*ಶ್ರೀರಾಮನನ್ನೇ ಹಿಡಿದಿತ್ತು ಈ ಬಾಹು

ತ್ತು ಹಲವು ವಿಷಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವವರನ್ನು ಕಂಡಾಗ `ಅದೇನು ಕಬಂಧಬಾಹು ಅವನದು' ಎಂದು ಹೇಳುವುದಿದೆ. ನೈಸರ್ಗಿಕ ಪ್ರಕೋಪಗಳನ್ನು ಹೇಳುವಾಗಲೂಕಾಲ ತನ್ನ ಕಬಂಧಬಾಹುವನ್ನು ಬಳಸಿ ಎಲ್ಲವನ್ನೂ ತನ್ನ ಒಡಲೊಳಗೆ ಸೆಳೆದುಕೊಂಡ’ ಎಂದು ವರ್ಣಿಸುವುದಿದೆ. ಸುನಾಮಿಯಂಥ ಅನಾಹುತವಾದಾಗ ಸಮುದ್ರನಿಗೆ ಕಬಂಧಬಾಹು'ವನ್ನು ಆರೋಪಿಸುವುದಿದೆ. ಯಾರೀತ ಕಬಂಧ? ಅದೇನು ಕಬಂಧಬಾಹು? ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ ರಾಮ ಮತ್ತು ಲಕ್ಷ್ಮಣರನ್ನು ತಿನ್ನಲು ಮುಂದಾಗುತ್ತಾನೆ. ರಾಮ ಮತ್ತು ಲಕ್ಷ್ಮಣರು ಆತನ ಬಾಹುಗಳನ್ನು ಕತ್ತರಿಸಿ ಆತನನ್ನು ಕೊಲ್ಲುತ್ತಾರೆ. ಈತನನ್ನು ಕುವೆಂಪುಅಕಶೇರು ಕಶ್ಮಲ ಸರೀಸೃಪ’ ಎಂದು ವರ್ಣಿಸಿದ್ದಾರೆ.
ಈತ ವಿಶ್ವಾವಸು ಎಂಬ ಗಂಧರ್ವ. ಶಾಪದಿಂದಾಗಿ ಈತನಿಗೆ ರಾಕ್ಷಸನ ಘೋರ ರೂಪ ಬಂದಿರುತ್ತದೆ. ತನ್ನ ಘೋರ ರೂಪದೊಂದಿಗೆ ಆತ ಅನಾಹುತವನ್ನು ಮಾಡುತ್ತಿದ್ದಾಗ ದೇವೇಂದ್ರನು ಆತನ ತಲೆಯ ಮೇಲೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ತಲೆ ಮತ್ತು ಕಾಲು ಹೊಟ್ಟೆಯೊಳಗೆ ಸೇರಿಬಿಡುತ್ತದೆ. ಆತನ ಆಹಾರ ಗಳಿಕೆಗಾಗಿ, ಬಾಹುಗಳನ್ನು ಎಷ್ಟು ದೂರ ಬೇಕಾದರೂ ವಿಸ್ತರಿಸಬಹುದಾದ ಸೌಲಭ್ಯವನ್ನು ದೇವೇಂದ್ರ ಆತನಿಗೆ ಕರುಣಿಸುತ್ತಾನೆ.
ರಾಮನಿಂದಲೇ ಆತನಿಗೆ ಶಾಪ ವಿಮೋಚನೆ ಎಂಬ ಪರಿಹಾರ ಇರುತ್ತದೆ. ರಾಮನಿಂದ ಆತ ಸತ್ತಬಳಿಕ ತನ್ನ ನಿಜರೂಪವನ್ನು ತಳೆದು ರಾವಣ ಸೀತೆಯನ್ನು ಕದ್ದೊಯ್ದುದು, ಸುಗ್ರೀವ ನೆರವಾಗುತ್ತಾನೆ ಎಂಬ ವಿಷಯವನ್ನು ತಿಳಿಸುತ್ತಾನೆ.
`ಕಬಂಧಬಾಹು’ ಕರಾಳ ವಿಷಯಗಳಲ್ಲಷ್ಟೇ ಪ್ರಯೋಗವಾಗುತ್ತದೆ.