಫಜೀತಿಯ ಪ್ರಸಂಗಗಳಲ್ಲಿ ತಮ್ಮನ್ನು ತಾವೇ ಬೀಳಿಸಿಕೊಂಡು ಪ್ರೇಕ್ಷಕರಲ್ಲಿ ನಗುವನ್ನು ಉಕ್ಕಿಸುವುದು ಅವರ ಕಾಯಕ. ಶ್ಯಾಮ ಎಂದರೆ ಕೃಷ್ಣ. ತುಂಟಾಟಗಳನ್ನು ಮಾಡುವುದರಲ್ಲಿ ಕೃಷ್ಣ ಹೆಸರುವಾಸಿ. ಈ ಜೋಕರ್‌ಗಳೂ ಆರಂಭದಲ್ಲಿ ಕೃಷ್ಣನ ವೇಷವನ್ನು ಧರಿಸಿಕೊಂಡು ಬರುತ್ತಿದ್ದರೋ ಏನೋ? ಯಕ್ಷಗಾನದಲ್ಲಿ ಬಾಲಗೋಪಾಲರು...

ಧ್ರುವತಾರೆ

*ಶಾಶ್ವತ ಕೀರ್ತಿವಂತನಾಗು ದೇಶದ ಇತಿಹಾಸದಲ್ಲಿ ಅವರು ಧ್ರುವತಾರೆಯಾದರು ಎಂದು ವಿಶೇಷ ಸಾಧನೆ ಮಾಡಿದವರನ್ನು ವರ್ಣಿಸುವುದನ್ನು ಕೇಳಿದ್ದೇವೆ. ಧ್ರುವ ಎಂದರೆ ಸ್ಥಿರವಾದದ್ದು ಎಂಬ ಅರ್ಥವಿದೆ. ನಮ್ಮ ಪುರಾಣದಲ್ಲಿ ಧ್ರುವ ಎಂಬ ಬಾಲಕನ ಕತೆ ಬರುತ್ತದೆ. ಈತ ಉತ್ತಾನಪಾದರಾಯನ ಮಗ. ತಾಯಿ ಸುನೀತಿ. ಮಲತಾಯಿ ಸುರುಚಿ. ಮಲತಾಯಿಯ ಹಿಂಸೆಯಿಂದ ನೊಂದು ಕಾಡಿಗೆ ತೆರಳಿ ಶ್ರೀಹರಿಯನ್ನು ಕುರಿತು ತಪಸ್ಸನ್ನು ಮಾಡಿ ನಕ್ಷತ್ರ ಪದವಿಗೆ ಏರುತ್ತಾನೆ ಧ್ರುವ. ಆಗಸದಲ್ಲಿ ಧ್ರುವ ನಕ್ಷತ್ರ ದಿಕ್ಸೂಚಿಯಾಗಿ ಇಂದಿಗೂ ಇದೆ. ದಿಕ್ಕನ್ನು ತಿಳಿಯಬೇಕೆಂದರೆ ಧ್ರುವ ನಕ್ಷತ್ರವನ್ನು ನೋಡಿ...

ಧೃತರಾಷ್ಟ್ರಾಲಿಂಗನ

*ಹತ್ತಿರ ಹೋದರೆ ಅಪಾಯ ಧೃತರಾಷ್ಟ್ರನು ದುರ್ಯೋಧನ ಮೊದಲಾದ ಕೌರವರ ತಂದೆ. ಹುಟ್ಟು ಕುರುಡ. ಆತ ಕುರುಡನಾಗಿದ್ದ ಕಾರಣಕ್ಕಾಗಿಯೇ ಅವನ ತಮ್ಮನಾದ ಪಾಂಡು ಹಸ್ತಿನಾಪುರದ ರಾಜನಾಗಿದ್ದುದು ಮತ್ತು ಪಾಂಡವರಿಗೆ ರಾಜ್ಯದ ಮೇಲೆ ಹಕ್ಕು ಪ್ರಾಪ್ತವಾದದ್ದು. ಪಾಂಡು ಸತ್ತಮೇಲೆ ಅನಿವಾರ್ಯವಾಗಿ ಧೃತರಾಷ್ಟ್ರ ರಾಜನಾಗುತ್ತಾನೆ. ಈ ಧೃತರಾಷ್ಟ್ರನಲ್ಲಿ ಸಾವಿರ ಆನೆಗಳ ಬಲವಿತ್ತು. ಅವನು ಯಾರನ್ನಾದರೂ ಅಪ್ಪಿದನೆಂದರೆ ಅವರು ಸತ್ತೇ ಹೋಗುತ್ತಿದ್ದರು. ಕೌರವರೆಲ್ಲ ಸತ್ತ ಮೇಲೆ ಪಾಂಡವರು ಧೃತರಾಷ್ಟ್ರನನ್ನು ನೋಡಲು ಹೋಗುತ್ತಾರೆ. ತನ್ನ ಮಕ್ಕಳ ಸಾವಿಗೆ ಕಾರಣನಾದ ಭೀಮನ ಮೇಲೆ ಧೃತರಾಷ್ಟ್ರನಿಗೆ ಅಪಾರ...

ದ್ರಾವಿಡ ಪ್ರಾಣಾಯಾಮ

*ಸುತ್ತಿ ಬಳಸಿ ಮಾತನಾಡುವುದು ನೇರವಾಗಿ ಹೇಳಬೇಕಾದುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುವವರನ್ನು ಕಂಡಾಗ ಅದೇನು ದ್ರಾವಿಡ ಪ್ರಾಣಾಯಾಮ ಮಾಡುತ್ತಾನಪ್ಪ ಎಂದು ಮೂಗೆಳೆಯುತ್ತೇವೆ. ಸುಲಭದಲ್ಲಿ ಮಾಡುವ ಕೆಲಸವನ್ನು ಕಷ್ಟಪಟ್ಟು ಮಾಡುತ್ತಾರಲ್ಲ, ಆಗಲೂ ಇದೇ ರೀತಿ ಟೀಕಿಸುತ್ತೇವೆ. ಉಗುರಿನಲ್ಲಿ ಆಗುವ ಕಲಸಕ್ಕೆ ಕೊಡಲಿ ತಗೆದುಕೊಳ್ಳುತ್ತಾರಲ್ಲ ಹಾಗೆ ಇದು. ದ್ರಾವಿಡ ಪ್ರಾಣಾಯಾಮದ ವಿಶೇಷವೇನು? ಮೂಗನ್ನು ಹಿಡಿಯಲು ಕೈಯನ್ನು ತಲೆಯ ಹಿಂದಿನಿಂದ ತರುತ್ತಾರೆ. ನೇರವಾಗಿ ಎದುರಿನಿಂದಲೇ ಮೂಗನ್ನು ಹಿಡಿಯಬಹುದಲ್ಲವೆ? ಹೀಗೆ ಮಾಡುವುದಕ್ಕೂ ಒಂದು ಕಾರಣ ಇರಬಹುದು. ಶರೀರಕ್ಕೆ ವ್ಯಾಯಾಮ ದೊರೆಯಲಿ ಎಂಬುದು...