ಶ್ರೀಕೃಷ್ಣನ ಜನ್ಮಸ್ಥಾನ ಮಥುರಾ ಮತ್ತು ಆತನು ಆಡಿ ಬೆಳೆದ ಬೃಂದಾವನಕ್ಕೆ ನೀವು ಕಾಲಿಡುತ್ತಿದ್ದಂತೆ ಕೇಳುವುದು ಒಂದೇ ನಾಮ, ಅದು ರಾಧೆ! ಜೊತೆಯಲ್ಲಿ ಹರೇರಾಮ ಹರೇಕೃಷ್ಣ, ಕೃಷ್ಣಕೃಷ್ಣ ಹರೇಹರೇ ಎಂಬ ನಾಮ ಸಂಕೀರ್ತನ. ನಿಜ ಭಕ್ತರಿಗೆ ಮಾತ್ರ ಬೃಂದಾವನ. ಕೃಷ್ಣ-ರಾಧೆಯರ ನಾಮಸ್ಮರಣೆ ಮಾಡದ ವ್ಯಕ್ತಿ ಅಲ್ಲಿ ಇಲ್ಲವೇ ಇಲ್ಲ. ದಿನ ನಿತ್ಯವೂ ಜಾತ್ರೆ. ದೇವಾಲಯಗಳಲ್ಲಿ ನೂಕುನುಗ್ಗಲು. ಹಲವು ರೀತಿಯ ಪರಿಕ್ರಮಗಳು. ಉದ್ದಂಡ ನಮಸ್ಕಾರ ಹಾಕುತ್ತಲೇ ಪರಿಕ್ರಮ ನಡೆಸುವ ಭಕ್ತಿಯ ಪರಾಕಾಷ್ಠೆ. ವಿದೇಶಗಳಿಂದಲೂ ಭಕ್ತರ ದಂಡು. ಅವರೂ ಹರಿನಾಮ ಧರಿಸಿ,...
ಹೊಳೆಸಾಲಿನವರಿಗೆ ನಮ್ಮೂರಿನ ನಾಗಪ್ಪಯ್ಯನವರ ಪರಿಚಯ ಇಲ್ಲದೇ ಇಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿಯೇ ಅವರು ಮೂಲ್ಕಿ ಪರೀಕ್ಷೆಗೆ ಕಟ್ಟಿದ್ದವರಂತೆ. ಆದರೆ ಪಾಸಾಗಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯಬಹುದಿತ್ತು. ಆದರೆ ಏಕೋ ಏನೋ ಅವರು ಸರ್ಕಾರಿ ನೌಕರಿಗೆ ಹೋಗಲಿಲ್ಲ. ನಮ್ಮೂರಿನ ಅಕ್ಷರ ಬಲ್ಲ ಕೆಲವೇ ಕೆಲವು ಜನರಲ್ಲಿ ನಾಗಪ್ಪಯ್ಯ ಪ್ರಮುಖರಾಗಿದ್ದರು. ನಮ್ಮೂರಿಗೆ ಬರುವ ಶಾಲೆಯ ಮೇಸ್ಟ್ರು, ಕಂದಾಯ ಇಲಾಖೆಯ ಶಾನುಭೋಗರನ್ನು ಬಿಟ್ಟರೆ ಹೆಚ್ಚು ಕಾಯಿದೆ ಜ್ಞಾನ ನಾಗಪ್ಪಯ್ಯನವರಲ್ಲಿತ್ತು. ಊರ ಜನರು ತಮಗೆ ಸರ್ಕಾರದಿಂದ ಏನಾದರೂ ಕೆಲಸವಾಗಬೇಕಿದ್ದರೆ ಅದಕ್ಕೆ...
ಹೊಳೆಸಾಲು ಎಂದರೆ ನೆಗಸು, ಯಕ್ಷಗಾನ, ಕೋಳಿಅಂಕ, ತೇರು, ಊರಹಬ್ಬ ಎಲ್ಲ ಇದ್ದಿದ್ದೇ. ಈ ಪ್ರದೇಶದ ಜನರ ನಂಬಿಕೆಗಳು ತರಹೇವಾರಿ ಚಿತ್ರವಿಚಿತ್ರವಾದದ್ದು. ನಂಬಿಕೆ ಎನ್ನುವುದು ತೀರ ಖಾಸಗಿಯಾದದ್ದು ಮತ್ತು ಅವರವರಿಗೆ ಸಂಬಂಧಪಟ್ಟ ವಿಷಯ. ಇದು ದೇವರ ಅಸ್ತಿತ್ವದ ಕುರಿತು ಇರಬಹುದು, ತಾನು ಇವತ್ತು ಈ ಅಂಗಿಯನ್ನು ತೊಟ್ಟು ಹೊರಗೆ ಹೊರಟರೆ ಕಾರ್ಯಸಿದ್ಧಿಯಾಗುತ್ತದೆ ಎಂದುಕೊಳ್ಳುವವರೆಗೂ ಇರಬಹುದು. ಮನೆಯಿಂದ ಹೊರಗೆ ಹೊರಡುವಾಗ ಬೋಳು ತಲೆಯವರು ಎದುರಾದರೆ ಕೆಲಸವಾಗುವುದಿಲ್ಲ ಎಂದುಕೊಳ್ಳುವಂಥ ತರ್ಕಕ್ಕೆ ನಿಲುಕದ ನಂಬಿಕೆಗಳೂ ಇವೆ. ಕೆಲವು ನಂಬಿಕೆಗಳ ಬೆನ್ನು ಬಿದ್ದರೆ ಅದೇನೇನೋ...
ಹೊಳೆಸಾಲಿನವರ ಜಗಳಗಳು ಕೋರ್ಟು, ಪೊಲೀಸ್ ಠಾಣೆ ಮಟ್ಟಿಲೇರಿದರೆ ಅದನ್ನು ಸುಧಾರಿಸಲು ವಕೀಲರು ಬೇಕಿತ್ತಲ್ಲವೆ, ಹೊನ್ನಾವರದಲ್ಲಿ ಖ್ಯಾತ ನಾಮರಾದ ಮೂರ್ನಾಲ್ಕು ವಕೀಲರಿದ್ದರು. ಅವರಲ್ಲಿ ಒಬ್ಬರು ಎಂ.ಎಂ.ಜಾಲಿಸತ್ಗಿ ವಕೀಲರು. ಇವರ ಕಾನೂನು ಪಾಂಡಿತ್ಯದ ಕುರಿತು ಹೊಳೆಸಾಲಿನಲ್ಲಿ ಹಲವಾರು ಕತೆಗಳು ಹರಿದಾಡುತ್ತಿದ್ದವು. ಜಾಲಿಸತ್ಗಿಯವರು ಕಾಂಗ್ರೆಸ್ ಮುಖಂಡರೂ ಹೌದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೇ ಅವರು ವಿದ್ಯಾರ್ಥಿಗಳಾಗಿ ಹೋರಾಟ ನಡೆಸಿದವರಂತೆ. ಒಮ್ಮೆ ಅವರು ರಾಜ್ಯ ವಿಧಾನ ಸಭೆಗೆ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯೂ ಆಗಿದ್ದರು.ಆ ಬಳಿಕವೇ ಅವರು ಕಾಂಗ್ರೆಸ್ ಪಕ್ಷ ಸೇರಿ ಜಿಲ್ಲಾ...
ಹೊಳೆಸಾಲಿನ ಎಲ್ಲ ಊರು ಕೇರಿಯವರಿಗೆ ಪುರವೆಂದರೆ ಹೊನ್ನಾವರವೇ. ಹೊಳೆ ಬಂದು ಸಮುದ್ರ ಕೂಡುವ ಅಳವೆಯಲ್ಲಿ ಈ ಪುರವಿದೆ. ಮೊದಲೆಂದರೆ ಪುರ ಸೇರಬೇಕೆಂದರೆ ಹೊಳೆಯ ಮೂಲಕವೇ ದೋಣಿಯಲ್ಲೋ ಲಾಂಚಿನಲ್ಲೋ ಬರಬೇಕಿತ್ತು. ಇಲ್ಲವೆಂದರೆ ಹತ್ತಿರದವರು ಕಾಲುನಡಿಗೆಯಲ್ಲೇ ಬಂದು ಹೋಗುತ್ತಿದ್ದರು. ತಾವು ಬೆಳೆದುದು ಸ್ವಂತಕ್ಕೆ ಬಳಸಿ ಹೆಚ್ಚಾಗಿದ್ದನ್ನು ತಂದು ಮಾರುವುದರಿಂದ ಹಿಡಿದು ತಾವು ಬೆಳೆಯದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದರ ವರೆಗೆ ಹೊಳೆಸಾಲು ಮತ್ತು ಪುರಕ್ಕೆ ಹೊಕ್ಕು ಬಳಕೆ ಇತ್ತು. ಜೊತೆಗೆ ಪುರದವರ ಮನೆಗೆಲಸ, ಬಂದರದ ವಖಾರಗಳಿಗೆ ಟ್ರಕ್ಕುಗಳಿಂದ ಸಾಮಾನುಗಳನ್ನು ಇಳಿಸುವ ಕೂಲಿಯ...
ಮೊನ್ನಾಚಾರಿಯನ್ನು ನಿಮಗೆ ಪರಿಚಯಿಸಬೇಕು ಎಂದುಕೊಂಡು ಒಂದು ದಶಕವೇ ಕಳೆದುಹೋಯಿತು. ನನ್ನೆದೆಯ ಕವಾಟದಲ್ಲಿ ಗೂಡುಕಟ್ಟಿಕೊಂಡು ಹುರುಸಾನಹಕ್ಕಿಯ ಹಾಗೆ ಗುಟುರು ಗುಟುರು ಕೂಗುತ್ತ, ನನ್ನ ಮರೆಯಬೇಡ ಎಂದು ಆಗಾಗ ಎಚ್ಚರಿಸುತ್ತಲೇ ಇದ್ದ ಆತ. ಹೊಳೆಸಾಲಿನ ಹತ್ತೂರಲ್ಲಿ ಮೊನ್ನಾಚಾರಿಯ ಕಸಬುದಾರಿಕೆಗೆ ಯಾರೂ ಸಾಟಿಯೇ ಇರಲಿಲ್ಲ. ಅವನಿಂದ ಕೆಲಸ ಮಾಡಿಸಿಕೊಳ್ಳಲು ಆಜುಬಾಜಿನ ಊರಿನವರೂ ಅವನಲ್ಲಿಗೆ ಬರುತ್ತಿದ್ದರು. ನಮ್ಮೂರಲ್ಲಿ ನಾಲ್ಕು ಕೇರಿಯ ಜನರಿಗೆ ಸಮಾನ ದೂರ ಇರುವ ಹಾಗೆ ಗುಡ್ಡದ ಬದಿಯಲ್ಲಿ ಮೊನ್ನಾಚಾರಿ ತನ್ನ ಸಾಲೆಯನ್ನು ತೆರೆದಿದ್ದ. ಅವನೊಬ್ಬನೇ ಅಲ್ಲಿ ಇರುತ್ತಿದ್ದುದು. ಅವನ ಸೋದರ...
ಕತೆಯನ್ನು ಹುಡುಕುತ್ತಿದ್ದವರಿಗೆ ಅದು ನಮ್ಮ ಪಕ್ಕದಲ್ಲಿಯೇ ಹರಿದಾಡುತ್ತಿದ್ದರೂ ಒಮ್ಮೊಮ್ಮೆ ಗೊತ್ತೇ ಆಗುವುದಿಲ್ಲ. ಕತೆ ಕಣ್ಣಿಗೆ ಬೀಳುವುದಿಲ್ಲ. ನನಗೂ ಒಮ್ಮೆ ಹೀಗೇ ಆಗಿತ್ತು. ನಾನು ಸಣ್ಣವನಿದ್ದಾಗ ನಮ್ಮೂರಿಗೆ ಪಾತ್ರೆಗಳನ್ನು ದುರಸ್ತಿ ಮಾಡುವ ಸಾಬಿ ಒಬ್ಬ ಬರುತ್ತಿದ್ದ. ಕಲಾಯಿ ಸಾಬಿ ಎಂದು ಅವನನ್ನು ಕರೆಯುತ್ತಿದ್ದರು. ಅವರಿಗೆ ಕಾಯಂ ವಿಳಾಸ ಎಂಬುದು ಇರುತ್ತಿರಲಿಲ್ಲ. ಸಾಬಿ ಹೋದಲ್ಲೇ ಊರು ಎಂಬಂತೆ ಒಂದಲ್ಲ ಒಂದು ಊರಿಗೆ ತಮ್ಮ ಟಂಬು ಬದಲಾಯಿಸುತ್ತಲೇ ಇರುತ್ತಿದ್ದ. ನಿಮ್ಮ ಮನೆಯಲ್ಲಿ ಮೂರ್ನಾಲ್ಕು ದಿನಗಳ ಕೆಲಸ ಇದೆ ಎಂದಾದರೆ ನಿಮ್ಮ ಮನೆಯಲ್ಲಿಯೇ...
ಸೃಜನಶೀಲ ಮನಸ್ಸು ಸದಾ ವಸ್ತುವಿನ ಹುಡುಕಾಟದಲ್ಲಿರುತ್ತದೆ. ಬರೆಹಗಾರನೊಬ್ಬ ತನ್ನ ತುಡಿತದೊಂದಿಗೆ ಸದಾ ಧ್ಯಾನದಲ್ಲಿರುತ್ತಾನೆ. ಸಖ ಸಖಿಗಾಗಿ ಕಾಯುವಂತೆ, ಕೊಟ್ಟಿಗೆಯಲ್ಲಿರುವ ಕರು ಮೇಯಲು ಹೋದ ತನ್ನ ತಾಯಿ ಯಾವಾಗ ಮರಳುವುದೋ ಎಂಬ ಕಾತರದಿಂದ ಕೂಡಿರುವಂತೆ. ಸಖಿ ಎದುರಾದಾಗ ಸಖ ಅವಳನ್ನು ಮತ್ತೆಂದೂ ತಪ್ಪಿಸಿಕೊಂಡು ಹೋಗದಂತೆ ಬಿಗಿದಪ್ಪಿಕೊಳ್ಳುತ್ತಾನೆ. ಮೇಯಲು ಹೋದ ಹಸು ಮರಳಿದಾಗ ಕರು ಕೆಚ್ಚಲಿಗೆ ಬಾಯಿಕ್ಕಿ ಒಂದೂ ಹನಿ ಉಳಿಯದಂತೆ ಹಾಲನ್ನು ಹೀರಿಬಿಡುತ್ತದೆ. ನಾನೂ ಹೀಗೇ ನನ್ನ ಕತೆಯ ಹುಡುಕಾಟದಲ್ಲಿ ಎಲ್ಲೆಲ್ಲೋ ಅಲೆದಿದ್ದೇನೆ. ಯಾವುದು ಬದುಕು, ಯಾವುದು ಕತೆ,...
ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿಗೆ ಈಗ ನೂರು ತುಂಬಿದೆ. 1899ರಲ್ಲಿ ಗುಲ್ವಾಡಿ ವೆಂಕಟರಾಯರು ಇದನ್ನು ಬರೆದರು. ಇಂದಿರಾಬಾಯಿಯ ಇನ್ನೊಂದು ಹೆಸರು ಸದ್ಧರ್ಮ ವಿಜಯ. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್್ನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. ಈ ಶತಮಾನದ 6ನೆ ದಶಕದ ವರೆಗೆ ಇದು ಪ್ರಚಾರದಲ್ಲಿಯೇ ಇರಲಿಲ್ಲ. ಸಾಹಿತ್ಯದ ವಿಮರ್ಶಕರಿಗೂ ಈ ಕೃತಿಯ ಪರಿಚಯ ಇರಲಿಲ್ಲ. 1962ರಲ್ಲಿ ಈ ಕೃತಿಯು ಎಂ. ಗೋವಿಂದ ಪೈ, ಕೆ.ಶಿವರಾಮ ಕಾರಂತ ಮತ್ತು ಸಂತೋಷಕುಮಾರ ಗುಲ್ವಾಡಿ ಇವರ ಜಂಟಿ ಪ್ರಯತ್ನದಿಂದ ಮರುಮುದ್ರಣ...
ಬದುಕು ಕಲಿಸುವಷ್ಟು ಚೆನ್ನಾಗಿ ಪಾಠವನ್ನು ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಬದುಕಿನಿಂದ ಕಲಿಯುವುದಕ್ಕೆ ನಾವು ಕಣ್ಣನ್ನು, ಕಿವಿಯನ್ನು ಸದಾ ತೆರೆದಿಟ್ಟುಕೊಳ್ಳಬೇಕು ಅಷ್ಟೇ. ಜಗತ್ತಿನ ಬಹುದೊಡ್ಡ ದಾರ್ಶನಿಕ ಗೌತಮ ಬುದ್ಧ ಕಲಿತದ್ದು ಬದುಕಿನಿಂದಲೇ. ಅವನನ್ನು ತಲ್ಲಣಗೊಳಿಸಿದ ಮೂರ್ನಾಲ್ಕು ಘಟನೆಗಳು ಅವನನ್ನು ಅದರ ಬಗೆಗೆ ಚಿಂತಿಸುವುದಕ್ಕೆ ಹಚ್ಚುತ್ತದೆ. ಅವನು ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದೂ ಬದುಕಿನಿಂದಲೇ. ತಮ್ಮ ಎಲ್ಲ ಸಮಸ್ಯೆಗಳ ಮೂಲ ಹಾಗೂ ಅವುಗಳಿಗೆ ಪರಿಹಾರ ಈ ಜಗತ್ತಿನಲ್ಲಿಯೇ ಇದೆ ಎಂಬ ಸತ್ಯವನ್ನು ಕಂಡುಕೊಂಡಾಗ ಯಾರೊಬ್ಬರೂ ನಿರಾಶರಾಗುವ ಪ್ರಸಂಗ...