ಕುವೆಂಪು ಸಾಹಿತ್ಯದಲ್ಲಿ ಸಾವಿನ ಅನುಸಂಧಾನ

ಸಾವೆಂಬುದು ಅನಿವಾರ್ಯದ ಸತ್ಯ. ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸಾವನ್ನು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಮಹಾಕವಿ ಕುವೆಂಪು ಅವರು ತಮ್ಮ ಸಮಗ್ರ ಸಾಹಿತ್ಯದಲ್ಲಿ ಸಾವನ್ನು ವರ್ಣಿಸಿದ ರೀತಿಯನ್ನು ಡಾ.ಟಿ.ಸಿ.ಪೂರ್ಣಿಮಾ ಮತ್ತು ಡಾ.ಮಂಜುಳಾ ಹುಲ್ಲಹಳ್ಳಿ ಸಂಶೋಧನೆ ಮಾಡಿ ‘ದಿಟದ ಮನೆ’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ಕಾಲದೇವನ ಮನೆ ದಲ್ ದಿಟಂ ದಿಟದ ಮನೆ’ ಎಂದು ಕುವೆಂಪು ಅವರೇ ಒಂದೆಡೆ ಹೇಳಿದ್ದಾರೆ. ಈ ಇಬ್ಬರು ಸಂಶೋಧಕಿಯರು ಆಯ್ಕೆ ಮಾಡಿಕೊಂಡ ವಿಷಯವೇ ಬೆರಗನ್ನು ಮೂಡಿಸುತ್ತದೆ. ಕುವೆಂಪು ಅವರ ಸಾಹಿತ್ಯವೇ ಸಾಗರದಷ್ಟು ಅಪಾರವಾದದ್ದು. ಅಂಥದ್ದರಲ್ಲಿ...

ಸನದಿ ಮೂಡಿಸಿದ ”ಸಂಚಲನ”

ಆಧುನಿಕ ಕನ್ನಡದ ಹಿರಿಯ ತಲೆಮಾರಿನ ಮುಸ್ಲಿಂ ಕವಿಗಳಲ್ಲಿ ತಟ್ಟನೆ ಪ್ರಸ್ತಾಪವಾಗುವ ಹೆಸರುಗಳು ಎಂ.ಅಕಬರ ಅಲಿ ಮತ್ತು ಪ್ರೊ.ಕೆ.ಎಸ್.ನಿಸಾರ್ ಅಹಮದ್. ಅದೇ ಸಾಲಿನ ಮತ್ತೊಂದು ಹೆಸರು ಬಿ.ಎ.ಸನದಿ. ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವ ಸನದಿಯವರು ಆಗಾಗ ಗದ್ಯದಲ್ಲೂ ಕೃಷಿ ಮಾಡಿದವರು. ವೈಚಾರಿಕ ಬರೆಹಗಳು, ವಿಮರ್ಶೆ, ವ್ಯಕ್ತಿಚಿತ್ರಗಳು, ಸಂಪಾದನೆ, ನಾಟಕ, ಅನುವಾದ, ಗೀತರೂಪಕ, ಶಿಶುಸಾಹಿತ್ಯ ಹೀಗೆ ಅವರ ಬರೆಹಗಳಲ್ಲಿ ವೈವಿಧ್ಯವಿದೆ. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ತಮ್ಮ ವೃತ್ತಿಯ ಬಹುಭಾಗವನ್ನು ಮುಂಬಯಿಯಲ್ಲಿ ಕಳೆದವರು. ಸದ್ಯ ತಮ್ಮ ನಿವೃತ್ತಿ ಜೀವನವನ್ನು...

ಇದು ಹಳ್ಳಿಕೇರಿ ಹಾದಿ

ಸಂಶೋಧನೆಯನ್ನು ಗಂಭೀರವಾಗಿ ಸ್ವೀಕರಿಸಿದ ಹೊಸ ತಲೆಮಾರಿನವರಲ್ಲಿ ಡಾ.ಎಫ್.ಟಿ.ಹಳ್ಳಿಕೇರಿಯವರ ಹೆಸರು ಮೊದಲ ಸಾಲಿನಲ್ಲಿಯೇ ಬರುವುದು. ಡಾ.ವಿವೇಕ ರೈ ಅವರು ಹೇಳಿರುವಂತೆ ಕರ್ನಾಟಕದಲ್ಲಿ ಹಸ್ತಪ್ರತಿ ಮತ್ತು ಗ್ರಂಥಸಂಪಾದನ ಅಧ್ಯಯನಗಳು ಅವಗಣಿತವಾದ ಆಧುನಿಕ ಕಾಲಘಟ್ಟದಲ್ಲಿ ತಮ್ಮ ತಾರುಣ್ಯದ ಕಾಲದಲ್ಲೇ ‘ಜನಪ್ರಿಯತೆ ಇಲ್ಲದ’ ಈ ಕ್ಷೇತ್ರಗಳಿಗೆ ತಮ್ಮನ್ನು ತೆತ್ತುಕೊಂಡು ನೋಂಪಿಯಂತೆ ಕಾಯಕದಲ್ಲಿ ತೊಡಗಿ, ನಲುವತ್ತಕ್ಕೂ ಹೆಚ್ಚು ವಿದ್ವತ್ ಹೊತ್ತಗೆಗಳಿಗೆ ತಮ್ಮ ಅಂಕಿತವನ್ನು ಹಾಕಿದವರು ಹಳ್ಳಿಕೇರಿ. ಇದೀಗ ಅವರ ಎರಡು ಕೃತಿಗಳು ಬಂದಿವೆ. ‘ಕಂಠ ಪತ್ರ ೩’ ಅವರ ಬಹುಶಿಸ್ತೀಯ ಅಧ್ಯಯನ ಲೇಖನಗಳ ಸಂಕಲನವಾದರೆ...

ಲಕ್ಷ್ಮೀನಾರಾಯಣ ಭಟ್ಟರ ಕನ್ನಡ ಸಾಹಿತ್ಯ ಚರಿತ್ರೆ

ಒಂದು ಭಾಷೆಯ ಸಾಹಿತ್ಯ ಚರಿತ್ರೆ ಎಂದರೆ ಆ ಭಾಷೆಯನ್ನಾಡುವ ಜನರ ಸಾಂಸ್ಕೃತಿಕ ಚರಿತ್ರೆಯೂ ಆಗಿರುತ್ತದೆ ಮತ್ತು ಆ ಭಾಷೆಯ ಜನರು ಬದುಕಿರುವ ಭೂ ಪ್ರದೇಶದ ಚರಿತ್ರೆಯೂ ಆಗಿರುತ್ತದೆ. ಕನ್ನಡದಂಥ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆಯೊಂದರಲ್ಲಿ ಸಾವಿರಕ್ಕೂ ಮಿಕ್ಕಿದ ವರ್ಷಗಳಲ್ಲಿ ರಚನೆಯಾಗಿರುವ ಸಾಹಿತ್ಯದ ಚರಿತ್ರೆಯನ್ನು ಬರೆಯುವುದೆಂದರೆ ಏಕ ವ್ಯಕ್ತಿಯಿಂದ ಅಸಾಧ್ಯವಾದ ಮಾತೇ ಸರಿ. ಈಗಾಗಲೆ ರಂ.ಶ್ರೀ ಮುಗಳಿಯವರು, ಮರಿಯಪ್ಪ ಭಟ್ಟರು ರಚಿಸಿದ ಸಾಹಿತ್ಯ ಚರಿತ್ರೆಗಳಿವೆ. ಆರ್.ನರಸಿಂಹಾಚಾರ್ ಅವರ ಕವಿಚರಿತೆ ಇದೆ. ಸಾಹಿತ್ಯವನ್ನು ವರ್ಗ ವ್ಯವಸ್ಥೆಯ ನೆಲೆಯಲ್ಲಿ...

ಪಾಕಿಸ್ತಾನದ ತೆಹಮಿನಾ ಬರೆದ ಸ್ತ್ರೀಶೋಷಣೆಯ ಕೈಫಿಯತ್ತು

‘ಆರನೆಯ ಹೆಂಡತಿಯ ಆತ್ಮಕಥೆ’ಯನ್ನು ಬರೆದು ಭಾರೀ ಸುದ್ದಿ ಮಾಡಿದ್ದ ತೆಹಮಿನಾ ದುರ‌್ರಾನಿಯವರು ಇದೀಗ ‘ಪೀಠಾಧಿಪತಿಯ ಪತ್ನಿ’ ಎಂಬ ಕಾದಂಬರಿಯನ್ನು ಬರೆದಿರುವರು. ಇದರ ವಸ್ತು ಕೂಡ ಸ್ತ್ರೀಶೋಷಣೆಯೇ. ಈ ಕಾದಂಬರಿಯ ಪ್ರಮುಖ ಪಾತ್ರಗಳು ಹೀರ್ ಮತ್ತು ಪೀರ್ ಸಾಯಿಬ್. ತಂದೆಯಿಲ್ಲದ ಬಡ ಕುಟುಂಬದ ಹೆಣ್ಣುಮಗಳು ಈ ಹೀರ್. ಅವಳ ತಾಯಿ ಕಷ್ಟಪಟ್ಟು ಹೇಗೋ ಗಣ್ಯವರ್ಗದ ಪೀರ್ ಸಾಯಿಬ್‌ನ ಜೊತೆ ಮಗಳ ಸಂಬಂಧವನ್ನು ಕುದುರಿಸುತ್ತಾಳೆ. ಅವನ ಸಂಬಂಧದಿಂದ ತಮ್ಮ ಸಾಮಾಜಿಕ ಅಂತಸ್ತು ಏರುವುದೆಂದೂ, ಇತರ ಹೆಣ್ಣುಮಕ್ಕಳಿಗೆ ಉತ್ತಮ ಸಂಬಂಧ ಸಿಗುವುದೆಂದೂ...

ಕೋಮಗಾತ ಮರು ಎಂಬ ನೌಕೆಯ ತ್ರಿಶಂಕು ಯಾನ

ಭಾರತೀಯರು ಸಾಹಸಪ್ರಿಯರು. ಬಹು ಹಿಂದೆಯೇ ಅವರು ಜಗತ್ತಿನ ಬೇರೆಬೇರೆ ಭೂಭಾಗಗಳಿಗೆ ವಲಸೆ ಹೋಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿ ತಮ್ಮ ಅಸ್ಮಿತೆಯನ್ನು ತೋರಿಸಿದ್ದಾರೆ. ಇದು ಕ್ರಿಸ್ತಪೂರ್ವ ಕಾಲದಿಂದಲೂ ನಡೆದುಬಂದ್ದದು. ಭಾರತದಲ್ಲಿ ಬ್ರಿಟಿಷರು ತಮ್ಮ ಸತ್ತೆಯನ್ನು ಸ್ಥಾಪಿಸಿದ ಸಂದರ್ಭದಲ್ಲಿ ಇಲ್ಲಿಯ ಬಡತನಕ್ಕೆ ಬೇಸತ್ತು ಉತ್ತಮ ಬದುಕನ್ನು ಹುಡುಕಿಕೊಂಡು, ಅಥವಾ ಅಂಥದ್ದೊಂದು ಭ್ರಮೆಯನ್ನು ಸೃಷ್ಟಿಸಿದವರ ಮಾತನ್ನು ನಂಬಿಕೊಂಡು ಕೆನಡಾ ದೇಶಕ್ಕೆ ವಲಸೆ ಹೊರಟು ಅಲ್ಲಿಂದ ತಿರಸ್ಕೃತರಾಗಿ ಮರಳಿ ತಾಯ್ನಾಡಿಗೆ ಬಂದಾಗ ಇಲ್ಲಿಯೂ ಸುಲಭದಲ್ಲಿ ಪ್ರವೇಶ ದೊರೆಯದೆ ಅತಂತ್ರರಾಗಿ ಕೆಲವರು ಸಾವನ್ನಪ್ಪಿದ...

ಸಂಶೋಧಿತ ರಾಮಾಯಣ: ವಾಸ್ತವಾಂಶ ಒರೆಗಲ್ಲಿಗೆ

ರಾಮಾಯಣದ ಮೇಲೆ ಈಗಾಗಲೆ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕೃತಿಗಳು ಬಂದಿವೆ. ವಾಲ್ಮೀಕಿ ರಾಮಾಯಣವೇ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ವಿವಿಧ ಲೇಖಕರಿಂದ ಗದ್ಯವೋ ಪದ್ಯ ರೂಪದಲ್ಲೋ ಬಂದಿದೆ. ಈ ಸಾಲಿಗೆ ಡಾ.ಪದ್ಮಾಕರ ವಿ. ವರ್ತಕ ಅವರು ಬರೆದಿರುವ ‘ವಾಸ್ತವ ರಾಮಾಯಣ’ವು ಸೇರಿದೆ. ಇದೊಂದು ವಸ್ತುನಿಷ್ಠ ಸಂಶೋಧನಾ ಗ್ರಂಥ ಎಂದು ಹೇಳಲಾಗಿದೆ. ಇದನ್ನು ಹೇಮಂತರಾಜ ಕುಲಕರ್ಣಿಯವರು ಕನ್ನಡಕ್ಕೆ ತಂದಿದ್ದಾರೆ. ವರ್ತಕ ಅವರು ಕೃತಿಯಲ್ಲಿ ವಿವಿಧ ಅಂಶಗಳ ಮೂಲವನ್ನು ಶೋಧಿಸುವುದರಲ್ಲಿ ಯಾವುದೇ ಚೌಕಾಶಿಗೆ ಒಪ್ಪಿಕೊಂಡಿಲ್ಲ. ‘ಸತ್ಯನಿಷ್ಠತೆ ಹಾಗೂ ಸತ್ಯಶೋಧನೆ ಇವು ವರ್ತಕರ...

ಶಿಖರಕ್ಕೆತ್ತುವ ಕೃತಿ

ತೆಲುಗಿನ ಜನಪ್ರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರು ಕನ್ನಡದಲ್ಲಿಯೂ ಜನಪ್ರಿಯರಾಗಿದ್ದಾರೆ. ಇದಕ್ಕೆ ಅವರ ಕೃತಿಗಳ ಅನುವಾದವೇ ಕಾರಣವಾಗಿದೆ. ಅವರ ಕೃತಿಗಳನ್ನು ಕನ್ನಡಿಸುತ್ತಿರುವವರಲ್ಲಿ ಯತಿರಾಜ್ ವೀರಾಂಬುಧಿಯವರು ಪ್ರಮುಖರು. ಇದೀಗ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ‘ಕಣಿವೆಯಿಂದ ಶಿಖರಕ್ಕೆ’ ಕನ್ನಡ ಓದುಗರಿಗೆ ದೊರೆಯುವಂತೆ ಮಾಡಿದ್ದಾರೆ ವೀರಾಂಬುಧಿಯವರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷತೆಗಳಿರುತ್ತವೆ. ಮರೆವೆಯಿಂದಲೋ ಆಲಸ್ಯದಿಂದಲೋ ಆ ವಿಶೇಷತೆಗಳು ಹೊರಬರುವುದೇ ಇಲ್ಲ. ಹನುಮಂತನಿಗೆ ಆತನ ಸಾಮರ್ಥ್ಯವನ್ನು ಬೇರೆಯವರು ಹೇಳಿದ ಮೇಲಷ್ಟೆ ಅರಿವಿಗೆ ಬರುತ್ತಿತ್ತಂತೆ. ಋಷಿಗಳ ಶಾಪದಿಂದ ಆತನಿಗೆ ಹಾಗೆ ಆಗಿತ್ತು. ತಮ್ಮ ನೈಜ...

ಸೋಲಿಲ್ಲದ ಪ್ರೀತಿಯ ಸುರಳಿ

ಭಗವಂತನನ್ನು ಸಾಮಾನ್ಯ ಮಾನವನಂತೆ ಭಾವಿಸಿ ಆತನ ಲೀಲಾವಿನೋದಗಳನ್ನು ಪ್ರೇಮ ಕಾಮ ವಿರಹಗಳನ್ನು ಚಿತ್ರಿಸುವ ಸಾಹಿತ್ಯದ ಪರಂಪರೆ ನಮ್ಮಲ್ಲಿದೆ. ಇಂಥ ಲೀಲೆಗಳನ್ನು ತೋರಿದವರಲ್ಲಿ ಶ್ರೀಕೃಷ್ಣನಿಗೆ ಅಗ್ರಸ್ಥಾನವಿದೆ. ಶ್ರೀಕೃಷ್ಣ ಹಾಗೂ ರಾಧೆಯರ ಪ್ರೇಮ, ವಿರಹಗಳು ಕವಿಗಳಿಗೆ ನಿತ್ಯನೂತನ ವಸ್ತು. ಸ.ರಘುನಾಥ ಅವರು ತಮ್ಮ ‘ಸುರಳಿ’ ಕವನ ಸಂಕಲನದಲ್ಲಿ ಇದೇ ಕೃಷ್ಣ-ರಾಧೆಯರ ಹಂಬಲ, ನೆನೆಕೆಗಳನ್ನೇ ಕಾವ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ಕೃಷ್ಣನು ಗೋಕುಲದಿಂದ ಮಥುರಾ ನಗರಕ್ಕೆ ತೆರಳಿದ ಸಂದರ್ಭವನ್ನು ವರ್ಣಿಸುತ್ತದೆ. ಕೃಷ್ಣ ಲೀಲೆಯ ಬಗ್ಗೆ ಕನ್ನಡದ ಅನೇಕ ಕವಿಗಳು...

ನಾನು ಹೀಗೆ ರೂಪುಗೊಂಡೆ

ಮರಾಠಿ ಸಾಹಿತ್ಯದಲ್ಲಿ ಆತ್ಮಕಥನಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ದಲಿತ ಸಾಹಿತ್ಯದ ಸಂದರ್ಭದಲ್ಲಿ ಬೆಂಕಿಉಂಡೆಯಂಥ ಹಲವು ಆತ್ಮಕಥನಗಳು ಬಂದವು. ಮರಾಠಿ ದಲಿತ ಸಾಹಿತ್ಯ ದೇಶದ ಉಳಿದ ಭಾಷೆಗಳ ದಲಿತ ಸಾಹಿತ್ಯವನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದಿದೆ. ಮರಾಠಿಯ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾಗಿರುವ ಭಾಲಚಂದ್ರ ಮುಣಗೇಕರ್ ‘ಮೀ ಅಸಾ ಘಡಲೋ’ ಎಂಬ ಆತ್ಮಕಥನವನ್ನು ಬರೆದಿರುವರು. ಅವರ ಬಾಲ್ಯದಿಂದ ಹೈಸ್ಕೂಲು ಶಿಕ್ಷಣ ಮುಗಿಯುವ ವರೆಗಿನ ಅವರ ಬದುಕಿನ ವಿವರಗಳು ಇದರಲ್ಲಿವೆ. ಕನ್ನಡದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಇದನ್ನು ‘ನಾನು ಹೀಗೆ ರೂಪುಗೊಂಡೆ’...