*ಶಾಶ್ವತವಲ್ಲ ಈ ವೈರಾಗ್ಯ
ಏಕೆ ಇವೆಲ್ಲ ಬೇಕಾಗಿತ್ತ? ನನಗೆ ಇವುಗಳಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನೀಗ ಎಲ್ಲವನ್ನೂ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳುವ ಮಾತನ್ನು ನಾವು ಕೇಳಿಸಿಕೊಂಡಿದ್ದೇವೆ. ಇದೇ ವ್ಯಕ್ತಿಗಳು ತಮ್ಮ ಈ ಹೇಳಿಕೆಗೆ ವಿರುದ್ಧವಾಗಿ ಸಂಪೂರ್ಣ ಆಸಕ್ತರಾಗಿ ವರ್ತಿಸಿದ್ದನ್ನೂ ನೋಡಿದ್ದೇವೆ.
ಇಂಥ ಉಲ್ಟಾ ಪಲ್ಟಾ ಜನರನ್ನು ನೋಡಿದಾಗ ಇವರದು ಸ್ಮಶಾನ ವೈರಾಗ್ಯ ಎಂದು ಹಾಸ್ಯ ಮಾಡಿದ್ದರೂ ಮಾಡಿರಬಹುದು ನೀವು. ಏನಿದು ಸ್ಮಶಾನ ವೈರಾಗ್ಯ?
ಹೆಣವನ್ನು ಸುಡುವುದಕ್ಕೆ ಸ್ಮಶಾನಕ್ಕೆ ಒಯ್ಯುತ್ತಾರೆ. ಸುಡಲು ಹೋದವರಲ್ಲಿ ಒಂದು ರೀತಿಯ ವೈರಾಗ್ಯ ಮೂಡುತ್ತದೆ. ಎಷ್ಟೆಲ್ಲ ಹೋರಾಡಿದ, ಎಷ್ಟೆಲ್ಲ ಬಡಿದಾಡಿದ, ಎಷ್ಟೆಲ್ಲ ಗಳಿಸಿಟ್ಟ. ಆದರೆ ಈಗ ಏನಾದರೂ ತೆಗೆದುಕೊಂಡು ಹೋದನೆ? ಇದ್ದಾಗಲಾದರೂ ಸುಖವಾಗಿ ಇದ್ದನೆ? ಇನ್ನು ಯಾರನ್ನೂ ನೋಯಿಸಬಾರದು, ಯಾರನ್ನೂ ವಂಚಿಸಬಾರದು. ಸತ್ತ ಮೇಲೆ ಇವೆಲ್ಲ ನಮ್ಮ ಜೊತೆ ಬರುವುದಿಲ್ಲ. ನಾವು ಮಾಡಿದ ಪಾಪ ಪುಣ್ಯ ಮಾತ್ರ ನಮ್ಮ ಜೊತೆ ಬರುವುದು ಎಂದೆಲ್ಲ ಆಲೋಚಿಸುತ್ತಿರುತ್ತೇವೆ.
ಮರುದಿನ ಮತ್ತೆ ಯಥಾಪ್ರಕಾರ ಮೊದಲಿನಂತೇ ನಮ್ಮ ಆಚಾರ ವಿಚಾರ ಎಲ್ಲ ಇರುತ್ತದೆ.
ಇಂಥ ಕ್ಷಣಭಂಗುರವಾದ ಉದರ ವೈರಾಗ್ಯ, ಹೆರಿಗೆ ವೈರಾಗ್ಯ ಇತ್ಯಾದಿಗಳೆಲ್ಲ ಇವೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.