ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ...
ಸತ್ಯಮೇವ ಜಯತೆ ಎಂಬುದು ಸನಾತನವಾದ ನುಡಿ. ನಮ್ಮ ನಂಬಿಕೆ, ಕ್ರಿಯೆಗಳು ಎಲ್ಲವೂ ಇದರ ಸುತ್ತಲೇ ಗಿರಕಿಹೊಡೆಯುತ್ತ ಇರುತ್ತವೆ. ಯಾವಾಗ ಈ ನಂಬಿಕೆಗೆ ಧಕ್ಕೆ ಉಂಟಾಗುತ್ತದೋ, ಅದಕ್ಕೆ ವ್ಯತಿರಿಕ್ತವಾಗಿ ಕ್ರಿಯೆಗಳು ಜರುಗಲಾರಂಭಿಸುತ್ತವೋ ಅದು ನಮ್ಮ ಪತನವನ್ನು ಸೂಚಿಸುತ್ತದೆ. ನಂಬಿಕೆ ಎಷ್ಟೊಂದು ಪರಿಣಾಮಕಾರಿ ಎಂದರೆ ವೈದ್ಯಕೀಯದಲ್ಲಿ ರೋಗಿಯ ಗುಣವಾಗುವಿಕೆಯಲ್ಲಿ ಶೇಕಡಾ ಮೂವತ್ತು ಭಾಗ ಈ ನಂಬಿಕೆಯನ್ನು ಅವಲಂಬಿಸಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಪ್ಲಾಸಿಬೋ ಎಫೆಕ್ಟ್ ಎಂದು ಹೇಳುತ್ತಾರೆ. ಕೆಲವರಿಗೆ ರೋಗವೇ ಇರುವುದಿಲ್ಲ. ತಮಗೆ ಯಾವುದೋ ರೋಗ ಬಂದಿದೆ ಎಂಬ ಭ್ರಮೆಯಲ್ಲಿ...
ದಲಿತ ಆತ್ಮಕಥನಗಳು ಮರಾಠಿಯಲ್ಲಿ ವಿಶಿಷ್ಟವಾದದ್ದು. ಒಂದು ತಳ ಸಮುದಾಯದ ನಿಗಿ ನಿಗಿ ಕೆಂಡದಂಥ ನೋವನ್ನು ಅಲ್ಲಿ ದಾಖಲಿಸುವ ರೀತಿ ಎದೆಯನ್ನು ಜಲ್ಲೆನ್ನಿಸುತ್ತದೆ. ಆರಂಭದ ರೋಷ, ರೊಚ್ಚು ಮಾಯವಾಗಿ ಸಮಾಹಿತವಾದ ಮನಃಸ್ಥಿತಿಯಲ್ಲಿ ತಮ್ಮ ಪಾಡು ತಮ್ಮದು ಎಂಬಂತೆ, ದಟ್ಟ ಕಾಡಿನ ನಡುವೆ ಮೈತುಂಬಿ ಹರಿವ ನದಿಯಂಥ ಪಕ್ವಗೊಂಡ ಶೈಲಿಯನ್ನು ಇತ್ತೀಚಿನ ಅಲ್ಲಿಯ ಇಂಥ ಬರೆಹಗಳಲ್ಲಿ ಕಾಣಬಹುದು. ಇತ್ತೀಚೆಗೆ ನಾನು ಭಾಲಚಂದ್ರ ಮುಣಗೇಕರ ಅವರ ‘ಮೀ ಅಸಾ ಘಡಲೋ’ ಎಂಬುದರ ಕನ್ನಡ ಅನುವಾದ ‘ನಾನು ಹೀಗೆ ರೂಪುಗೊಂಡೆ’ ಎಂಬುದನ್ನು ಓದಿದ್ದೆ....
ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ...
ಪ್ರೊ.ಎಂ.ಎನ್.ಶ್ರೀನಿವಾಸ್ ಅವರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞರು. ‘ದಿ ರಿಮೆಂಬರ್ಡ್ ವಿಲೇಜ್’ ಎಂಬುದು ಅವರ ಶ್ರೇಷ್ಠ ಕೃತಿ. ಶ್ರೀನಿವಾಸ್ ಅವರು ಅಮೆರಿಕದ ಸ್ಟಾನ್ಸ್ಫರ್ಡ್ನ ‘ಸೆಂಟರ್ ಫಾರ್ ಅಡ್ವಾನ್ಸ್ ಸ್ಟಡೀ ಇನ್ ಬಿಹೇವಿಯರಲ್ ಸೈಯನ್ಸಸ್’ನಲ್ಲಿ ಇದ್ದಾಗ ಅವರು ಮಾಡಿಟ್ಟುಕೊಂಡ ಟಿಪ್ಪಣಿಗಳೆಲ್ಲ ಬೆಂಕಿಗೆ ಆಹುತಿಯಾದವು. ಬಳಿಕ ಅವರು ತಮ್ಮ ಕ್ಷೇತ್ರಾನುಭವದ ನೆನಪಿನ ಆಧಾರದ ಮೇಲೆಯೇ ಬರೆದ ಕೃತಿ ಇದು. ಇದನ್ನು ‘ನೆನಪಿನ ಹಳ್ಳಿ’ ಹೆಸರಿನಲ್ಲಿ ಟಿ.ಆರ್.ಶಾಮಭಟ್ಟ ಅವರು ಕನ್ನಡಕ್ಕೆ ತಂದಿರುವರು. ಇಲ್ಲಿಯ ಕೇಂದ್ರ ಪಾತ್ರ ರಾಮಪುರ ಎಂಬ ಹಳ್ಳಿ. ಒಬ್ಬ ವ್ಯಕ್ತಿಗೆ...
ಇನ್ನು ಒಳಗಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲವೇನೋ ಎನ್ನುವಂಥ ಒತ್ತಡದಲ್ಲಿ ಸೃಜನಕ್ರಿಯೆಗೆ ತೊಡಗಿಕೊಳ್ಳುವ ಟಿ.ಕೆ.ದಯಾನಂದ ಅವರು ತಮ್ಮ ಕಥಾಸಂಕಲನ ‘ರೆಕ್ಕೆ ಹಾವು’ದಲ್ಲಿ ಎಂಟು ವಿಶಿಷ್ಟವಾದ ಕತೆಗಳನ್ನು ನೀಡಿದ್ದಾರೆ. ಈ ಎಲ್ಲ ಕತೆಗಳ ವಸ್ತು ಮತ್ತು ಪಾತ್ರಗಳು ತಳ ಸಮುದಾಯದ ಜನರು. ಒಂದೆಡೆ ಕೋಲಾರ, ಮತ್ತೊಂದೆಡೆ ತುಮಕೂರು, ಇನ್ನೊಂದೆಡೆ ಅಂಕೋಲಾ, ಹಾಗೆಯೇ ದ.ಕ.ದ ಪರಿಸರದಲ್ಲಿ ಹುಟ್ಟಿಕೊಳ್ಳುವ ಕತೆಗಳು ಒಂದೇ ಆವೇಗದಲ್ಲಿ, ಒಂದರಿಂದ ಇಪ್ಪತ್ತರ ವರೆಗಿನ ಮಗ್ಗಿಯನ್ನು ಕಂಠಪಾಠ ಮಾಡಿದ ಮಕ್ಕಳು ಅದನ್ನೆಲ್ಲ ಒಂದೇ ಉಸುರಿಗೆ ಕಕ್ಕಿ ನಿರುಂಬಳವಾಗುವ ರೀತಿಯಲ್ಲಿ, ಇನ್ನೇನೋ ಮಾಡುವುದು...
ನಾನೇನೋ ಹೇಳ್ತಾಹೇಳ್ತಾ ಹೋಗ್ಬಿಡ್ತೇನೆ, ಆದರೆ ಯಾವುದಾದರೊಂದುದಿನ ನಾನು ನೆನಪಿಗೆ ಬರ್ತೇನೆ, ಒಬ್ಬ ದೀನ ಮನುಷ್ಯ ಹೇಳ್ತಾ ಇದ್ನಲ್ಲ, ಅದು ಸರಿನೇ ಇತ್ತು ಅಂತ. (ಗಾಂಧಿ, ೧೬ ಅಕ್ಟೋಬರ್ ೧೯೪೭) ದೇಶ ಸ್ವಾತಂತ್ರ್ಯವನ್ನು ಪಡೆದ ಎರಡೇ ತಿಂಗಳಲ್ಲಿ ರಾಷ್ಟ್ರಪಿತನು ಆಡಿದ ಮಾತುಗಳು ಇವು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಖಚಿತವಾಗುತ್ತಿದ್ದಂತೆಯೇ ಅವರ ನೆಚ್ಚಿನ ಭಂಟರೇ ಗಾಂಧಿ ಇನ್ನು ಅಪ್ರಸ್ತುತ, ಗಾಂಧಿಯ ಸಿದ್ಧಾಂತಗಳು ಸ್ವತಂತ್ರ ಭಾರತಕ್ಕೆ ಅಗತ್ಯವಿಲ್ಲ, ಹಿಂದ್ ಸ್ವರಾಜ್ ಎಂಬುದು ಬಹಳ ಹಳೆಯ ಕಲ್ಪನೆ, ಈಗ ಜಾಗತಿಕವಾಗಿ ಅದೆಷ್ಟೋ ಬದಲಾವಣೆಗಲಾಗಿವೆ,...
ಸೃಜನಕ್ರಿಯೆ ಮತ್ತು ವಿಮರ್ಶನ ಕ್ರಿಯೆ ಎರಡರಲ್ಲೂ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿರುವ ಮಾಧವ ಕುಲಕರ್ಣಿಯವರು ಕನ್ನಡದ ‘ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ’ಗಳ ಸಂಕಲನ ಹಲವು ದೃಷ್ಟಿಯಿಂದ ಮಹತ್ವದ್ದಾಗಿದೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗೆ ಇದು ಕೆಲವು ಸೂತ್ರಗಳನ್ನು ಹೊಸದಾಗಿ ಸೇರಿಸುವುದರಿಂದ ವಿಮರ್ಶೆಯ ಅಭ್ಯಾಸಿಗಳು ಇದರ ಓದಿನಿಂದ ಲಾಭ ಪಡೆಯಬಹುದಾಗಿದೆ. ಅವರ ವಿಮರ್ಶೆಯ ಮೀಮಾಂಸೆಯನ್ನು ಗುರುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. ಗೋಕಾಕರ ಸಮರಸವೇ ಜೀವನ ಕಾದಂಬರಿಯ ಬಗ್ಗೆ ಇರುವ ಮೊದಲ ಲೇಖನದಲ್ಲಿ ಪಾತ್ರ ಸೃಷ್ಟಿ ಮತ್ತು ಮೌಲ್ಯವ್ಯವಸ್ಥೆಯ ಸೃಷ್ಟಿ ಹಾಗೂ...
ಸಾವೆಂಬುದು ಅನಿವಾರ್ಯದ ಸತ್ಯ. ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸಾವನ್ನು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಮಹಾಕವಿ ಕುವೆಂಪು ಅವರು ತಮ್ಮ ಸಮಗ್ರ ಸಾಹಿತ್ಯದಲ್ಲಿ ಸಾವನ್ನು ವರ್ಣಿಸಿದ ರೀತಿಯನ್ನು ಡಾ.ಟಿ.ಸಿ.ಪೂರ್ಣಿಮಾ ಮತ್ತು ಡಾ.ಮಂಜುಳಾ ಹುಲ್ಲಹಳ್ಳಿ ಸಂಶೋಧನೆ ಮಾಡಿ ‘ದಿಟದ ಮನೆ’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ಕಾಲದೇವನ ಮನೆ ದಲ್ ದಿಟಂ ದಿಟದ ಮನೆ’ ಎಂದು ಕುವೆಂಪು ಅವರೇ ಒಂದೆಡೆ ಹೇಳಿದ್ದಾರೆ. ಈ ಇಬ್ಬರು ಸಂಶೋಧಕಿಯರು ಆಯ್ಕೆ ಮಾಡಿಕೊಂಡ ವಿಷಯವೇ ಬೆರಗನ್ನು ಮೂಡಿಸುತ್ತದೆ. ಕುವೆಂಪು ಅವರ ಸಾಹಿತ್ಯವೇ ಸಾಗರದಷ್ಟು ಅಪಾರವಾದದ್ದು. ಅಂಥದ್ದರಲ್ಲಿ...
ಆಧುನಿಕ ಕನ್ನಡದ ಹಿರಿಯ ತಲೆಮಾರಿನ ಮುಸ್ಲಿಂ ಕವಿಗಳಲ್ಲಿ ತಟ್ಟನೆ ಪ್ರಸ್ತಾಪವಾಗುವ ಹೆಸರುಗಳು ಎಂ.ಅಕಬರ ಅಲಿ ಮತ್ತು ಪ್ರೊ.ಕೆ.ಎಸ್.ನಿಸಾರ್ ಅಹಮದ್. ಅದೇ ಸಾಲಿನ ಮತ್ತೊಂದು ಹೆಸರು ಬಿ.ಎ.ಸನದಿ. ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವ ಸನದಿಯವರು ಆಗಾಗ ಗದ್ಯದಲ್ಲೂ ಕೃಷಿ ಮಾಡಿದವರು. ವೈಚಾರಿಕ ಬರೆಹಗಳು, ವಿಮರ್ಶೆ, ವ್ಯಕ್ತಿಚಿತ್ರಗಳು, ಸಂಪಾದನೆ, ನಾಟಕ, ಅನುವಾದ, ಗೀತರೂಪಕ, ಶಿಶುಸಾಹಿತ್ಯ ಹೀಗೆ ಅವರ ಬರೆಹಗಳಲ್ಲಿ ವೈವಿಧ್ಯವಿದೆ. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ತಮ್ಮ ವೃತ್ತಿಯ ಬಹುಭಾಗವನ್ನು ಮುಂಬಯಿಯಲ್ಲಿ ಕಳೆದವರು. ಸದ್ಯ ತಮ್ಮ ನಿವೃತ್ತಿ ಜೀವನವನ್ನು...