ಮೌಲ್ಯಮಾಪಕರ ಮಾತು

ಮೌಲ್ಯದ ಮಾತು-1ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಹೊಸ ಮಾಧ್ಯಮವಾದ ಪತ್ರಿಕೆಯ ಪಾತ್ರವನ್ನು ಕುರಿತು ಈ ಸಂಶೋಧನ ಪ್ರಬಂಧದಲ್ಲಿ, ಸಂಶೋಧಕರಾದ ವಾಸುದೇವ ಶೆಟ್ಟಿಯವರು ಚರ್ಚೆಯನ್ನು ನಡೆಸಿದ್ದಾರೆ. ಐದು ಅಧ್ಯಾಯಗಳಿರುವ ಈ ಪ್ರಬಂಧದಲ್ಲಿ ಸ್ಥೂಲವಾಗಿ ಕಾಲಾನುಕ್ರಮಣಿಕೆಯನ್ನು ಸಂಶೋಧಕರು ಅಧ್ಯಯನ ವಿಧಾನವನ್ನಾಗಿ ಬಳಸಿಕೊಳ್ಳುತ್ತಾರಾದರೂ, ಕನ್ನಡ ಭಾಷೆ ಮತ್ತು ಬದುಕನ್ನು ಚಿತ್ರಿಸಿರುವ ಸಾಹಿತ್ಯ ಮತ್ತು ಪತ್ರಿಕೆಯ ಸಂಬಂಧವನ್ನು ನಿರ್ವಚಿಸುವಾಗ ಕರ್ನಾಟಕ ಏಕೀಕರಣದ ಘಟ್ಟವನ್ನು ಒಂದು ಕೇಂದ್ರಬಿಂದುವಾಗಿ ಬಳಸಿಕೊಂಡಿದ್ದಾರೆ.ಆಧುನಿಕ ಕನ್ನಡ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಕನ್ನಡದ ಸಣ್ಣನಿಯತಕಾಲಿಕೆಗಳು ಹಾಗೂ ಪತ್ರಿಕೆಗಳು ವಹಿಸಿದ ಪಾತ್ರವು ಅಗಾಧವಾದದ್ದು....