*ಪ್ರಾಮಾಣಿಕತೆಗೆ ಪುರಾವೆ ಒದಗಿಸುವ ಸ್ಥಿತಿ ಬರಬಾರದು

ಚಲುಮರ ಯಾವುದಕ್ಕೆ ಪ್ರಸಿದ್ಧ ಹೇಳಿ? ಈ ಮರದಿಂದ ಶೇಂದಿಯನ್ನು ಇಳಿಸುತ್ತಾರೆ. ಈ ಮರದ ಬುಡದಲ್ಲಿ ಕುಳಿತು ಏನನ್ನಾದರೂ ಕುಡಿದರೆ ಅದು ಶೇಂದಿಯಲ್ಲದೆ ಮತ್ತೇನು ಇದ್ದೀತು? ಇದು ಸಾಮಾನ್ಯವಾದ ತರ್ಕ. ಈ ರೀತಿ ತರ್ಕ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ.
ಮಜ್ಜಿಗೆಯನ್ನು ಮಾಡುವುದು ಮನೆಯಲ್ಲಿ ತಾನೆ? ಮನೆಯಲ್ಲಿ ಮಜ್ಜಿಗೆ ಕುಡಿಯದೆ ಈಚಲುಮರದ ಬುಡಕ್ಕೆ ಹೋಗಿ ಏಕೆ ಕುಡಿಯಬೇಕು?
ನಾವು ಯಾವುದೇ ಕೆಲಸವನ್ನು ಮಾಡಿದರೂ ಅದು ಪಾರದರ್ಶಕವಾಗಿರಬೇಕು. ಯಾರೂ ನಮ್ಮನ್ನು ಅನುಮಾನಿಸುವುದಕ್ಕೆ ಅವಕಾಶವನ್ನು ನೀಡಬಾರದು. ಅನುಮಾನ ಬರುವ ರೀತಿಯಲ್ಲಿ ನಮ್ಮ ವರ್ತನೆ ಇದ್ದರೆ ಅದು ನಮ್ಮ ತಪ್ಪೇ ಹೊರತು ಅನುಮಾನಿಸುವವರ ತಪ್ಪಲ್ಲ.
ಇದು ಸಾರ್ವಜನಿಕ ಬದುಕಿನಲ್ಲಿ ಇರುವವರು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಾವಿರ ಕಣ್ಣುಗಳು ಅವರನ್ನು ನೋಡುತ್ತಿರುತ್ತವೆ. ಅವರ ವಿರೋಧಿಗಳಂತೂ ಕಾಲೆಳೆಯುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ತಮ್ಮ ಪ್ರಾಮಾಣಿಕತೆಯನ್ನು ಶಂಕಿಸುವ ಅಥವಾ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿ ಬರುವಂಥ ಕೆಲಸಗಳನ್ನು ಯಾರೂ ಮಾಡಬಾರದು ಎನ್ನುವುದಕ್ಕೆ ಈ ಮಾತನ್ನು ಹೇಳುತ್ತಾರೆ.