ಮೊಗಸಾಲೆಯವರ ಗಾಂಧಿ ಮಾರ್ಗ

ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್‌ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ...

ಸಹೃದಯ ವಿಮರ್ಶೆ

ಸಹೃದಯ ವಿಮರ್ಶೆ ವಿಭಾವರಿ ಭಟ್ಟರು ರಮೇಶ ಭಟ್‌‌ ಬೆಳಗೋಡು ಎಂದು ನನಗೆ ಗೊತ್ತಾಗಿದ್ದು ಅದೆಷ್ಟೋ ದಿನಗಳ ಬಳಿಕ. `ಕನ್ನಡಪ್ರಭ’ದ `ಅಕ್ಷರ ತೋರಣ’ ಪುಟಕ್ಕೆ ನಿಯಮಿತವಾಗಿ ಅವರು ವಿಮರ್ಶೆ ಬರೆಯುತ್ತಿದ್ದರು. ಹೇಳಿದ ದಿನಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಮೇಲ್ ಮಾಡುತ್ತಿದ್ದ ವಿಭಾವರಿ ಭಟ್ಟರು ನಂತರ ಫೋನ್‌ ಮಾಡಿ `ಕಳುಹಿಸಿದ್ದೇನೆ’ ಎಂದೂ ಹೇಳುತ್ತಿದ್ದರು. ಇದು ಅವರ ಕಾರ್ಯತತ್ಪರತೆ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಈ `ಶ್ರದ್ಧೆ’ ಎಂಬ ಮಾತನ್ನು ನಾನು ಒತ್ತಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ನಮ್ಮ ಸಸಂಸ್ಕೃತಿಯ ಪದ....

ಸೇತು

ಕರಾವಳಿಯ ಹೊಳೆಸಾಲಿನಲ್ಲಾದರೆ ಸೆಪ್ಟೆಂಬರ್ ಕೊನೆಯೆಂದರೆ ಗೊರಬು, ಕಂಬಳಿಯನ್ನೆಲ್ಲ ಹೊಗೆ ಅಟ್ಟಕ್ಕೆ ಸೇರಿಸುವ ಸಮಯ. ಆಕಾಶಕ್ಕೇ ತೂತುಬಿದ್ದಂತೆ ಹೊಯ್ಯುವ ಮಳೆ ಆಗಂತೂ ಇರುವುದೇ ಇಲ್ಲ. ಬಂದರೆ ಬಂತು ಹೊದರೆ ಹೋಯ್ತು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಒಂದೆರಡು ಜುಮುರು ಮಳೆ ಬಂದು ಹೋಗಿಬಿಡುತ್ತದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಉಲ್ಟಾಪಲ್ಟಾ. ಸೆಪ್ಟೆಂಬರ್ ತಿಂಗಳಲ್ಲೇ ಜೋರು ಮಳೆ. ಮೂರು ದಿನ ರಾತ್ರಿ ಮಳೆ ಸುರಿುತೆಂದರೆ ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲೆಲ್ಲ ನೀರು ನಿಂತು ಬಿಡುತ್ತಬೆ. ಪೂರ್ವಯೋಜಿತವಲ್ಲದ ಹೊಸಹೊಸ ಬಡಾವಣೆಗಳು ಈ ಬೆಂಗಳೂರಿನಲ್ಲಿ...

ಹಿಂಗೋನಿಯಾ ಗೋಶಾಲೆ ನರಕದಿಂದ ನಂದಗೋಕುಲವಾದ ಕತೆ

ಗೋವು ಇಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಅದಕ್ಕೇ ಕೃಷ್ಣನನ್ನು ಗೋಪಾಲಕೃಷ್ಣ ಎಂದೂ ಕರೆಯುವುದು. ಬೃಂದಾವನದಲ್ಲಿ ಗೋವುಗಳನ್ನು ಕಾಯುತ್ತಲೇ ಬೆಳೆದವನು ಕೃಷ್ಣ. ಬೆಣ್ಣೆಕಳ್ಳನೆಂದು ಭಕ್ತರು ಪ್ರೀತಿಯಿಂದ ಆತನಿಗೆ ಬಿರುದನ್ನೂ ನೀಡಿದ್ದಾರೆ. ಆತನ ಬಾಲಲೀಲೆಗಳಲ್ಲಿ ಬೆಣ್ಣೆಯ ಕಳ್ಳತನ, ಮೊಸರು ಗಡಿಗೆಗಳನ್ನು ಒಡೆದು ಮೊಸರು ಕುಡಿಯುವುದು ಎಲ್ಲವೂ ಸೇರಿದೆ. ಕೃಷ್ಣ ಭಕ್ತಿಯ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಗೆ ಕೃಷ್ಣ ಬೇರೆಯಲ್ಲ ಗೋವು ಬೇರೆಯಲ್ಲ. ಗೋ ಸೇವೆಯಲ್ಲಿಯೇ ಕೃಷ್ಣನನ್ನು ಕಾಣಬಹುದು ಎಂದು ಅವರು ನಂಬಿದ್ದಾರೆ. ಇದಕ್ಕೆ ಉದಾಹರಣೆ ರಾಜಸ್ಥಾನದ ಹಿಂಗೋನಿಯಾದ ಗೋಶಾಲೆಯ ಉಸ್ತುವಾರಿಯನ್ನು...

ರಾಧೆಯ ನೆಲದಲ್ಲಿ ಕೃಷ್ಣನ ಹುಡುಕಾಟ

ಶ್ರೀಕೃಷ್ಣನ ಜನ್ಮಸ್ಥಾನ ಮಥುರಾ ಮತ್ತು ಆತನು ಆಡಿ ಬೆಳೆದ ಬೃಂದಾವನಕ್ಕೆ ನೀವು ಕಾಲಿಡುತ್ತಿದ್ದಂತೆ ಕೇಳುವುದು ಒಂದೇ ನಾಮ, ಅದು ರಾಧೆ! ಜೊತೆಯಲ್ಲಿ ಹರೇರಾಮ ಹರೇಕೃಷ್ಣ, ಕೃಷ್ಣಕೃಷ್ಣ ಹರೇಹರೇ ಎಂಬ ನಾಮ ಸಂಕೀರ್ತನ. ನಿಜ ಭಕ್ತರಿಗೆ ಮಾತ್ರ ಬೃಂದಾವನ. ಕೃಷ್ಣ-ರಾಧೆಯರ ನಾಮಸ್ಮರಣೆ ಮಾಡದ ವ್ಯಕ್ತಿ ಅಲ್ಲಿ ಇಲ್ಲವೇ ಇಲ್ಲ. ದಿನ ನಿತ್ಯವೂ ಜಾತ್ರೆ. ದೇವಾಲಯಗಳಲ್ಲಿ ನೂಕುನುಗ್ಗಲು. ಹಲವು ರೀತಿಯ ಪರಿಕ್ರಮಗಳು. ಉದ್ದಂಡ ನಮಸ್ಕಾರ ಹಾಕುತ್ತಲೇ ಪರಿಕ್ರಮ ನಡೆಸುವ ಭಕ್ತಿಯ ಪರಾಕಾಷ್ಠೆ. ವಿದೇಶಗಳಿಂದಲೂ ಭಕ್ತರ ದಂಡು. ಅವರೂ ಹರಿನಾಮ ಧರಿಸಿ,...

ನಾಗಪ್ಪಯ್ಯನ ಗರ್ವಭಂಗ

ಹೊಳೆಸಾಲಿನವರಿಗೆ ನಮ್ಮೂರಿನ ನಾಗಪ್ಪಯ್ಯನವರ ಪರಿಚಯ ಇಲ್ಲದೇ ಇಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿಯೇ ಅವರು ಮೂಲ್ಕಿ ಪರೀಕ್ಷೆಗೆ ಕಟ್ಟಿದ್ದವರಂತೆ. ಆದರೆ ಪಾಸಾಗಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯಬಹುದಿತ್ತು. ಆದರೆ ಏಕೋ ಏನೋ ಅವರು ಸರ್ಕಾರಿ ನೌಕರಿಗೆ ಹೋಗಲಿಲ್ಲ. ನಮ್ಮೂರಿನ ಅಕ್ಷರ ಬಲ್ಲ ಕೆಲವೇ ಕೆಲವು ಜನರಲ್ಲಿ ನಾಗಪ್ಪಯ್ಯ ಪ್ರಮುಖರಾಗಿದ್ದರು. ನಮ್ಮೂರಿಗೆ ಬರುವ ಶಾಲೆಯ ಮೇಸ್ಟ್ರು, ಕಂದಾಯ ಇಲಾಖೆಯ ಶಾನುಭೋಗರನ್ನು ಬಿಟ್ಟರೆ ಹೆಚ್ಚು ಕಾಯಿದೆ ಜ್ಞಾನ ನಾಗಪ್ಪಯ್ಯನವರಲ್ಲಿತ್ತು. ಊರ ಜನರು ತಮಗೆ ಸರ್ಕಾರದಿಂದ ಏನಾದರೂ ಕೆಲಸವಾಗಬೇಕಿದ್ದರೆ ಅದಕ್ಕೆ...

ನಿತ್ಯ ಶುದ್ಧಿಯ ಪ್ರಮಾಣದಿಂದ ತಪ್ಪಿಸಿಕೊಂಡ ಸುಬ್ಬಿಯ ಕತೆ

ಹೊಳೆಸಾಲು ಎಂದರೆ ನೆಗಸು, ಯಕ್ಷಗಾನ, ಕೋಳಿಅಂಕ, ತೇರು, ಊರಹಬ್ಬ ಎಲ್ಲ ಇದ್ದಿದ್ದೇ. ಈ ಪ್ರದೇಶದ ಜನರ ನಂಬಿಕೆಗಳು ತರಹೇವಾರಿ ಚಿತ್ರವಿಚಿತ್ರವಾದದ್ದು. ನಂಬಿಕೆ ಎನ್ನುವುದು ತೀರ ಖಾಸಗಿಯಾದದ್ದು ಮತ್ತು ಅವರವರಿಗೆ ಸಂಬಂಧಪಟ್ಟ ವಿಷಯ. ಇದು ದೇವರ ಅಸ್ತಿತ್ವದ ಕುರಿತು ಇರಬಹುದು, ತಾನು ಇವತ್ತು ಈ ಅಂಗಿಯನ್ನು ತೊಟ್ಟು ಹೊರಗೆ ಹೊರಟರೆ ಕಾರ್ಯಸಿದ್ಧಿಯಾಗುತ್ತದೆ ಎಂದುಕೊಳ್ಳುವವರೆಗೂ ಇರಬಹುದು. ಮನೆಯಿಂದ ಹೊರಗೆ ಹೊರಡುವಾಗ ಬೋಳು ತಲೆಯವರು ಎದುರಾದರೆ ಕೆಲಸವಾಗುವುದಿಲ್ಲ ಎಂದುಕೊಳ್ಳುವಂಥ ತರ್ಕಕ್ಕೆ ನಿಲುಕದ ನಂಬಿಕೆಗಳೂ ಇವೆ. ಕೆಲವು ನಂಬಿಕೆಗಳ ಬೆನ್ನು ಬಿದ್ದರೆ ಅದೇನೇನೋ...

ವಕೀಲರು ಹೇಳಿದ ಆತ್ಮಹತ್ಯೆಯ ಕತೆ

ಹೊಳೆಸಾಲಿನವರ ಜಗಳಗಳು ಕೋರ್ಟು, ಪೊಲೀಸ್ ಠಾಣೆ ಮಟ್ಟಿಲೇರಿದರೆ ಅದನ್ನು ಸುಧಾರಿಸಲು ವಕೀಲರು ಬೇಕಿತ್ತಲ್ಲವೆ, ಹೊನ್ನಾವರದಲ್ಲಿ ಖ್ಯಾತ ನಾಮರಾದ ಮೂರ್ನಾಲ್ಕು ವಕೀಲರಿದ್ದರು. ಅವರಲ್ಲಿ ಒಬ್ಬರು ಎಂ.ಎಂ.ಜಾಲಿಸತ್ಗಿ ವಕೀಲರು. ಇವರ ಕಾನೂನು ಪಾಂಡಿತ್ಯದ ಕುರಿತು ಹೊಳೆಸಾಲಿನಲ್ಲಿ ಹಲವಾರು ಕತೆಗಳು ಹರಿದಾಡುತ್ತಿದ್ದವು. ಜಾಲಿಸತ್ಗಿಯವರು ಕಾಂಗ್ರೆಸ್ ಮುಖಂಡರೂ ಹೌದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೇ ಅವರು ವಿದ್ಯಾರ್ಥಿಗಳಾಗಿ ಹೋರಾಟ ನಡೆಸಿದವರಂತೆ. ಒಮ್ಮೆ ಅವರು ರಾಜ್ಯ ವಿಧಾನ ಸಭೆಗೆ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯೂ ಆಗಿದ್ದರು.ಆ ಬಳಿಕವೇ ಅವರು ಕಾಂಗ್ರೆಸ್ ಪಕ್ಷ ಸೇರಿ ಜಿಲ್ಲಾ...

ಮನೆ ಕಟ್ಟಿದ ಅವನು ಇರವಾಣಕ್ಕೆ ಇರಲಿಲ್ಲ

ಹೊಳೆಸಾಲಿನ ಎಲ್ಲ ಊರು ಕೇರಿಯವರಿಗೆ ಪುರವೆಂದರೆ ಹೊನ್ನಾವರವೇ. ಹೊಳೆ ಬಂದು ಸಮುದ್ರ ಕೂಡುವ ಅಳವೆಯಲ್ಲಿ ಈ ಪುರವಿದೆ. ಮೊದಲೆಂದರೆ ಪುರ ಸೇರಬೇಕೆಂದರೆ ಹೊಳೆಯ ಮೂಲಕವೇ ದೋಣಿಯಲ್ಲೋ ಲಾಂಚಿನಲ್ಲೋ ಬರಬೇಕಿತ್ತು. ಇಲ್ಲವೆಂದರೆ ಹತ್ತಿರದವರು ಕಾಲುನಡಿಗೆಯಲ್ಲೇ ಬಂದು ಹೋಗುತ್ತಿದ್ದರು. ತಾವು ಬೆಳೆದುದು ಸ್ವಂತಕ್ಕೆ ಬಳಸಿ ಹೆಚ್ಚಾಗಿದ್ದನ್ನು ತಂದು ಮಾರುವುದರಿಂದ ಹಿಡಿದು ತಾವು ಬೆಳೆಯದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದರ ವರೆಗೆ ಹೊಳೆಸಾಲು ಮತ್ತು ಪುರಕ್ಕೆ ಹೊಕ್ಕು ಬಳಕೆ ಇತ್ತು. ಜೊತೆಗೆ ಪುರದವರ ಮನೆಗೆಲಸ, ಬಂದರದ ವಖಾರಗಳಿಗೆ ಟ್ರಕ್ಕುಗಳಿಂದ ಸಾಮಾನುಗಳನ್ನು ಇಳಿಸುವ ಕೂಲಿಯ...

ಮೊನ್ನಾಚಾರಿಯ ಅರ್ಧಸತ್ಯ

ಮೊನ್ನಾಚಾರಿಯನ್ನು ನಿಮಗೆ ಪರಿಚಯಿಸಬೇಕು ಎಂದುಕೊಂಡು ಒಂದು ದಶಕವೇ ಕಳೆದುಹೋಯಿತು. ನನ್ನೆದೆಯ ಕವಾಟದಲ್ಲಿ ಗೂಡುಕಟ್ಟಿಕೊಂಡು ಹುರುಸಾನಹಕ್ಕಿಯ ಹಾಗೆ ಗುಟುರು ಗುಟುರು ಕೂಗುತ್ತ, ನನ್ನ ಮರೆಯಬೇಡ ಎಂದು ಆಗಾಗ ಎಚ್ಚರಿಸುತ್ತಲೇ ಇದ್ದ ಆತ. ಹೊಳೆಸಾಲಿನ ಹತ್ತೂರಲ್ಲಿ ಮೊನ್ನಾಚಾರಿಯ ಕಸಬುದಾರಿಕೆಗೆ ಯಾರೂ ಸಾಟಿಯೇ ಇರಲಿಲ್ಲ. ಅವನಿಂದ ಕೆಲಸ ಮಾಡಿಸಿಕೊಳ್ಳಲು ಆಜುಬಾಜಿನ ಊರಿನವರೂ ಅವನಲ್ಲಿಗೆ ಬರುತ್ತಿದ್ದರು. ನಮ್ಮೂರಲ್ಲಿ ನಾಲ್ಕು ಕೇರಿಯ ಜನರಿಗೆ ಸಮಾನ ದೂರ ಇರುವ ಹಾಗೆ ಗುಡ್ಡದ ಬದಿಯಲ್ಲಿ ಮೊನ್ನಾಚಾರಿ ತನ್ನ ಸಾಲೆಯನ್ನು ತೆರೆದಿದ್ದ. ಅವನೊಬ್ಬನೇ ಅಲ್ಲಿ ಇರುತ್ತಿದ್ದುದು. ಅವನ ಸೋದರ...